ಬೆಂಗಳೂರು, ಜುಲೈ 29: ಧ್ವನಿ ಮತದ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ಗೆದ್ದಿದ್ದಾರೆ. ಹಾಗೆಯೇ ಮೂರು ತಿಂಗಳಿಗೆ ಲೇಖಾನುದಾನ ಮಂಡಿಸಿದ್ದಾರೆ.
ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ಶುಕ್ರವಾರ ಪದಗ್ರಹಣ ಮಾಡಿರುವ ಬಿ. ಎಸ್. ಯಡಿಯೂರಪ್ಪ ಇವತ್ತು ವಿಶ್ವಾಸಮತವನ್ನು ಸಾಬೀತುಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧದ ರಾಜ್ಯ ರಾಜಕಾರಣದ ಸುದ್ದಿಕೇಂದ್ರವಾಗಿದೆ.
ಧನ ವಿನಿಯೋಗ ವಿಧೇಯಕ, ಯಡಿಯೂರಪ್ಪ ವಿಶ್ವಾಸಮತ ಹಾಗೂ ಪೂರಕ ಬಜೆಟ್ಗೆ ಇಂದು ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
"ಧನವಿನಿಯೋಗ ವಿಧೇಯಕಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲಿಸುತ್ತವೆ ಅಂದುಕೊಂಡಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ, ಎಲ್ಲ ಪಕ್ಷಗಳ ಸಹಕಾರ ಪಡೆದು, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಯ ನಿರ್ಧಾರ ಮಾಡಿದ್ದೇನೆ," ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಶಾಸಕಾಂಗ ಸಭೆಯ ಬಗ್ಗೆ ವಿವರ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, 105 ಪಕ್ಷದ ಶಾಸಕರಲ್ಲದೇ ಒಬ್ಬರು ಪಕ್ಷೇತರ ಅಭ್ಯರ್ಥಿಗಳು ಬೆಂಬಲಿಸುವ ಸಾಧ್ಯತೆ ಇದೆ.
ವಿಶ್ವಾಸಮತದ ಹಿನ್ನೆಲೆಯಲ್ಲಿ ಬಿಜೆಪಿ ವಿಪ್ ಜಾರಿ ಮಾಡಲಾಗಿದ್ದು, ಎಲ್ಲ ಶಾಸಕರು ಹಾಜರಾಗುವಂತೆ ನೋಡಿಕೊಳ್ಳುವಂತೆ 12 ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಧನ ವಿನಿಯೋಗ ವಿಧೇಯಕ ಅಂಗೀಕಾರಕ್ಕೆ ಸಹಕರಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರನ್ನು ಕೋರಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ಹಾದಿ ಸುಲಭವಾಗಿದೆ.
ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ಡಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆ ಪರಸ್ತಾವನೆ ಮೇಲೆ ನಡೆದ ದೀರ್ಘ ಚರ್ಚೆಯ ಬಳಿಕ ಮಂಗಳವಾರ ನಡೆದ ಕಲಾಪದಲ್ಲಿ ವಿಶ್ವಾಸಮತ ಪಡೆಯಲು ವಿಫಲರಾಗಿದ್ದರು.
ಪ್ರಸಕ್ತ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನ್ವಯವಾಗುವಂತೆ ಎಲ್ಲಾ 14 ಶಾಸಕರನ್ನು ಅನರ್ಹಗೊಳಿಸ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಈ ವಿಚಾರ ಸೋಮವಾರ ನ್ಯಾಯಾಲಯದ ಮೆಟ್ಟಿಲೇರಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ, ನ್ಯಾಯಾಲಯಗಳು ಹಾಗೂ ರಾಜಕೀಯ ಪಡಸಾಲೆಯಲ್ಲಿ ನಡೆಯುವ ದಿನ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.
Jul 29, 2019, 12:37 pm IST
ಮಾಜಿ ಡಿಸಿಎಂ ಪರಮೇಶ್ವರ ಸದನಕ್ಕೆ ಗೈರು, ಪರಮೇಶ್ವರ ಪತ್ನಿ ಕನ್ನಿಕಾ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ.
Jul 29, 2019, 12:30 pm IST
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ರಾಜೀನಾಮೆ ಹಿನ್ನೆಲೆ ವಿಧಾನಸಭೆ ಕಲಾಪ ಮುನ್ನಡೆಸಲಿರುವ ಡೆಪ್ಯುಟಿ ಸ್ಪೀಕರ್ ಕೃಷ್ಣಾ ರೆಡ್ಡಿ
Jul 29, 2019, 12:27 pm IST
ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.ವಿಧಾನಸಭಾ ಕಲಾಪವನ್ನು ಸಂಜೆ 5 ಗಂಟೆಗೆ ಮುಂದೂಡಲಾಗಿದೆ.
