ರಾಜ್ಯ, ಕೇಂದ್ರ ಗುಪ್ತಚರ ಇಲಾಖೆಗಳ ವರದಿಯಲ್ಲಿ ಕಾಂಗ್ರೆಸ್ಗೆ ಅಧಿಕಾರ, ಬಿಜೆಪಿಗೆ ಭಾರೀ ಮುಖಭಂಗ- ಮಹತ್ವದ ಅಂಕಿಅಂಶ ಬಹಿರಂಗ
ಬೆಂಗಳೂರು, ಮೇ 11: ಮೇ 10 ರಂದು ಮುಕ್ತಾಯಗೊಂಡ ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಫಲಿತಾಂಶಗಳು ಶನಿವಾರ ಹೊರಬರಲಿವೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಬಿಜೆಪಿಗೆ ಮುಖಭಂಗವಾಗುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಕೆಲವು ಪ್ರಮುಖ ಸಮೀಕ್ಷೆಗಳು ಪ್ರಕಾರ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಇನ್ನು ಕೆಲ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಮತ್ತೆ ಅತಂತ್ರ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.
ಕನಿಷ್ಠ ಒಂಬತ್ತು ಸಮೀಕ್ಷೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರುವ ತುದಿಯಲ್ಲಿದೆ ಎಂದು ಸೂಚಿಸಿದರೆ, ಕರ್ನಾಟಕದಲ್ಲಿ ಆಟ ಬಿಜೆಪಿ ಆಟ ಇನ್ನೂ ಇದೆ ಎಂದು ಹೇಳುತ್ತದೆ.

ಎರಡು ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ಗೆ ಸ್ಪಷ್ಟ ಬಹುಮತವನ್ನು ನೀಡಿವೆ. ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಬಿಜೆಪಿಯ 62-80 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ಪಕ್ಷವು 122-140 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಲಿದೆ. ನ್ಯೂಸ್ 24 - ಟುಡೇಸ್ ಚಾಣಕ್ಯ ಪ್ರಕಾರ, 120 ಸ್ಥಾನಗಳನ್ನು ಕಾಂಗ್ರೆಸ್ ಹೊಂದಲಿದೆ. ಬಿಜೆಪಿಗೆ 92 ಸ್ಥಾನಗಳು ಬರಲಿವೆ.
ಕೇವಲ ಒಂದು ಎಕ್ಸಿಟ್ ಪೋಲ್ - ನ್ಯೂಸ್ ನೇಷನ್ - ಬಿಜೆಪಿಗೆ 114 ಸ್ಥಾನಗಳನ್ನು ನೀಡಿದೆ. ಇತರ ಏಳು ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ ಅನ್ನು ಏಕೈಕ ದೊಡ್ಡ ಪಕ್ಷವೆಂದು ತೋರಿಸಿದೆ.
ಎಲ್ಲಾ ಎಕ್ಸಿಟ್ ಪೋಲ್ಗಳು ಎಚ್ಡಿ ದೇವೇಗೌಡ ನೇತೃತ್ವದ ಜೆಡಿಎಸ್ 12 ರಿಂದ 32 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿವೆ. ಸಮೀಕ್ಷೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿ ವಿರುದ್ಧದ ಆಡಳಿತ-ವಿರೋಧಿ ಎದ್ದು ಕಾಣುತ್ತಿದೆ.

ಅತಿ ದೊಡ್ಡ ಪಕ್ಷ ಎಂಬ ಬಹುತೇಕ ರಾಜಕೀಯ ವಿಶ್ಲೇಷಕರ ಎಕ್ಸಿಟ್ ಪೋಲ್ ಭವಿಷ್ಯಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿದೆ. ಆಡಳಿತಾರೂಢ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ. ಇದು ಬಿಜೆಪಿ ಪರವಾಗಿರುವ ಎಕ್ಸಿಟ್ ಪೋಲ್ ಫಲಿತಾಂಶಗಳಿಗೆ ವಿರುದ್ಧವಾಗಿದೆ.
ರಾಜ್ಯ ಗುಪ್ತಚರ ಇಲಾಖೆ ವರದಿ
ರಾಜ್ಯ ಗುಪ್ತಚರ ಇಲಾಖೆ ವರದಿಗಳ ಪ್ರಕಾರ, ಕಾಂಗ್ರೆಸ್ಗೆ 123 ಸ್ಥಾನಗಳು ಬರಲಿವೆ. ಬಿಜೆಪಿಗೆ 71 ಸ್ಥಾನಗಳು ಬರಲಿದೆ. ಜೆಡಿಎಸ್ಗೆ 25 ಸ್ಥಾನಗಳು ಬಂದರೆ, ಪಕ್ಷೇತರರು 5 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ವರದಿ
ಕೇಂದ್ರ ಗುಪ್ತಚರ ಇಲಾಖೆ ವರದಿ ಪ್ರಕಾರ, ಕರ್ನಾ ಟಕದಲ್ಲಿ ಕಾಂಗ್ರೆಸ್ಗೆ 115 ಸ್ಥಾನಗಳು ಬರಲಿವೆ. ಬಿಜೆಪಿ 77 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಜೆಡಿಎಸ್ಗೆ 26 ಹಾಗೂ ಪಕ್ಷೇತರರಿಗೆ 7 ಸ್ಥಾನಗಳು ಒಲಿಯಲಿವೆ.

ಡಿಕೆಶಿ ಹೇಳಿದ್ದೇನು?
ಕಾಂಗ್ರೆಸ್ನ ಕರ್ನಾಟಕ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 141 ಸ್ಥಾನಗಳು ಬರಲಿವೆ ಎಂದು ಹೇಳಿದ್ದಾರೆ.
ನನ್ನ ಮೊದಲ ಪ್ರತಿಕ್ರಿಯೆ (ಎಕ್ಸಿಟ್ ಪೋಲ್ ) ನಾನು ಈ ಅಂಕಿಅಂಶಗಳನ್ನು ನಂಬುವುದಿಲ್ಲ. ನಾನು 141 ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ. ಈ ಮೌಲ್ಯಮಾಪನಕ್ಕೆ ನಾನು ಬದ್ದನಾಗಿದ್ದೇನೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ವಿಫಲವಾಗಿದೆ ಎಂದು ಅವರು ಹೇಳಿದರು.
ಬೊಮ್ಮಾಯಿ ಹೇಳಿದ್ದೇನು?
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಗ್ರೌಂಡ್ ರಿಪೋರ್ಟ್ಗಳ ಪ್ರಕಾರ ಅದು ಆರಾಮದಾಯಕ ಬಹುಮತದೊಂದಿಗೆ ಅಧಿಕಾರಕ್ಕೆ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
'ಎಲ್ಲಾ ಎಕ್ಸಿಟ್ ಪೋಲ್ಗಳು ಯೋಗಿ ಆದಿತ್ಯನಾಥ್ ಮತ್ತೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ಆದರೆ ಉತ್ತರ ಪ್ರದೇಶದಲ್ಲಿ ಅವರು ಹಿಂತಿರುಗಿದ್ದಾರೆ. ಕಳೆದ ಬಾರಿ, ಬಿಜೆಪಿಗೆ ಕೇವಲ 80 ಮತ್ತು ಕಾಂಗ್ರೆಸ್ಗೆ 107 ಸ್ಥಾನಗಳು ಬರಲಿವೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿದ್ದವು. ಆದರೆ ಅದು ರಿವರ್ಸ್ ಆಯಿತು. ನಮಗೆ ವಿಶ್ವಾಸವಿದೆ. ನಾವು ಆರಾಮದಾಯಕ ಬಹುಮತದೊಂದಿಗೆ ಬರುತ್ತೇವೆ' ಎಂದು ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ಶೇಕಡಾ 60 ಕ್ಕೂ ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
'ಮತದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೇ.60ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇನೆ. ಕಾಂಗ್ರೆಸ್ ಸ್ವಂತ ಬಲದಿಂದ ಸರ್ಕಾರ ರಚಿಸುತ್ತದೆ. ನಾನು ನಿವೃತ್ತಿಯಾಗುವುದಿಲ್ಲ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications