ತಮಿಳುನಾಡಿಗೆ ಕಾವೇರಿ ನೀರು, ಸೋಮವಾರ ಸುಪ್ರೀಂಗೆ ಅರ್ಜಿ
ಬೆಂಗಳೂರು, ಸೆಪ್ಟೆಂಬರ್ 07 : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಪುನರ್ ಪರಿಶೀಲಿಸಲು ಕೋರಿ ಕರ್ನಾಟಕ ಅರ್ಜಿ ಸಲ್ಲಿಕೆ ಮಾಡಲಿದೆ. 6 ದಿನಗಳಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸುತ್ತೇವೆ ಎಂದು ಕರ್ನಾಟಕ ಅರ್ಜಿಯಲ್ಲಿ ಮನವಿ ಮಾಡಲಿದೆ.
ಕರ್ನಾಟಕ
ಸರ್ಕಾರ
ಸೋಮವಾರ
ಸುಪ್ರೀಂಕೋರ್ಟ್ಗೆ
ಪುನರ್
ಪರಿಶೀಲನಾ
ಅರ್ಜಿ
ಸಲ್ಲಿಕೆ
ಮಾಡಲಿದೆ.
'ಸರ್ವಪಕ್ಷ
ಸಭೆಯಲ್ಲಿ
ಬಂದ
ಸಲಹೆಗಳ
ಮೇರೆಗೆ
ಕೂಡಲೇ
ಸರ್ಕಾರವು
ಸುಪ್ರೀಂಕೋರ್ಟಿಗೆ
ತನ್ನ
ಆದೇಶವನ್ನು
ಮಾರ್ಪಡಿಸಲು
ಕೋರಿ
ಅರ್ಜಿ
ಸಲ್ಲಿಸಲಿದೆ'
ಎಂದು
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮಂಗಳವಾರ
ಹೇಳಿದ್ದರು.[ಕಾವೇರಿ
ವಿವಾದ
:
ಸಿದ್ದರಾಮಯ್ಯ
ಪತ್ರಿಕಾಗೋಷ್ಠಿ
ವಿವರಗಳು]
ಸೋಮವಾರ ಕೋರ್ಟ್ಗೆ ಅರ್ಜಿ ಸಲ್ಲಿಸಲಿರುವ ಕರ್ನಾಟಕ ಉಳಿದ ದಿನಗಳಲ್ಲಿ 10 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶವನ್ನು ಮಾರ್ಪಡಿಸಲು ಮನವಿ ಮಾಡಲಿದೆ. 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಸೋಮವಾರ ಕೋರ್ಟ್ ಆದೇಶ ನೀಡಿದೆ.[ಸುಪ್ರೀಂ ಆದೇಶ ಪಾಲನೆ, ತಮಿಳುನಾಡಿಗೆ ಹರಿದ ಕಾವೇರಿ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸುಪ್ರೀಂಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೂಲ ಆದೇಶದಲ್ಲಿ ಬದಲಾವಣೆ ಮಾಡಿ ಎಂದು ಕರ್ನಾಟಕ ಅರ್ಜಿಯಲ್ಲಿ ಮನವಿ ಮಾಡಲಿದೆ.[ಕನ್ನಡಿಗರಿಗೇ ಕಾವೇರಿ 'ನೀರು ಕುಡಿಸಿದ' ರಾಜಕಾರಣಿಗಳು]
4 ದಿನಗಳ ಕಾಲ ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸಿದ ನಂತರ ಕರ್ನಾಟಕ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಲಿದೆ. ಅರ್ಜಿಯಲ್ಲಿ ನೀರಿನ ಕೊರತೆ ಹಿನ್ನಲೆಯಲ್ಲಿ 6 ದಿನಗಳ ಕಾಲ 10 ಸಾವಿರ ಕ್ಯೂಸೆಕ್ ನೀರನ್ನು ಮಾತ್ರ ಹರಿಸುತ್ತೇವೆ ಎಂದು ಕರ್ನಾಟಕ ತಿಳಿಸಲಿದೆ.