ಜೂನ್ 16ರಂದು ದೇಶವ್ಯಾಪಿ ಪ್ರತಿಭಟನೆಗೆ ಸಿಪಿಐಎಂ ಕರೆ
ಬೆಂಗಳೂರು, ಜೂನ್ 14 : ಸಿಪಿಐಎಂ ದೇಶವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಿದೆ. ಕೋವಿಡ್ - 19 ನಿಯಂತ್ರಣ ಲಾಕ್ ಡೌನ್ ಸಂತ್ರಸ್ತರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದೆ.
Recommended Video
ಜೂನ್ 16ರ ಮಂಗಳವಾರ ದೇಶವ್ಯಾಪ್ತಿ ಪ್ರತಿಭಟನೆಗೆ ಸಿಪಿಐಎಂ ಕರೆ ಕೊಟ್ಟಿದೆ. ಪ್ರತಿಭಟನೆ ವೇಳೆ ಸಾಮಾಜಿಕ ಅಂತರವನ್ನು ಕಾಪಾಡೋಣ, ಕೋವಿಡ್ - 19 ಹಿಮ್ಮೆಟ್ಟಿಸೋಣ ಎಂದು ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ
ಬೆಂಗಳೂರು ನಗರದಲ್ಲಿ ವಲಯ ಮತ್ತು ವಾರ್ಡ್ ಕಚೇರಿಗಳ ಬಳಿ ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆ ತನಕ ಪ್ರತಿಭಟನೆ ನಡೆಯಲಿದೆ. ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಮಧ್ಯಾಹ್ನ 12 ರಿಂದ 1 ಗಂಟೆಯ ತನಕ ಪ್ರತಿಭಟನೆ ನಡೆಯಲಿದೆ. ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಬಳಿಯೂ ಪ್ರತಿಭಟನೆ ನಡೆಯಲಿದೆ.
ಅಮೆರಿಕ ಕಂಪನಿಗೆ ಭೂ ಮಂಜೂರು, ಯಡಿಯೂರಪ್ಪ ವಿರುದ್ಧ ಸಿಪಿಐಎಂ ಕಿಡಿ
ಸಿಪಿಐಎಂ ಬೇಡಿಕೆಗಳು
* ಲಾಕ್ ಡೌನ್ ಕಾಲಾವಧಿ ಪೂರ್ಣ ವೇತನಕ್ಕಾಗಿ, ಕೆಲಸ ನಿರಾಕರಣೆ ತಡೆಗಾಗಿ, ಕೆಲಸದ ಅವಧಿ ಹೆಚ್ಚಳ ವಾಪಸ್ಸಿಗಾಗಿ
* ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೆ 6 ತಿಂಗಳು ರೂ. 7,500 ನೇರ ನಗದು ವರ್ಗಾವಣೆಗಾಗಿ
ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
* ಎಲ್ಲರಿಗೂ ಮುಂದಿನ 6 ತಿಂಗಳು ಮಾಸಿಕ ತಲಾ 10 ಕೆಜಿ ಆಹಾರ ಧಾನ್ಯಕ್ಕಾಗಿ
* 200 ದಿನಗಳಿಗೆ ಉದ್ಯೋಗ ಖಾತ್ರಿ ಕೆಲಸದ ಹೆಚ್ಚಳಕ್ಕಾಗಿ
* ಪರಿಹಾರ ಸಿಗದ ಅಸಂಘಟಿತ ಕಾರ್ಮಿಕರಿಗೆ ಬಿಬಿಎಂಪಿ ವಿವೇಚನಾ ನಿಧಿಯಿಂದ ಪರಿಹಾರಕ್ಕಾಗಿ
* ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳ ರದ್ಧತಿಯನ್ನು ನಿಲ್ಲಿಸಬೇಕು.
* ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷಧಗಳ ತೀವ್ರ ಕೊರತೆ ಇದ್ದು, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಸಬೇಕು.