ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ಕೊಡಿ
ಬೆಂಗಳೂರು, ಜುಲೈ 12 : ಮಂಗಳೂರು ಐಜಿ ಕಚೇರಿ (ಪಶ್ಚಿಮ ವಲಯ) ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ಬಿಜೆಪಿ ಒತ್ತಾಯಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಮಂಗಳವಾರ
ಬೆಂಗಳೂರಿನ
ಮೌರ್ಯ
ಸರ್ಕಲ್
ಬಳಿ
ಇರುವ
ಗಾಂಧಿ
ಪ್ರತಿಮೆ
ಮುಂಭಾಗದಲ್ಲಿ
ಬಿಜೆಪಿ
ರಾಜ್ಯಾಧ್ಯಕ್ಷ
ಬಿ.ಎಸ್.ಯಡಿಯೂರಪ್ಪ
ಅವರ
ನೇತೃತ್ವದಲ್ಲಿ
ಪ್ರತಿಭಟನೆ
ನಡೆಯಿತು.
ಸರ್ಕಾರ
ತಕ್ಷಣ
ಆತ್ಮಹತ್ಯೆ
ಪ್ರಕರಣದ
ತನಿಖೆಯನ್ನು
ಸಿಬಿಐಗೆ
ವಹಿಸಬೇಕು
ಎಂದು
ಯಡಿಯೂರಪ್ಪ
ಒತ್ತಾಯಿಸಿದರು.
['ಗಣಪತಿ
ಅವರ
ಜೊತೆ
ಡೈಯಿಂಗ್
ಡಿಕ್ಲೆರೇಷನ್
ಸಮಾಧಿಯಾಗಿದೆ']
'ನನಗೆ
ಮುಂದೆ
ಏನಾದರೂ
ಆದರೆ
ಅದಕ್ಕೆ
ಲೋಕಾಯುಕ್ತ
ಐಜಿಪಿ
ಪ್ರಣಬ್
ಮೊಹಾಂತಿ,
ಗುಪ್ತಚರ
ವಿಭಾಗದ
ಎಡಿಜಿಪಿ
ಎ.ಎಂ.ಪ್ರಸಾದ್
ಮತ್ತು
ಸಚಿವ
ಕೆ.ಜೆ.ಜಾರ್ಜ್
ಅವರೇ
ಕಾರಣ'
ಎಂದು
ಗಣಪತಿ
ಅವರು
ನೀಡಿರುವ
ಹೇಳಿಕೆ
ಉಲ್ಲೇಖಿಸಿದ
ಬಿಜೆಪಿ
ನಾಯಕರು
ಸಚಿವ
ಕೆ.ಜೆ.ಜಾರ್ಜ್
ರಾಜೀನಾಮೆಗೆ
ಒತ್ತಾಯಿಸಿದರು.
[ವಿಡಿಯೋ
-
ಡಿವೈಎಸ್
ಪಿ
ಗಣಪತಿ
ಕಡೇ
ಸಂದರ್ಶನ]
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಅಶೋಕ್ ಕುಮಾರ್, ಜಿ.ಎ.ಬಾವ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕೊಡವ ಸಮಾಜದ ಸದಸ್ಯರು ಬಿಜೆಪಿ ಪ್ರತಿಭಟನೆಗೆ ಕೈಜೋಡಿಸಿದ್ದಾರೆ.
ಪ್ರತಿಭಟನೆಯಲ್ಲಿ
ಮಾತನಾಡಿದ
ನಿವೃತ್ತ
ಪೊಲೀಸ್
ಅಧಿಕಾರಿ
ಅಶೋಕ್
ಕುಮಾರ್
(ಟೈಗರ್)
ಅವರು,
'ದೇವರಿಗಿಂತ
ಪವಿತ್ರವಾದ
ಖಾಕಿ
ಸಮವಸ್ತ್ರಕ್ಕೆ
ಸರ್ಕಾರ
ನೇಣು
ಹಾಕಿದೆ.
ನಾವು
ಕೊಡಗಿನ
ವೀರರು
ಆತ್ಮಹತ್ಯೆ
ಮಾಡಿಕೊಳ್ಳುವ
ಹೇಡಿಗಳಲ್ಲ.
ಪ್ರಕರಣವನ್ನು
ಸಿಬಿಐ
ತನಿಖೆಗೆ
ನೀಡಿದರೆ
ಮಾತ್ರ
ಸತ್ಯಾಂಶ
ಹೊರಬರಲಿದೆ'
ಎಂದು
ಹೇಳಿದರು.