ಇಂದಿನಿಂದ ಬೆಂಗಳೂರು-ಕೆಮ್ಮಣ್ಣುಗುಂಡಿ ಮಧ್ಯೆ ನೇರ ಬಸ್ ಸಂಚಾರ
ಬೆಂಗಳೂರು, ಆಗಸ್ಟ್ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್'ಟಿಸಿ) ಬೆಂಗಳೂರು ಮತ್ತು ರಾಜ್ಯದ ಪ್ರಖ್ಯಾತ ಪ್ರವಾಸಿ ಸ್ಥಳ ಕೆಮ್ಮಣ್ಣುಗುಂಡಿ ಮಧ್ಯೆ ಬಸ್ ಸಂಚಾರ ಆರಂಭಿಸಿದೆ.
Recommended Video

KSRTC launched A Direct bus Service Between Bengaluru - Kemmangundi From Today | Oneindia Kannada
ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ಬೆಳಿಗ್ಗೆ 6.00 ಗಂಟೆಗೆ ಹೊರಡುವ ವೇಗದೂತ ಸಾರಿಗೆ ಬಸ್ ಮಧ್ಯಾಹ್ನ 12:15 ಗಂಟೆಗೆ ಕೆಮ್ಮಣ್ಣುಗುಂಡಿ ತಲುಪಲಿದೆ.

ಅದೇ ರೀತಿ ಕೆಮ್ಮಣ್ಣುಗುಂಡಿಯಿಂದ ಮಧ್ಯಾಹ್ನ 3:45ಕ್ಕೆ ಬಸ್ ಬೆಂಗಳೂರಿನತ್ತ ವಾಪಸ್ ಹೊರಡಲಿದೆ. ರಾತ್ರಿ 10 ಗಂಟೆಗೆ ಬಸ್ ಬೆಂಗಳೂರು ತಲುಪಲಿದೆ.
ಬೆಂಗಳೂರು ಮತ್ತು ಕೆಮ್ಮಣ್ಣುಗುಂಡಿ ನಡುವಿನ ಪ್ರಯಾಣ ದರ 233 ರೂಪಾಯಿ ಇರಲಿದೆ ಎಂದು ಕೆಎಸ್ಆರ್'ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications