ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದ 11 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಆಗಸ್ಟ್ 07: ಕೆಎಎಸ್ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಈಗ 11 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದೆ.
ಜುಲೈ 23ರಂದು 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು, ಈ ಪೈಕಿ ಹರ್ಷ ಗುಪ್ತಾ, ಶ್ರೀವತ್ಸ ಕೃಷ್ಣ ಅವರ ವರ್ಗಾವಣೆ ಸರ್ಕಾರದ ತಪ್ಪು ನಡೆಗೆ ಸಾಕ್ಷಿಯಾಗಿದೆ. ಹರ್ಷ ಗುಪ್ತಾ ಅವರನ್ನು ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. [ಪೂರ್ಣ ವಿವರ ಇಲ್ಲಿದೆ]
ಈ ಬಾರಿ ವರ್ಗಾವಣೆಗೊಂಡವರ ಪೈಕಿ ಅಜಯ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದಾರೆ. ಎಂ.ವಿ.ಜಯಂತಿ,ಅಂಜುಮ್ ಪರ್ವೆಜ್, ಪಲ್ಲವಿ ಆಕರಾತಿ ಅವರ ವರ್ಗಾವಣೆ ಗಮನ ಸೆಳೆಯುತ್ತದೆ.
ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಹಾಗೂ ಹುದ್ದೆಗಳ ವಿವರ:
* ಅಜಯ ಸೇಠ್-ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬೆಂಗಳೂರು.
* ಡಾ.ಪಿ.ಸಿ.ಜಾಫರ್-ರಿಜಿಸ್ಟ್ರಾರ್, ಲೋಕಾಯುಕ್ತ, ಬೆಂಗಳೂರು.
* ಎಂ.ವಿ.ಜಯಂತಿ-ಪ್ರಾದೇಶಿಕ ಆಯುಕ್ತೆ, ಬೆಂಗಳೂರು ವಿಭಾಗ, ಬೆಂಗಳೂರು.
* ಅಂಜುಮ್ ಪರ್ವೆಜ್-ವ್ಯವಸ್ಥಾಪಕ ನಿರ್ದೇಶಕ. ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು.
* ಆರ್.ಆರ್.ಜನ್ನು- ಆಯುಕ್ತ, ಧಾರ್ವಿುಕ ದತ್ತಿ ಇಲಾಖೆ ಮತ್ತು ಹೆಚ್ಚುವರಿ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು.
* ಖುಷ್ಬೂ ಗೋಯಲ್ ಚೌಧರಿ-ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಧಾರವಾಡ.
* ರಮಣದೀಪ್ ಚೌಧರಿ-ಜಿಲ್ಲಾಧಿಕಾರಿ, ಕೊಪ್ಪಳ.
* ಪಲ್ಲವಿ ಆಕರಾತಿ-ಜಿಲ್ಲಾಧಿಕಾರಿ, ತುಮಕೂರು.
* ಎಸ್.ಎಸ್. ನಕುಲ್-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಬಳ್ಳಾರಿ.
* ಡಿ.ಎಸ್.ರಮೇಶ್- ಯೋಜನಾ ನಿರ್ದೇಶಕ, ರಾಜ್ಯ ನೀರು ಮತ್ತು ಒಳಚರಂಡಿ ಯೋಜನೆ, ಬೆಂಗಳೂರು.
* ಎಂ.ಜಿ.ಹಿರೇಮಠ-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ.
ias harsha gupta karnataka government siddaramaiah bengaluru ಬೆಂಗಳೂರು ಐಎಎಸ್ ಕರ್ನಾಟಕ ಸರ್ಕಾರ ಸಿದ್ದರಾಮಯ್ಯ
English summary
Siddaramaiah led Congress government has transferred 11 IAS officers including Anjum Parvez, Pallavi Akurathi and others. Recently government transferred 18 IAS officers including Harsha Gupta, Srivatsa Krishna and others.
Story first published: Friday, August 7, 2015, 11:32 [IST]