ನಾಳೆ ಏನನ್ನು ಮರೆತರೂ ಮತದಾನ ಮಾಡುವುದನ್ನ ಮರೆಯಬೇಡಿ.!
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವನ್ನ ಸಂಭ್ರಮಿಸಲು ಇನ್ನೊಂದೇ ದಿನ ಬಾಕಿ ಇದೆ. ನಿಮ್ಮ ಹಕ್ಕು ಚಲಾಯಿಸಲು, ನಿಮ್ಮ ಜವಾಬ್ದಾರಿ ನಿರ್ವಹಿಸಲು ಕೆಲವೇ ಕೆಲವು ಕ್ಷಣಗಳಷ್ಟೇ ಉಳಿದಿವೆ.
ಮೇ 12... ಅಂದ್ರೆ ನಾಳೆ (ಶನಿವಾರ) ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ನಮ್ಮ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಿರಬೇಕು, ಸಮಾಜ ಸುಧಾರಣೆ ಆಗಬೇಕು, ಅಭಿವೃದ್ಧಿ ಪಥದಲ್ಲಿ ಕರ್ನಾಟಕ ಸಾಗಬೇಕು ಅಂದ್ರೆ ನಿಮ್ಮೆಲ್ಲರ ಮತ ಅನಿವಾರ್ಯ. ಹೀಗಾಗಿ, ನಾಳೆ ನೀವು ಏನನ್ನು ಮರೆತರೂ ಪರ್ವಾಗಿಲ್ಲ. ಆದ್ರೆ ಮತದಾನ ಮಾಡುವುದನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯಬೇಡಿ.
ಹೇಗಿದ್ದರೂ ನಾಳೆ ಶನಿವಾರ. ತಿಂಗಳ ಎರಡನೇ ಶನಿವಾರ ಬೇರೆ. ಸರ್ಕಾರಿ ನೌಕರರು ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ಇದ್ದೇ ಇದೆ. ಕೆಲವು ಖಾಸಗಿ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ನಾಳೆ ರಜೆ ಘೋಷಿಸಿದೆ. ರಜೆ ಸಿಕ್ಕಿದೆ ಎಂಬ ಕಾರಣಕ್ಕೆ ವೀಕೆಂಡ್ ಟ್ರಿಪ್ ಪ್ಲಾನ್ ಮಾಡುವ ಮೊದಲು ವೋಟ್ ಹಾಕಿ ನಿಮ್ಮ ಕರ್ತವ್ಯ ನಿರ್ವಹಿಸಿ...
ಕಿರುತೆರೆ ನಟ ವಿಜಯ್ ಸೂರ್ಯ, ಪವನ್, ಮಂಡ್ಯ ರಮೇಶ್ ಸೇರಿದಂತೆ 'ಕಲರ್ಸ್ ಕನ್ನಡ' ಕುಟುಂಬದ ಕಲಾವಿದರು ಕೂಡ 'ವೋಟ್ ಮಾಡು ಕರ್ನಾಟಕ' ಎಂದು ಕನ್ನಡ ಜನತೆಯನ್ನು ಕೇಳಿಕೊಳ್ಳುತ್ತಿದ್ದಾರೆ.
ಮತದಾನ ಮಾಡುವುದು ಪುಣ್ಯದ ಕೆಲಸ
''ಮತದಾನ ಮಾಡುವುದು ಜವಾಬ್ದಾರಿ ಹೌದು, ಪುಣ್ಯದ ಕೆಲಸ ಕೂಡ ಹೌದು. ಈ ಹಕ್ಕನ್ನು ನಮಗೆ ಕೊಡಲು ಎಷ್ಟೋ ಜನ ಪ್ರಾಣವನ್ನೇ ಅರ್ಪಿಸಿದ್ದಾರೆ. ಹೀಗಾಗಿ ಮೇ 12 ರಂದು ತಪ್ಪದೆ ವೋಟ್ ಮಾಡಿ'' ಎಂದು 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಲಚ್ಚಿ ರಶ್ಮಿ ಪ್ರಭಾಕರ್ ಕೇಳಿಕೊಂಡಿದ್ದಾರೆ.
ಇದೇ ದೊಡ್ಡ ನಾಡ ಸಡಗರ
''ರಾಜ್ಯೋತ್ಸವ ಬಂತು ಅಂದ್ರೆ ಸಂಭ್ರಮಿಸುತ್ತೇವೆ. ಮೇ 12 ರಂದು ಕೂಡ ನಾಡ ಸಡಗರ ಬರ್ತಾಯಿದೆ. ಎಲೆಕ್ಷನ್ ನಲ್ಲಿ ಸರಿಯಾದ ಸೆಲೆಕ್ಷನ್ ಮಾಡಿದರೆ ಮುಂದಿನ ಐದು ವರ್ಷ ಕೂಡ ಹಬ್ಬವೇ. ಆದ್ದರಿಂದ ಮೇ 12 ರಂದು ಮಿಸ್ ಮಾಡದೆ ವೋಟ್ ಮಾಡಿ'' ಎಂದು 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಾರಿ ಕಾರಣ ಕೊಡಬೇಡಿ
''ಯಾವುದೇ ಕೆಲಸ ಆಗದೇ ಇದ್ದರೆ, ನಾವು ಕಾರಣ ಕೇಳುತ್ತೇವೆ. ಯಾವ ಕೆಲಸವನ್ನೂ ನಾವು ಮಾಡದೇ ಹೋದರೆ ಏನೋ ಒಂದು ಕಾರಣ ಕೊಡುತ್ತೇವೆ. ಈ ಸಲ ಯಾವ ಕಾರಣವೂ ನಡೆಯೋಲ್ಲ. ನಮ್ಮ ಜವಾಬ್ದಾರಿಯನ್ನ ನಾವೇ ನೆರವೇರಿಸಬೇಕು. ಮೇ 12 ರಂದು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಮರೆಯಬೇಡಿ'' ಎಂದಿದ್ದಾರೆ 'ಪುಟ್ಟಗೌರಿ ಮದುವೆ'ಯ ಹಿಮ ಖ್ಯಾತಿಯ ನಮ್ರತಾ ಗೌಡ
ಕನ್ನಡ ನೆಲದ ಪ್ರಜ್ಞಾವಂತಿಕೆಗೊಂದು ಸವಾಲು
''ಕನ್ನಡ ನೆಲದ ಪ್ರಜ್ಞಾವಂತಿಕೆಗೊಂದು ಸವಾಲು ಈ ಸಲದ ಚುನಾವಣೆ. ನಾವು ವೋಟ್ ಮಾಡೇ ಮಾಡ್ತೀನಿ. ನೀವು ಮಾಡಬೇಕು'' ಅಂತ ಹೇಳಿದ್ದಾರೆ ನಟ ಮಂಡ್ಯ ರಮೇಶ್.
ತಪ್ಪು ಮಾಡ್ಬೇಡಿ
''ಒಂದು ಮತ ಹಾಕಿದ್ರೆಷ್ಟು, ಬೆಟ್ಟರೆಷ್ಟು ಅಂತ ಕೇಳ್ಬೇಡಿ. ನಿಮ್ಮ ಒಂದು ತಪ್ಪಿನ ಶಿಕ್ಷೆ ಇಡೀ ರಾಜ್ಯ ಅನುಭವಿಸಬಹುದು. ಈ ತರಹ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಹೀಗಾಗಿ ನಾಳೆ ತಪ್ಪದೆ ವೋಟ್ ಮಾಡಿ ಎಂದಿದ್ದಾರೆ 'ಪುಟ್ಟಗೌರಿ ಮದುವೆ'ಯ ಮಹೇಶ ಖ್ಯಾತಿಯ ರಕ್ಷಿತ್ ಗೌಡ.
ವೋಟ್ ಮಾಡೋದನ್ನ ಮರೆಯಬೇಡಿ
''ನೀವು ಲೈಫ್ ನಲ್ಲಿ ಏನು ಬೇಕಾದರೂ ಮರೆಯಿರಿ. ವೋಟ್ ಮಾಡುವುದು ಮಾತ್ರ ಮರೆಯಬೇಡಿ'' ಅಂತ ಜನರಿಗೆ ಕೇಳಿಕೊಂಡಿದ್ದಾರೆ 'ಮಜಾ ಟಾಕೀಸ್' ಪವನ್.
ಮತದಾನ ನಮ್ಮ ಹಕ್ಕು
''ವೋಟ್ ಮಾಡುವುದು ನಮ್ಮ ಜವಾಬ್ದಾರಿ. ಹಾಗೇ ನಮ್ಮ ಹಕ್ಕು ಕೂಡ. ದಯವಿಟ್ಟು ವೋಟ್ ಮಾಡಿ'' - ಇದು ನಟ ವಿಜಯ್ ಸೂರ್ಯ ಅವರ ಕಳಕಳಿಯ ಮನವಿ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications