Cabinet Ministers: ಸಿದ್ದು ಸಿಎಂ,ಡಿಕೆಶಿ ಡಿಸಿಎಂ: ಸಂಪುಟ ರಚನೆ ಕಸರತ್ತು ಯಾರ ಬಣಕ್ಕೆ ಎಷ್ಟು ಮಂತ್ರಿ ಸ್ಥಾನ?
ಬೆಂಗಳೂರು, ಮೇ 18: ಕರ್ನಾಟಕ ಚುನಾವಣಾ ಫಲಿತಾಂಶ ಬಂದು ಕಳೆದು ಐದು ದಿನಗಳ ಬಳಿಕ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಹಲವು ಸುತ್ತಿನ ಮಾತುಕತೆ ನಡೆಸಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನವನ್ನ ನೀಡಿದ್ದು, ಡಿ ಕೆ ಶಿವಕುಮಾರ್ ಗೆ ಉಪಮುಖ್ಯಮಂತ್ರಿ ಸ್ಥಾನವನ್ನ ನೀಡಿದೆ.
ಇತ್ತ ಕೊನೆಗೂ ಐದು ದಿನಗಳ ಬಳಿಕ ಮುಖ್ಯಮಂತ್ರಿ ಯಾರು? ಉಪಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಉಪಮುಖ್ಯಮಂತ್ರಿ ಸ್ಥಾನ ನನಗೂ ಬೇಕು ಎಂದು ಹಲವು ಹಿರಿಯ ನಾಯಕರು ತಮ್ಮ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಒಂದೇ ಡಿಸಿಎಂ ಸ್ಥಾನ ಎಂದು ಸ್ಪಷ್ಟ ಪಡಿಸಿದರು ಸಹ , ಹಲವು ನಾಯಕರು ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನೂ ಸಿಎಂ ಹಾಗೂ ಡಿಸಿಎಂ ಸ್ಥಾನಕ್ಕಾಗಿಯೇ ಕಳೆದ ನಾಲ್ಕೈದು ದಿನಗಳಿಂದ ಹೈಕಮಾಂಡ್ ಪಟ್ಟದಲ್ಲಿ ಚರ್ಚೆಯಾಗಿದ್ದು, ಇದೀಗ ಸಚಿವ ಸಂಪುಟಕ್ಕೆ ಯಾರ್ಯಾರು ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಜೋರಾಗಿದೆ. ಈಗಾಗಲೇ ಟಿಕೆಟ್ ಹಂಚಿಕೆ ವಿಚಾರದಿಂದ ಹಿಡಿದು ಎಲ್ಲಾ ವಿಚಾರದಲ್ಲೂ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಣದ ನಡುವೆ ಹಲವು ವಿಚಾರಗಳಲ್ಲಿ ಪೈಪೋಟಿ ಶುರುವಾಗಿದ್ದು, ಇದೀಗ ಕಾಂಗ್ರೆಸ್ ಸಂಪುಟದಲ್ಲಿ ಯಾರ ಬಣಕ್ಕೆ ಎಷ್ಟು ಸಚಿವ ಸ್ಥಾನ ಎಂಬ ಚರ್ಚೆ ಜೋರಾಗಿದೆ.
ಈಗಾಗಲೇ ಸಂಪುಟದಲ್ಲಿ ನನಗೂ ಸಹ ಮಂತ್ರಿ ಸ್ಥಾನ ಬೇಕು ಎಂದು ಹಲವು ಶಾಸಕರು ಲಾಬಿಯನ್ನ ಶುರು ಮಾಡಿದ್ದು, ಈ ಬಾರಿ ಸಂಪುಟದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮ್ಮ ಬಣಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿಯವ ಸಾಧ್ಯತೆ ಹೆಚ್ಚಾಅಗಿದೆ. ಹಾಗಾದರೆ ಯಾರ ಬಣಕ್ಕೆ ಎಷ್ಟು ಸಚಿವ ಸ್ಥಾನ ಸಿಗಬಹುದು? ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ
ಸಿದ್ದರಾಮಯ್ಯ ಬಣದಲ್ಲಿ ಯಾರಿಗೆ ಮಂತ್ರಿ ಭಾಗ್ಯ?
ಬಸವರಾಜ ರಾಯರೆಡ್ಡಿ
ಕೆ.ಜೆ ಜಾರ್ಜ್
ಜಮೀರ್ ಅಹ್ಮದ್
ದಿನೇಶ್ ಗುಂಡೂರಾವ್
ಎಂ.ಬಿ ಪಾಟೀಲ್
ಈ ತುಕರಾಂ
ರಹೀಮ್ ಖಾನ್

ರಾಘವೇಂದ್ರ ಹಿಟ್ನಾಳ್
ಎಸ್. ಎಸ್ ಮಲ್ಲಿಕಾರ್ಜುನ
ಶಿವಲಿಂಗೇಗೌಡ
ಟಿ.ಬಿ ಜಯಚಂದ್ರ
ಈಶ್ವರ ಖಂಡ್ರೆ
ಅಜಯ್ ಸಿಂಗ್
ಸತೀಶ್ ಜಾರಕಿಹೊಳಿ
ಕೃಷ್ಣಭರೇಗೌಡ
ವಿನಯ್ ಕುಲಕರ್ಣಿ
ಯು.ಟಿ ಖಾದರ್
ಡಾ ಎಚ್ ಸಿ ಮಹದೇವಪ್ಪ
ಡಿ.ಕೆ ಶಿವಕುಮಾರ್ ಬಣದಲ್ಲಿ ಯಾರಿಗೆ ಸಚಿವ ಸ್ಥಾನ?
ಕುಣಿಗಲ್ ರಂಗನಾಥ್
ಎಸ್ ರವಿ
ಲಕ್ಷ್ಮೀ ಹೆಬ್ಬಾಳ್ಕರ್
ತನ್ವೀರ್ ಸೇಠ್
ಮಧು ಬಂಗಾರಪ್ಪ
ಹೈಕಮಾಂಡ್ ಬಣದಲ್ಲಿ ಯಾರಿಗೆ ಸಂಪುಟ ಭಾಗ್ಯ?
ಬಿ.ಕೆ ಹರಿಪ್ರಸಾದ್
ಡಾ.ಜಿ ಪರಮೇಶ್ವರ್
ಕೆ.ಎಚ್ ಮುನಿಯಪ್ಪ
ಪ್ರಿಯಾಂಕಾ ಖರ್ಗೆ
ರಾಮಲಿಂಗರೆಡ್ಡಿ
ಜಗದೀಶ್ ಶೆಟ್ಟರ್
ಲಕ್ಷ್ಮಣ ಸವದಿ












Click it and Unblock the Notifications