ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ!

ಬೆಂಗಳೂರು,

ನ.
26:
ರಾಜ್ಯ
ಸಂಪುಟ
ವಿಸ್ತರಣೆ
ಗೊಂದಲದ
ಮಧ್ಯೆಯೆ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಅವರು
ನಾಳೆ
(ನ.
27)
ಸಂಪುಟ
ಸಭೆಯ
ಬಳಿಕ
ಸುದ್ದಿಗೋಷ್ಠಿ
ಕರೆದಿದ್ದಾರೆ.
ಬಿಜೆಪಿಯಲ್ಲಿ
ನಡೆಯುತ್ತಿರುವ
ಬೆಳವಣಿಗೆಗಳ
ಹಿನ್ನೆಲೆಯಲ್ಲಿ
ಸಿಎಂ
ಸುದ್ದಿಗೋಷ್ಠಿ
ಮಹತ್ವ
ಪಡೆದುಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ
ಯಡಿಯೂರಪ್ಪ
ಅವರು
ಮಹತ್ವದ
ನಿರ್ಧಾರ
ಪ್ರಕಟಿಸಲಿದ್ದಾರೆ
ಎಂಬ
ಖಚಿತ
ಮಾಹಿತಿ
ಬಂದಿದೆ.

id="toptextpromo">
id='are-slot-1'
class='oiad
oi-axt
oiadv'>

ಲಿಂಗಾಯತ

ಪಂಚಮಸಾಲಿ
ಸಮಾಜಕ್ಕೆ
ರಾಜ್ಯ
ಸರ್ಕಾರದ
2'ಎ'
ಹಾಗೂ
ಕೇಂದ್ರ
ಸರ್ಕಾರದ
ಒಬಿಸಿ
ಮೀಸಲಾತಿ
ಕೊಡಬೇಕು
ಎಂದು
ಒತ್ತಾಯಿಸಿ
ಕೂಡಲಸಂಗಮ
ಪಂಚಮಸಾಲಿ
ಪೀಠದ
ಬಸವ
ಜಯ
ಮೃತ್ಯುಂಜಯ
ಶ್ರೀಗಳು
ಕಳೆದ
ಅಕ್ಟೊಬರ್
28ರಂದು
ಬೆಳಗಾವಿಯ
ಸುವರ್ಣಸೌಧದ
ಎದುರು
ಉಪವಾಸ
ಸತ್ಯಾಗ್ರಹ
ನಡೆಸಿದ್ದರು.
ಆಗ
ಸೂಕ್ತ
ಪರಿಹಾರದ
ಭರವಸೆಯನ್ನು
ಪಂಚಮಸಾಲಿ
ಶ್ರೀಗಳಿಗೆ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ಕೊಟ್ಟಿದ್ದರು.

id='are-slot-2'
class='oiad
oi-axt
oiadv'>

ಸಮುದಾಯಕ್ಕೆ ಯಡಿಯೂರಪ್ಪ ಭರವಸೆ

ಸಮುದಾಯಕ್ಕೆ ಯಡಿಯೂರಪ್ಪ ಭರವಸೆ

ಇದೀಗ ಬದಲಾದ ರಾಜಕೀಯ ಸಮಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಸಿಎಂ ಯಡಿಯೂರಪ್ಪ ಅವರು ಮುಂದಾಗಿದ್ದು, ನಾಳೆ ಸುದ್ದಿಗೋಷ್ಠಿಯಲ್ಲಿ ಅದನ್ನೇ ಹೇಳಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಇವತ್ತು (ನ.26) ತಮ್ಮನ್ನು ಭೇಟಿಯಾಗಿದ್ದ ಪಂಚಮಸಾಲಿ ಶ್ರೀಗಳಿಗೆ ಶೀಘ್ರ ಒಳ್ಳೆಯ ಸುದ್ದಿ ಕೊಡುವ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ ಎನ್ನಲಾಗಿದೆ.

ವೀರಶೈವ ಲಿಂಗಾಯತರಿಗೆ ಮೀಸಲಾತಿ

ವೀರಶೈವ ಲಿಂಗಾಯತರಿಗೆ ಮೀಸಲಾತಿ

ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಲು ನಾಳೆಯ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ನಾಳೆ ನಡೆಯುವ ಸಂಪುಟ ಸಭೆಯ ಅಜೆಂಡಾದಲ್ಲಿ ಈ ವಿಷಯವನ್ನು ಸೇರಿಸಲಾಗಿದ್ದು, ಸಂಪುಟದ ಒಪ್ಪಿಗೆ ಬಳಿಕ ಅದನ್ನೇ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ಪ್ರಕಟಿಸುವ ಸಾಧ್ಯೆತೆಗಳಿವೆ.

ಯಡಿಯೂರಪ್ಪ ಶಿಫಾರಸು ತಂತ್ರ

ಯಡಿಯೂರಪ್ಪ ಶಿಫಾರಸು ತಂತ್ರ

ಎರಡು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಜೊತೆಗೆ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಈ ರಾಜಕೀಯ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸಿಎಂ ಬದಲಾವಣೆಯ ಮಾತುಗಳು ಬಿಜೆಪಿಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವುದು ಹಾಗೂ ಸಂಪುಟ ವಿಸ್ತರಣೆಗೆ ಅನುಮತಿ ಕೊಡದಿರುವುದರಿಂದ ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸಲು ಯಡಿಯೂರಪ್ಪ ಶಿಫಾರಸು ತಂತ್ರ ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ.

Recommended Video

    INDvsAUS 1st ODI: ಅಬ್ಬಾ...!! Adani ವಿರುದ್ಧ ಪ್ರತಿಭಟನೆ ಮಾಡಿದ ರೀತಿ !! | Oneindia Kannada
    ಇದೊಂದು ಶಿಫಾರಸು ಆಗಬಹುದು ಅಷ್ಟೇ

    ಇದೊಂದು ಶಿಫಾರಸು ಆಗಬಹುದು ಅಷ್ಟೇ

    ಸಿಎಂ ಯಡಿಯೂರಪ್ಪ ಅವರು ತರಾತುರಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನ ಕೊಡಿಸಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಮೂಲತಃವಾಗಿ ಕುಲಶಾಸ್ತ್ರ ಅಧ್ಯಯನವಾಗಿಲ್ಲ. ರಾಜ್ಯದಲ್ಲಿ ಸುಮಾರು 1.18 ಕೋಟಿ ಲಿಂಗಾಯತ ಸಮುದಾಐದ ಜನರು ಇದ್ದಾರೆ ಎನ್ನಲಾಗುತ್ತಿದೆ. ಆದರೆ ಅದಕ್ಕೆ ಅಧಿಕೃತ ಅಂಕಿ-ಅಂಶಗಳಿಲ್ಲ.

    ಹೀಗಿರುವಾಗ ಕೇಂದ್ರ ಸರ್ಕಾರಕ್ಕೆ ಓಬಿಸಿ ಸ್ಥಾನಮಾನ ಕೊಡುವುದನ್ನು ಶಿಫಾರಸು ಮಾಡುವುದು ಕೇವಲ ರಾಜಕೀಯ ಎಂದು ಹೆಸರು ಹೇಳಲು ಇಚ್ಚಿಸದ ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+