ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೆಡಿಎಸ್ ಎಂಎಲ್ಸಿಗಳಿಗೆ ಮಂತ್ರಿ ಭಾಗ್ಯ ಸದ್ಯಕ್ಕಿಲ್ಲ'

By Mahesh
|
Google Oneindia Kannada News

Recommended Video

Karnataka Cabinet Expansion: ಜೆಡಿಎಸ್ ಎಂ ಎಲ್ ಸಿಗಳಿಗೆ ಬ್ಯಾಡ್ ನ್ಯೂಸ್ | Oneindia Kannada

ಬೆಂಗಳೂರು, ಜೂನ್ 05: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಲು ಕಸರತ್ತು ಇನ್ನೂ ನಡೆಯುತ್ತಲೇ ಇದೆ. ಎರಡು ಹಂತದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಮಾಡಲಿದ್ದು, ಮೊದಲ ಹಂತದಲ್ಲಿ ಜೆಡಿಎಸ್ ನ ಎಂಎಲ್ಸಿಗಳಿಗೆ ಯಾವುದೇ ಸಚಿವ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ.

ಜೂನ್ 06ರಂದು ಮಧ್ಯಾಹ್ನದ ವೇಳೆ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ನಡುವೆ ವಿಧಾನ ಪರಿಷತ್‌‌ ಸದಸ್ಯರಿಗೆ ಸಚಿವ ಸ್ಥಾನ ನೀಡದಿರಲು ಜೆಡಿಎಸ್‌ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಚುನಾವಣಾ ಕಣದಲ್ಲಿದ್ದ ಸಂಸದರು, ಎಂಎಲ್ಸಿಗಳ ರಿಪೋರ್ಟ್ ಕಾರ್ಡ್ಚುನಾವಣಾ ಕಣದಲ್ಲಿದ್ದ ಸಂಸದರು, ಎಂಎಲ್ಸಿಗಳ ರಿಪೋರ್ಟ್ ಕಾರ್ಡ್

Cabinet Expansion : No Minister post for JDS MLCs

ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಈ ರೀತಿ ನಿರ್ಣಯ ಕೈಗೊಳ್ಳಲಾಗಿದೆ. ಸದ್ಯ ಜೆಡಿಎಸ್ ಎಂಎಲ್ಸಿಗಳ ಪೈಕಿ ಬಸವರಾಜ ಹೊರಟ್ಟಿ ಹಾಗೂ ಬಿಎಂ ಫಾರೂಕ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಬಿ.ಎಂ. ಫಾರೂಕ್ ಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಬಿ.ಎಂ. ಫಾರೂಕ್ ಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ

ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಬಳಿ ಇರಿಸಿಕೊಂಡ ಎರಡು, ಮೂರು ಖಾತೆಗಳನ್ನು ಹಂಚದಿರಲು ನಿರ್ಧರಿಸಲಾಗಿದ್ದು, 2 ರಿಂದ 3 ಸಚಿವ ಸ್ಥಾನವನ್ನು ನಂತರ ತುಂಬಲಾಗುತ್ತದೆ. ಒಟ್ಟಾರೆ, ಎರಡನೇ ಹಂತದಲ್ಲಿ 10-12 ಸಚಿವರು ಸಂಪುಟ ಸೇರಲಿದ್ದಾರೆ.

ಈ ನಡುವೆ ಎಚ್ ಡಿ ರೇವಣ್ಣ ಅವರು ಲೋಕೋಪಯೋಗಿ ಹಾಗೂ ಇಂಧನ ಖಾತೆಗಾಗಿ ಪಟ್ಟು ಹಿಡಿದಿದ್ದು, ಈ ಬಗ್ಗೆ ಇಂದು ಸಂಜೆಯೊಳಗೆ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.

English summary
Karnataka Cabinet Expansion : No minister post for JDS MLCs -this is the big decision taken late night at the JDS CLP meeting held Yesterday night. BM Farooq and Basavaraja Horatti were aspirant for minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X