ಕೇಂದ್ರದಿಂದ ಹಿಂದಿ - ಸಂಸ್ಕೃತಕ್ಕೆ ಕೋಟಿ.. ಕೋಟಿ: ಕನ್ನಡ, ತೆಲುಗು, ತಮಿಳು & ಮಲಯಾಳಂ ಭಾಷೆಗೆ ಚಿಲ್ಲರೆ!
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರವು ದೇಶದ ಯಾವ ಭಾಷೆಗಳಿಗೆ ಎಷ್ಟು ಅನುದಾನ ನೀಡುತ್ತಿದೆ ಎನ್ನುವ ವಿಚಾರವು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಹಿರಂಗವಾಗಿದ್ದು. ಇದರಲ್ಲಿ ಕನ್ನಡ ಭಾಷೆಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದು ಬೆಳಕಿಗೆ ಬಂದಿದೆ. ಭಾಷೆಗಳಿಗೆ ಅನುದಾನ ನೀಡುವಾಗ ಮತ್ತೆ ಸಂಸ್ಕೃತ ಹಾಗೂ ಹಿಂದಿಗೆ ಸಿಂಹಪಾಲು ಸಿಕ್ಕಿದೆ. ಇದಾದ ನಂತರ ತಮಿಳು ಭಾಷೆಗೂ ಹೆಚ್ಚು ಅನುದಾನ ಲಭ್ಯವಾಗಿದೆ. 2014-15 ಹಾಗೂ 2024-25ರ ನಡುವೆ ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರವು ಬರೋಬ್ಬರಿ 2532.59 ಕೋಟಿ ಅನುದಾನವನ್ನು ಖರ್ಚು ಮಾಡಿದೆ.
ಹೌದು ದೇಶದಲ್ಲಿ ಭಾಷಾ ವಿಚಾರ ಹಾಗೂ ಭಾಷೆಗಳಿಗೆ ಕೇಂದ್ರದ ಅನುದಾನದ ಬಗ್ಗೆ ಮತ್ತೆ ಚರ್ಚೆ ನಡೆದಿದೆ. ಈ ಸಂಬಂಧ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹಿಂದಿ ಹೇರಿಕೆ ಹಾಗೂ ಕನ್ನಡವೂ ಸೇರಿದಂತೆ ದೇಶದ ವಿವಿಧ ಭಾಷೆಗಳಿಗೆ ಕೇಂದ್ರ ಸರ್ಕಾರವು ಎಷ್ಟು ಅನುದಾನ ನೀಡಿದೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕೇಂದ್ರ ಸರ್ಕಾರವು ಸಂಸ್ಕೃತ ಹಾಗೂ ಹಿಂದಿ ಭಾಷೆಗಳಿಗೆ ಅನುದಾನದಲ್ಲಿ ಸಿಂಹಪಾಲು ನೀಡಿದೆ. ಉಳಿದ ಭಾಷೆಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದೆ ಎನ್ನುವ ವಿಷಯವು ಇದೀಗ ಬಹಿರಂಗವಾಗಿದೆ.

ಕನ್ನಡವೂ ಸೇರಿದಂತೆ ಐದು ಶಾಸ್ತ್ರೀಯ ಭಾಷೆಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಕಡಿಮೆ ಅನುದಾನ ಖರ್ಚು ಮಾಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಒಡಿಯಾ ಭಾಷೆಗಳ ಒಟ್ಟು ವೆಚ್ಚಕ್ಕಿಂತ ಇದು 17 ಪಟ್ಟು ಹೆಚ್ಚಾಗಿದೆ. ಸಂಸ್ಕೃತ ಭಾಷೆಗೆ ಕೇಂದ್ರ ಸರ್ಕಾರವು ವರ್ಷ (ಸರಾಸರಿ) 230.24 ಕೋಟಿ ಹಾಗೂ ಇನ್ನುಳಿದ ಐದು ಭಾಷೆಗಳಿಗೆ ಪ್ರತಿ ವರ್ಷ 13.41 ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿದೆ. ಇನ್ನು ಇದರಲ್ಲೂ ಕೆಲವೊಂದು ವ್ಯತ್ಯಾಸವಾಗಿದೆ. ತಮಿಳು ಭಾಷೆಗೂ ಉಳಿದ ಭಾಷೆಗಳಿಗಿಂತ ಹೆಚ್ಚು ಅನುದಾನ ಸಿಕ್ಕಿದೆ.
ತಮಿಳು ಭಾಷೆಗೆ ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. 2004ರಲ್ಲಿ ತಮಿಳು ಭಾಷೆಗೆ ಮೊದಲು ಶಾಸ್ತ್ರೀಯ ಭಾಷೆ ಎನ್ನುವ ಗೌರವ ಸಿಕ್ಕಿದೆ. ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ ನೀಡುವ ಅನುದಾನ ಯೋಜನೆಯಡಿ ಬರೋಬ್ಬರಿ 113.48 ಕೋಟಿ ರೂಪಾಯಿಯನ್ನು ಈ ಭಾಷೆಯ ಪ್ರಚಾರಕ್ಕೆ ಕೊಡಲಾಗಿದೆ. ಇನ್ನು ಈ ಮೊತ್ತವು 2005 ರಲ್ಲಿ ಸಂಸ್ಕೃತದ ಪ್ರಚಾರಕ್ಕಾಗಿ ಕೇಂದ್ರ ಖರ್ಚು ಮಾಡಿದ ಮೊತ್ತಕ್ಕಿಂತ 22 ಪಟ್ಟು ಕಡಿಮೆಯಾಗಿದೆ. 2008 ಮತ್ತು 2014 ರ ನಡುವೆ ಕನ್ನಡವೂ ಸೇರಿದಂತೆ ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನದ ಗೌರವ ಸಿಕ್ಕಿದೆ. ಆದರೆ, ಈ ಭಾಷೆಗಳಿಗೆ ಈ ಅವಧಿಯಲ್ಲಿ ಕೇವಲ 34.08 ಕೋಟಿ ಅನುದಾನ ನೀಡಲಾಗಿದೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಕೇಂದ್ರ ಸರ್ಕಾರವು 2014 ರಿಂದ 2024 ರವರೆಗೆ ಸಂಸ್ಕೃತದ ಅಭಿವೃದ್ಧಿಗಾಗಿ 2532.59 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ ಬಿಡುಗಡೆಯಾದ ಒಟ್ಟು ಮೊತ್ತ 147.56 ಕೋಟಿ ರೂ ಮಾತ್ರ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications