ರಾಘವೇಶ್ವರ ಶ್ರೀಗಳಿಗೆ ಕ್ಲೀನ್ ಚಿಟ್, ಹೈಕೋರ್ಟ್ಗೆ ಸಿಐಡಿ
ಬೆಂಗಳೂರು, ಏಪ್ರಿಲ್ 06 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಶ್ರೀಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಐಡಿ ಹೈಕೋರ್ಟ್ ಮೆಟ್ಟಿಲೇರಲಿದೆ.
ಮಾರ್ಚ್
31ರಂದು
ಗಾಯಕಿ
ಪ್ರೇಮಲತಾ
ದಿವಾಕರ್
ಅವರ
ಮೇಲಿನ
ಅತ್ಯಾಚಾರ
ಆರೋಪ
ಪ್ರಕರಣದಲ್ಲಿ
ರಾಘವೇಶ್ವರ
ಭಾರತಿ
ಸ್ವಾಮೀಜಿ
ಅವರನ್ನು
ಖುಲಾಸೆಗೊಳಿಸಿ,
ಸೆಷನ್ಸ್
ಕೋರ್ಟ್
ತೀರ್ಪು
ನೀಡಿತ್ತು.
ಈ
ತೀರ್ಪನ್ನು
ಹೈಕೋರ್ಟ್ನಲ್ಲಿ
ಸಿಐಡಿ
ಪ್ರಶ್ನಿಸಲಿದೆ.
[ರಾಘವೇಶ್ವರ
ಶ್ರೀಗಳು
ಖುಲಾಸೆ,
ತೀರ್ಪಿನ
5
ಅಂಶಗಳು]
ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಸೆಷನ್ಸ್ ಕೋರ್ಟ್ ಶ್ರೀಗಳನ್ನು ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ, ಮತ್ತಷ್ಟು ಸಾಕ್ಷಿಗಳ ಜೊತೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಿಐಡಿ ಪೊಲೀಸರು ನಿರ್ಧರಿಸಿದ್ದಾರೆ. [ರಾಘವೇಶ್ವರ ಶ್ರೀಗಳು ನಿರ್ದೋಷಿ, ವಿಜಯೋತ್ಸವದ ಚಿತ್ರಗಳು]
ಕೋರ್ಟ್ ಖುಲಾಸೆಗೊಳಿಸಿತ್ತು : ಅತ್ಯಾಚಾರ ಪ್ರಕರಣದಿಂದ ತಮ್ಮನ್ನು ಕೈ ಬಿಡುವಂತೆ ಶ್ರೀಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಜಿ.ಬಿ. ಮುದಿಗೌಡರ್ ಅವರು ಮಾರ್ಚ್ 31ರಂದು ಶ್ರೀಗಳನ್ನು ಖುಲಾಸೆಗೊಳಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಶ್ರೀಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಆದೇಶ ನೀಡಿದ್ದರು.
ಸೆಷನ್ಸ್ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬೆಳ್ಳಿಯಪ್ಪ ಅವರು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಲಾಗಿತ್ತು. ಆದರೂ ಕೋರ್ಟ್ ಸ್ವಾಮೀಜಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ' ಎಂದು ಹೇಳಿದ್ದರು.