'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ'
ಬೆಂಗಳೂರು, ಫೆಬ್ರವರಿ 26 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. 'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ' ಎಂದು ಡಾ.ಸುಧಾಕರ ಶೆಟ್ಟಿ ಅವರು ಹೇಳಿದ್ದಾರೆ. 'ಸುಧಾಕರ ಶೆಟ್ಟಿ ಅವರನ್ನು ನಾನು ಭೇಟಿಯಾಗಿಯೇ ಇಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.
ಬೆಂಗಳೂರಿನಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ್ದ
ಎಚ್.ಡಿ.ಕುಮಾರಸ್ವಾಮಿ
ಅವರು,
'ಸಿದ್ದರಾಮಯ್ಯ
ಅವರ
ಕೈಯಲ್ಲಿರುವ
ವಾಚ್
ಡಾ.ಸುಧಾಕರ
ಶೆಟ್ಟಿ
ಅವರದ್ದು.
ವಾಚ್
ಕಳೆದು
ಹೋಗಿರುವ
ಬಗ್ಗೆ
7/5/2015ರಂದು
ಅವರು
ಪೊಲೀಸ್
ಠಾಣೆಗೆ
ಈ
ಕುರಿತು
ದೂರು
ನೀಡಿದ್ದಾರೆ.
ದೂರಿನ
ಬಗ್ಗೆ
ನಿಖರವಾದ
ತನಿಖೆಯಾದರೆ.
ಸತ್ಯಾಂಶ
ಹೊರಬರಲಿದೆ'
ಎಂದು
ಹೇಳಿದ್ದರು.
[ಗಡಿಯಾರದ
ಗಲಾಟೆ,
ಎಚ್ಡಿಕೆ
ಬುಟ್ಟಿಯಲ್ಲಿ
ಹೊಸ
ಹಾವು!]
'ನನ್ನ ಸ್ನೇಹಿತರ ಮೂಲಕ ಸುಧಾಕರ ಶೆಟ್ಟಿ ಅವರನ್ನು ನಾನು ಭೇಟಿ ಮಾಡಿದ್ದೆ. ಆಗ ವಾಚ್ ನನ್ನದು ಎಂದು ಅವರು ಹೇಳಿದ್ದರು. ವಜ್ರ ಖಚಿತ ವಾಚ್, ರೋಲೆಕ್ಸ್ ವಾಚ್, ವಜ್ರ ಖಚಿತ ಉಂಗುರ, ವಜ್ರದ ಹರಳುಗಳ್ಳುಳ್ಳ ಕೈ ಗಡಿಯಾರ ಮನೆಯಿಂದ ನಾಪತ್ತೆಯಾಗಿದೆ ಎಂದು ಅವರು ದೂರು ನೀಡಿದ್ದಾರೆ' ಎಂದು ಹೇಳಿದ್ದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]
ಸುಧಾಕರ ಶೆಟ್ಟಿ ಸ್ಪಷ್ಟನೆ : ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿ ಬಳಿಕ ಟಿವಿ9 ಜೊತೆ ಮಾತನಾಡಿದ ಡಾ.ಸುಧಾಕರ ಶೆಟ್ಟಿ ಅವರು 'ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ. ನನ್ನ ಮನೆಯಲ್ಲಿರುವ ವಾಚ್ ಕಳ್ಳತನವಾಗಿರುವುದು ನಿಜ. ಅದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ನನ್ನದಲ್ಲ' ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಯೂ ಟರ್ನ್ : 'ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ವಾಚ್ ಡಾ.ಸುಧಾಕರ ಶೆಟ್ಟಿ ಅವರದ್ದು ಎಂದು ಹೇಳಿದ್ದ ಕುಮಾರಸ್ವಾಮಿ ಅವರು ಕೆಲವೇ ಗಂಟೆಗಳಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ. ಸುಧಾಕರ ಶೆಟ್ಟಿ ಅವರನ್ನು ನಾನು ಭೇಟಿ ಮಾಡಿಲ್ಲ. ಅವರ ಸ್ನೇಹಿತರನ್ನು ನಾನು ಭೇಟಿಯಾಗಿದ್ದೆ' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತನಿಖೆಯ ಹಂತದಲ್ಲಿದೆ : ಡಾ.ಸುಧಾಕರ ಶೆಟ್ಟಿ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಸ್.ಆರ್.ಚರಣ್ ರೆಡ್ಡಿ ಹೇಳಿದ್ದಾರೆ. 2015ರ ಜುಲೈ 7ರಂದು ಸುಧಾಕರ ಶೆಟ್ಟಿ ಅವರು ದೂರು ನೀಡಿದ್ದಾರೆ. 2 ರೋಲಕ್ಸ್, 1 ಶೆಫರ್ಡ್ ವಾಚು ಮತ್ತು ಸ್ವಲ್ಪ ಚಿನ್ನಾಭರಣ ಕಳುವಾಗಿದೆ ಎಂದು ದೂರು ನೀಡಿದ್ದಾರೆ, ತನಿಖೆ ನಡೆಯುತ್ತಿದೆ ಎಂದು ಚರಣ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.