ಬಿಎಸ್ವೈ, ಈಶ್ವರಪ್ಪ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು
ಬೆಂಗಳೂರು, ಅ.21 : ಹೈಕೋರ್ಟ್ ಆದೇಶದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಕ್ರಮ ಆಸ್ತಿಗಳಿಕೆ ಆರೋಪಗಳು ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
These
are
false
allegations,
land
was
purchased
14-15
yrs
ago:
BS
Yeddyurappa
on
Bangalore
HC
order
pic.twitter.com/rwJoOws60Y
—
ANI
(@ANI_news)
October
21,
2014
ಹಿಂದಿನ ಸುದ್ದಿ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಂಗಳವಾರ ಕರ್ನಾಟಕ ಹೈಕೋರ್ಟ್ ಇಬ್ಬರು ನಾಯಕರ ವಿರುದ್ಧ ತನಿಖೆ ನಡೆಸಲು ಒಪ್ಪಿಗೆ ನೀಡಿದ್ದು, ಸೆಷೆನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಮಾಜಿ
ಸಿಎಂ
ಬಿ.ಎಸ್.ಯಡಿಯೂರಪ್ಪ,
ಕೆಎಸ್
ಈಶ್ವರಪ್ಪ,
ಯಡಿಯೂರಪ್ಪ
ಪುತ್ರ
ಬಿ.ವೈ.ರಾಘವೇಂದ್ರ,
ಪುತ್ರಿ
ಅರುಣಾ
ದೇವಿ
ಅಕ್ರಮ
ಆಸ್ತಿ
ಸಂಪಾದನೆ
ಮಾಡಿದ್ದಾರೆ
ಎಂದು
ಆರೋಪಿಸಿ
ವಕೀಲ
ವಿನೋದ್
ಕುಮಾರ್
ಶಿವಮೊಗ್ಗದ
ಸೆಷನ್ಸ್
ನ್ಯಾಯಾಲಯಕ್ಕೆ
ಅರ್ಜಿ
ಸಲ್ಲಿಸಿದ್ದರು.
[ಈಶ್ವರಪ್ಪ
ಅಕ್ರಮ
ಆಸ್ತಿ
ಲೆಕ್ಕ
ಬಿಚ್ಚಿಟ್ಟ
ನಾಗಲಕ್ಷ್ಮಿ]
ಆದರೆ, ದೂರು ದಾಖಲಿಸಲು ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ವಿನೋದ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ ಈ ಕುರಿತು ತೀರ್ಪು ನೀಡಿರುವ ಕೋರ್ಟ್ ಸೆಷನ್ಸ್ ಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದು, ಹೊಸದಾಗಿ ಅರ್ಜಿಯ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.
ಇದರಿಂದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಪುತ್ರಿ ಅರುಣಾ ದೇವಿ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪುನಃ ತನಿಖೆ ಆರಂಭವಾಗಲಿದೆ. ದೂರುದಾರ ವಕೀಲ ವಿನೋದ್ ಕುಮಾರ್ ಅವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.