ಖಾತೆ ಹಂಚಿಕೆ ಮಾಡಿದ ಸಿಎಂ ಯಡಿಯೂರಪ್ಪ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ!
ಬೆಂಗಳೂರು, ಜ. 21: ಸಂಪುಟ ವಿಸ್ತರಣೆಯಾಗಿ ಒಂಭತ್ತು ದಿನಗಳ ಬಳಿಕ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಾಗಿದ್ದಾರೆ. ಸಚಿವರ ಬಳಿಕ ಹೆಚ್ಚುವರಿಯಾಗಿದ್ದ ಖಾತೆಗಳನ್ನು ಮರು ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದ್ದು, ಇಂದು ಮಧ್ಯಾಹ್ನದೊಳಗೆ ಖಾತೆ ಹಂಚಿಕೆ ಅಧಿಕೃಕವಾಗಲಿದೆ.
ಡಾ. ಸುಧಾಕರ್ ಅವರ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಹಂಚಿಕೆ ಮಾಡಲಾಗಿದೆ. ಜೆಸಿ ಮಾಧುಸ್ವಾಮಿ ಅವರಲ್ಲಿದ್ದ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆಯನ್ನು ಮರು ಹಂಚಿಕೆ ಮಾಡಲಾಗಿದೆ. ಉಳಿದಂತೆ ಖಾತೆ ಹಂಚಿಕೆ ಹೀಗಿದೆ.

Recommended Video
Vijayapura: ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ padayatraಗೆ ಚಾಲನೆ | Oneindia Kannada
| ಉಮೇಶ ಕತ್ತಿ | ಆಹಾರ ಮತ್ತು ನಾಗರಿಕ ಪೂರೈಕೆ |
| ಅಂಗಾರ | ಮೀನುಗಾರಿಕೆ ಮತ್ತು ಬಂದರು |
| ಬೊಮ್ಮಾಯಿ | ಗೃಹ ಜೊತೆಗೆ ಕಾನೂನು ಸಂಸದೀಯ |
| ಜೆ.ಸಿ. ಮಾಧುಸ್ವಾಮಿ | ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ |
| ಸಿ ಸಿ ಪಾಟೀಲ್ | ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ |
| ಅರವಿಂದ ಲಿಂಬಾವಳಿ | ಅರಣ್ಯ ಖಾತೆ |
| ಮುರುಗೇಶ್ ನಿರಾಣಿ | ಗಣಿಗಾರಿಕೆ |
| ಕೋಟ | ಮುಜರಾಯಿ ಜೊತೆ ಹಿಂದುಲಿದ ವರ್ಗ |
| ಡಾ. ಕೆ ಸುಧಾಕರ್ | ಆರೋಗ್ಯ ಇಲಾಖೆ |
| ಆನಂದ್ ಸಿಂಗ್ | ಪ್ರವಾಸೋದ್ಯಮ, ಪರಿಸರ |
| ಸಿ ಪಿ ಯೋಗೇಶ್ವರ್ | ಸಣ್ಣ ನೀರಾವರಿ |
| ಪ್ರಭು ಚೌಹಾಣ್ | ಪಶುಸಂಗೋಪನೆ |
| ಆರ್ ಶಂಕರ್ | ಪೌರಾಡಳಿತ ಮತ್ತು ರೇಶ್ಮೆ |
| ಗೋಪಾಲಯ್ಯ | ತೋಟಗಾರಿಕೆ ಮತ್ತು ಸಕ್ಕರೆ |
| ನಾರಾಯಣ ಗೌಡ | ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್ |












Click it and Unblock the Notifications