ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ
ಬೆಂಗಳೂರು, ಜುಲೈ 08 : ಕರ್ನಾಟಕ ಸರ್ಕಾರ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಚಿವ ಕೆ.ಜೆ.ಜಾರ್ಜ್ ಅವರ ಹೆಸರು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶುಕ್ರವಾರ
ಬೆಳಗ್ಗೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮತ್ತು
ಗೃಹ
ಸಚಿವ
ಡಾ.ಜಿ.ಪರಮೇಶ್ವರ
ಅವರು,
ರಾಜ್ಯ
ಪೊಲೀಸ್
ಮಹಾ
ನಿರ್ದೇಶಕ
ಓಂ
ಪ್ರಕಾಶ್
ಅವರಿಂದ
ಗಣಪತಿ
ಆತ್ಮಹತ್ಯೆ
ಪ್ರಕರಣದ
ಬಗ್ಗೆ
ವಿವರ
ಪಡೆದುಕೊಂಡರು.
[ಗಣಪತಿ
ಆತ್ಮಹತ್ಯೆ
:
ಸಚಿವ
ಜಾರ್ಜ್
ಹೇಳುವುದೇನು?]
ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಗಣಪತಿ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು. [ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣ ಯಾರು?]'
'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿಕೆ ನೀಡಿ ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ
ಹಿನ್ನಲೆಯಲ್ಲಿ
ಪೊಲೀಸ್
ಮಹಾ
ನಿರ್ದೇಶಕರ
ಜೊತೆ
ಸಭೆ
ನಡೆಸಿದ
ಸಿಎಂ
ಮತ್ತು
ಗೃಹ
ಸಚಿವರು
ಪ್ರಕರಣದ
ತನಿಖೆಯನ್ನು
ಸಿಐಡಿಗೆ
ನೀಡಲು
ನಿರ್ಧಾರ
ಕೈಗೊಂಡರು.
ಸಿಐಡಿ
ಎಡಿಜಿಪಿ
ಹೇಮಂತ್
ನಿಂಬಾಳ್ಕರ್
ಅವರ
ನೇತೃತ್ವದ
ತಂಡ
ತನಿಖೆಯನ್ನು
ನಡೆಸಲಿದೆ.