ಚುನಾವಣಾ ವೀಕ್ಷಕರಿಗೆ ಮತದಾನ ಮುಂದೂಡುವ ಅಧಿಕಾರ
ಬೆಂಗಳೂರು,
ಏಪ್ರಿಲ್
06:
ಮತದಾನದ
ದಿನ
ಯಾವುದೇ
ಅಕ್ರಮ
ಕಂಡುಬಂದರೆ
ಮತದಾನ
ಮುಂದೂಡುವ
ಅಧಿಕಾರ
ಚುನಾವಣಾ
ವೀಕ್ಷಕರಿಗೆ
ಇದೆ
ಎಂದು
ಮುಖ್ಯ
ಚುನಾವಣಾ
ಆಯುಕ್ತ
ಓಂಪ್ರಕಾಶ್
ರಾವತ್
ತಿಳಿಸಿದರು.
ವೀಕ್ಷಕರಿಗೆ
ವಿಶೇಷ
ಅಧಿಕಾರವನ್ನು
ಚುನಾವಣಾ
ಆಯೋಗ
ನೀಡಿದೆ.
ಈ
ಅಧಿಕಾರ
ಸದ್ಬಳಕೆ
ಮಾಡಿಕೊಂಡು
ನ್ಯಾಯಸಮ್ಮತ
ಚುನಾವಣೆ
ನಡೆಸಬೇಕು
ಎಂದು
ಚುನಾವಣಾಧಿಕಾರಿಗಳು
ಹಾಗೂ
ಹಿರಿಯ
ಪೊಲೀಸ್
ಅಧಿಕಾರಿಗಳ
ಸಭೆಯಲ್ಲಿ
ಸಲಹೆ
ನೀಡಿದರು.
ನೀತಿ ಸಂಹಿತೆ ಉಲ್ಲಂಘನೆ ಆರೋಪ: ರೆಸಾರ್ಟ್ ಮೇಲೆ ದಾಳಿ
ಮತದಾರರಿಗೆ ಆಮಿಷ ಒಡ್ಡಲು ಹಣ ಮತ್ತು ವಸ್ತುಗಳನ್ನು ಹಂಚುವ ಬಗ್ಗೆ ಸಾಕಷ್ಟು ದೂರುಗಳಿವೆ. ಇವುಗಳನ್ನು ಚುನಾವಣೆ ವೀಕ್ಷಕರು ಗಂಭೀರವಾಗಿ ಪರಿಗಣಿಸಬೇಕಲ್ಲದೆ, ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಅಕ್ರಮ ಪತ್ತೆ ಸಂದರ್ಭದಲ್ಲಿ ವಾಹನಚಾಲಕರಿಂದ ಯಾವುದೇ ಅಧಿಕಾರಿ ವೀಕ್ಷಕರಿಗೆ ಅಸಹಕಾರ ತೋರಿದರೆ ಅವರ ವಿರುದ್ಧ ಚುನಾವಣಾ ವೀಕ್ಷಕರು ಕ್ರಮ ತೆಗೆದುಕೊಳ್ಳಬಹುದು. ಚುನಾವಣೆಯಲ್ಲಿ ವೀಕ್ಷಕರ ಪಾತ್ರ ಪ್ರಮುಖವಾಗಿದೆ. ಅವರಿಗೆ ವಿಶೇಷ ಅಧಿಕಾರವನ್ನೂ ಕಾಯ್ದೆಯಲ್ಲಿ ನೀಡಲಾಗಿದೆ. ಅವುಗಳನ್ನು ನಿರ್ಭೀತಿಯಿಂದ ಚಲಾಯಿಸಬೇಕು. ಅಸಹಕಾರ ತೋರಿಸುವವರ ಪಟ್ಟಿ ತಯಾರು ಮಾಡಿ ಕಳುಹಿಸಿದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜಕಾಣಿಗಳನ್ನಷ್ಟೇ ಕೇಂದ್ರೀಕರಿಸಿ ಕ್ರಮ ತೆಗೆದುಕೊಳ್ಳುತ್ತಿದದ್ ಆಯೋಗ ಈ ಬಾರಿ ಅಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.