ಇಂದು ಕರಾಳ ದಿನ ಎಂದು ದಿನೇಶ್ ಗುಂಡೂರಾವ್ ಹೇಳಿದ್ಯಾಕೆ?
ಬೆಂಗಳೂರು, ನ. 08: ದೇಶದಲ್ಲಿ ನೋಟ್ಬ್ಯಾನ್ ಮಾಡಿ ಇಂದಿಗೆ (ನ.08, 2020) ನಾಲ್ಕು ವರ್ಷ. ಇಡೀ ದೇಶದ ಜನರ ಬದುಕನ್ನೇ ಬದಲಿಸಿದ ನೋಟ್ಬ್ಯಾನ್ ಕ್ರಮವನ್ನು ಕಾಂಗ್ರೆಸ್ ನಾಯಕರು ಆರಂಭದಲ್ಲಿ ಸ್ವಾಗತಿಸಿದ್ದರು. ಆದರೆ ಯಾವಾಗ ಅದು ಮಧ್ಯಮವರ್ಗ ಹಾಗೂ ಕೆಳ ವರ್ಗದ ಜನರ ಸ್ಥಿತಿಯನ್ನು ಬದಲಿಸಿತೊ ಆಗ ಕಾಂಗ್ರೆಸ್ ನಾಯಕರು ನೋಟ್ ಬ್ಯಾನ್ ವಿರೋಧಿಸಲು ಶುರು ಮಾಡಿದ್ದರು.
Recommended Video
ಇದೀಗ ನೋಟ್ಬ್ಯಾನ್ಗೆ ನಾಲ್ಕು ವರ್ಷ ತುಂಬಿರುವ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾತುಗಳನ್ನಾಡಿದ್ದಾರೆ. ಪ್ರಧಾನಿ ಮೋದಿ ಅವರ ಸ್ವಪ್ರತಿಷ್ಠೆ ಮತ್ತು ಆತ್ಮರತಿಯ ಪ್ರತೀಕದ ಸಂಕೇತವಾಗಿ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡಿದ ನೋಟ್ ಬಂಧಿಗೆ ಇಂದು ನಾಲ್ಕನೇ ವರ್ಷ. ಕಪ್ಪುಹಣ ವಾಪಾಸ್ ತರುವ ಕಥೆ ಕಟ್ಟಿ, ನೋಟ್ ಬ್ಯಾನ್ ಮೂಲಕ ಜನರ ಬದುಕನ್ನೇ ಬೀದಿಗೆ ತಂದ ಪ್ರಧಾನಿ ಮೋದಿ ಅವರಿಗೆ ಈ ದಿನವನ್ನು ತಮ್ಮ ಸಾಧನೆಯ ದಿನವೆಂಬಂತೆ ಆಚರಿಸಿಕೊಳ್ಳುವ ಧೈರ್ಯವಿದೆಯೇ? ಎಂದು ದಿನೇಶ್ ಗುಂಡೂರಾವ್ ಅವರು ಪ್ರಧಾನಿ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಜೊತೆಗೆ ಪ್ರಧಾನಿ ಮೋದಿ ಅವರಿಗೆ ದೂರದೃಷ್ಟಿಯಿಂದ ಎಂದು ದಿನೇಶ್ ಗುಂಡೂರಾವ್ ಅವರು ಕಿಡಿ ಕಾರಿದ್ದಾರೆ. ದೂರದೃಷ್ಟಿಯಿಲ್ಲದ ನಾಯಕನೊಬ್ಬನ ಮೂರ್ಖತನದ ನಿರ್ಧಾರ ಈ ನೋಟ್ಬ್ಯಾನ್ ಎಂಬುದನ್ನು ಜಗತ್ತಿಗೇ ತೋರಿಸಿದ ದಿನವಿದು ಎಂದು 2016ರ ನವೆಂಬರ್ 8ನ್ನು ನೆನಪಿಸಿಕೊಂಡಿದ್ದಾರೆ. ಹೀಗಾಗಿ ನ.8 ಭಾರತದ ಪಾಲಿಗೆ ಎಂದೆಂದಿಗೂ ಕರಾಳ ದಿನವಾಗಿ ಉಳಿಯಲಿದೆ ಎಂದು ಅವರು ವಿಷಾಧಿಸಿದ್ದಾರೆ.

ಅಂದಹಾಗೆ, ಕಪ್ಪುಹಣ ಮರಳಿ ತರುವ ತೌಡು ಕುಟ್ಟಿ ಜನರಲ್ಲಿ ಭ್ರಮೆ ಹುಟ್ಟಿಸಿದ್ದ ಮೋದಿ, ನೋಟ್ ಬ್ಯಾನ್ ಮಾಡಿ ಒಂದೇ ಒಂದು ರೂಪಾಯಿ ಕಪ್ಪುಹಣ ತಂದ ಉದಾಹರಣೆ ತೋರಿಸಲಿ ಎಂದು ಬಿಜೆಪಿಗೆ ದಿನೇಶ್ ಗುಂಡೂರಾವ್ ಅವರು ಸವಾಲು ಹಾಕಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications