ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದದ್ದು ಕೈ ಕಾರ್ಯಕರ್ತರೇ: ಸುಧಾಕರ್
ಬೆಂಗಳೂರು, ಆಗಸ್ಟ್ 21: ಬಹುಸಂಖ್ಯಾತರ ಬಗ್ಗೆ ಕಾಂಗ್ರೆಸ್ ನಾಯಕರು ಲಘುವಾಗಿ ಮಾತನಾಡಿರುವುದು ಕಾರ್ಯಕರ್ತರಿಗೆ ಕೋಪ ತರಿಸಿದೆ. ಭಾವೋದ್ವೇಗಕ್ಕೆ ಒಳಗಾಗಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಖಂಡನಾರ್ಹ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಈ ಕೃತ್ಯ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ಸುಧಾಕರ್,ಪ್ರಸ್ತುತದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ತಮ್ಮ ನಾಯಕರ ಮೇಲೆ ಮುಗಿ ಬೀಳುತ್ತಿದ್ದಾರೆ. ಇನ್ನಮುಂದೆ ಕಾಂಗ್ರೆಸ್ ನಾಯಕರು ಸಮಾಜದಲ್ಲಿ ಹೇಗಿರಬೇಕೆಂದು ಅರ್ಥ ಮಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಈಗಲಾದರೂ ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು ಕಲಿತುಕೊಳ್ಳಲಿ. ವಿಪಕ್ಷ ನಾಯಕ ಕಾರಿಗೆ ಮೊಟ್ಟೆ ಎಸೆದವರ ವಿರುದ್ಧ ಸರ್ಕಾರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಅದನ್ನು ಅಲ್ಲೇ ಬಿಡಬೇಕು. ಆದರೆ ಅದೇ ರಾಜಕಾರಣವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತನೆ ಈ ಕೆಲಸ ಮಾಡಿರುವುದರಿಂದ ಸಿದ್ದರಾಮಯ್ಯ ಹೇಳಿಕೆ ಏನಿರುತ್ತೆ ಅನ್ನುವ ಕುತೂಹಲವಿದೆ ಎಂದು ಅವರು ಹೇಳಿದರು.
ಇನ್ನು ಕಾಂಗ್ರೆಸ್ಗೆ ಆರ್ಎಸ್ಎಸ್ ಮತ್ತು ವೀರ್ ಸಾವರ್ಕರ್ ಬಗ್ಗೆ ಮಾತನಾಡುವುದು ಒಂದು ದೌರ್ಬಲ್ಯವೇ ಆಗಿದೆ. ಇದು ಅವರ ಅಜ್ಞಾನವನ್ನು ತಿಳಿಸುತ್ತದೆ. ಅವರು ಬದಲಾಗದಿದ್ದರೆ ಜನರು ಬದಲಿಸುತ್ತಾರೆ ಎಂದು ತಿರುಗೇಟು ನೀಡಿದರು.
ಜನೋತ್ಸವಕ್ಕೆ
ಜೆ.ಪಿ.ನಡ್ಡಾ
ಭಾಗಿ
ಬಿಜೆಪಿ
3
ವರ್ಷದ
ಆಡಳಿತದ
ಸಂಭ್ರಮವನ್ನು
ಹಂಚಿಕೊಳ್ಳಲು
ಸೆಪ್ಟಂಬರ್
8
ರಂದು
ಜನೋತ್ಸವ
ಕಾರ್ಯಕ್ರಮ
ನಡೆಸಲಾಗುತ್ತದೆ.
ರಾಷ್ಟ್ರೀಯ
ಅಧ್ಯಕ್ಷರಾದ
ಜೆ.ಪಿ.
ನಡ್ಡಾ
ಜೊತೆಗೆ
ಹಲವು
ರಾಷ್ಟ್ರೀಯ
ನಾಯಕರು
ಈ
ಕಾರ್ಯಕ್ರಮಕ್ಕೆ
ಆಗಮಿಸಲಿದ್ದಾರೆ.
ಮುಖ್ಯಮಂತ್ರಿಗಳು,
ಎಲ್ಲಾ
ನಾಯಕರು,
ಸಚಿವರು,ಶಾಸಕರು,
ಕಾರ್ಯಕರ್ತರು
ಇದರಲ್ಲಿ
ಭಾಗಿಯಾಗಲಿದ್ದಾರೆ.
3
ಜಿಲ್ಲೆಯ
ಜನರು
ಈ
ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದು
2
ರಿಂದ
3
ಲಕ್ಷ
ಜನ
ಸೇರುವ
ನಿರೀಕ್ಷೆ
ಇದೆ
ಎಂದು
ಹೇಳಿದರು.
ಅದ್ಧೂರಿ ಜನೋತ್ಸವ ಸಮಾರಂಭದಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳು ಕೂಡ ಭಾಗಿಯಾಗಲಿದ್ದಾರೆ. ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಅಭಿನಂದಿಸಲು ಬರಲಿದ್ದಾರೆ ಎಂದು ಸುಧಾಕರ್ ವಿವರಿಸಿದರು.