Jul 29, 2019, 12:24 pm IST
ಯಾರ ಬಳಿ ಎಷ್ಟು ಆಸ್ತಿ ಇದೆ ಎನ್ನುವ ತಣಿಕೆ ತಕ್ಷಣವೇ ನಡೆಸಬೇಕು. ಕೆಲಸಕ್ಕೆ ಬಾರದಂತಹ ಪ್ರಾವಿಜನ್ಸ್ ಇಡಬಾರದು, ತಕ್ಷಣ ತನಿಖೆ ನಡೆಸಬೇಕು. ಸಾರ್ವಜನಿಕರಿಗೆ ನೆಮ್ಮದಿ ಸಿಗುತ್ತೆ-ರಮೇಶ್ ಕುಮಾರ್
Jul 29, 2019, 12:19 pm IST
ಈ ದೇಶದ ಭ್ರಷ್ಟಾಚಾರದ ಮೂಲ ಚುನಾವಣೆ ವ್ಯವಸ್ಥೆ, ಅದನ್ನು ಸರಿ ಮಾಡದೆ ಭ್ರಷ್ಟಾಚಾರದ ಮಾತನಾಡಿದರೆ ಅದು ಕಾಟಾಚಾರವಾಗುತ್ತದೆ, ಬದ್ಧತೆಯ ಮಾತು ಆಗುವುದಿಲ್ಲ, ಶ್ರೀಸಾಮಾನ್ಯ ಚುನಾವಣೆಯಲ್ಲಿ ಭಾಗವಹಿಸಬೇಕು, ಸಾಮಾನ್ಯ ಜನರ ವಿಶ್ವಾಸ ಹೆಚ್ಚಾಗಬೇಕಿದ್ದರೆ ಎಲೆಕ್ಟೋರಲ್ ರಿಫಾರ್ಮ್ಸ್ ಅಗತ್ಯ- ರಮೇಶ್ ಕುಮಾರ್
Jul 29, 2019, 12:16 pm IST
14 ತಿಂಗಳ ಕಾಲ ಸರ್ವಾನುಮತದಿಂದ ಆಯ್ಕೆ ಯಾಗಿ ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದ್ದೇನೆ..ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಸೋನಿಯಾಗಾಂಧಿ..ರಾಹುಲ್ ಗಾಂಧಿ ಸೂಚನೆಯಂತೆ ಸ್ಪೀಕರ್ ಸ್ಥಾನ ಅಲಂಕರಿಸಿದೆ. ಇಡೀ ಸದನ ಸರ್ವಾನುಮತದಿಂದ ಆರಿಸಿತ್ತು. 14 ತಿಂಗಳಲ್ಲಿ ಸಿಬ್ಬಂದಿ.. ಅಧಿಕಾರಿಗಳು ಸಹಕರಿಸಿದ್ದಾರೆ, ಕೋಪದಿಂದ ಮಾತನಾಡಿದ್ರೆ ತಪ್ಪು ತಿಳಿಬೇಡಿ- ರಮೇಶ್ ಕುಮಾರ್
Jul 29, 2019, 12:12 pm IST
ರಾಜಕಾರಣದಲ್ಲಿ ಕೆಲವು ಘಟನೆಗಳು ಸಂಭವಿಸಿದಾಗ, ವಿವೇಚನೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ನಾವು ಅಲಂಕರಿಸಿದ ಸ್ಥಾನ ದೊಡ್ಡದು, ನಾವು ಸಣ್ಣವರು, ಇಂತಹ ಅವಕಾಶ ಒದಗಿ ಬಂದಾಗ, ನಾವು ಇಲ್ಲಿರುವವರೆಗೆ ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದೇನೆ- ರಮೇಶ್ ಕುಮಾರ್
Jul 29, 2019, 12:10 pm IST
ಪೂರಕ ಬಜೆಟ್ ಮಂಡಿಸಿದ ಯಡಿಯೂರಪ್ಪ, 3,327 ಕೋಟಿ ರೂ ಪೂರಕ ಬಜೆಟ್ ಅಧಿವೇಶನದಲ್ಲಿ ಅಂಗೀಕಾರ
Jul 29, 2019, 12:03 pm IST
ಸಪ್ಲಿಮೆಂಟರಿ ಬಜೆಟ್ನ್ನು ಚರ್ಚೆ ಇಲ್ಲದೆ ಹಾಗೆಯೇ ಪಾಸ್ ಮಾಡಲು ಸಾಧ್ಯವಿಲ್ಲ, ನಾವು ಒಪ್ಪುವುದಿಲ್ಲ 3,327 ಸಾವಿರ ಕೋಟಿ ಬಜೆಟ್ನ್ನು ಚರ್ಚೆ ಮಾಡದೆ ಹಾಗೆಯೇ ಒಪ್ಪಿಕೊಳ್ಳಲು ಆಗುತ್ತದೆಯೇ-ಸಿದ್ದರಾಮಯ್ಯ
Jul 29, 2019, 11:55 am IST
ಹಣಕಾಸು ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತವಾಗಿದೆ- ರಮೇಶ್ ಕುಮಾರ್
Jul 29, 2019, 11:54 am IST
ಇಲ್ಲಿ ಕೂತವರು ಯಾರಾದರೂ ಸ್ಪೀಕರ್ ಸರಿಯಿಲ್ಲ ಅನ್ನಬಹುದು, ಆದರೆ ಆರೂವರೆ ಕೋಟಿ ಜನ ಸ್ಪೀಕರ್ ಸರಿಯಿದ್ದಾರೆ, ಸ್ಪೀಕರ್ ತಲೆ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದ ಪಾಟೀಲ್.
Jul 29, 2019, 11:54 am IST
ಪಾಟೀಲ್ ಭಾಷಣದ ವೇಳೆ ಸರಿಯಾಗಿ ಕೇಳಿಸದ ಮೈಕ್ , ಆಗ ಮೈಕ್ ಸರಿಯಾಗಿ ಕೇಳಿಸುತ್ತಿಲ್ಲ, ಮೈಕ್ ಸರಿಯಾಗಿಲ್ಲ ಅಂದರೆ ಸ್ಪೀಕರ್ ಸರಿಯಾಗಿಲ್ಲ ಅಂತಾರೆ, ಇಲ್ಲಿ ಸ್ಪೀಕರ್ ಸರಿಯಿದೆ ಎಂದ ಸ್ಪೀಕರ್ ರಮೇಶ್ ಕುಮಾರ್
Jul 29, 2019, 11:52 am IST
ಸರ್ಕಾರವು ಇವತ್ತು , ನಾಳೆ ಸದನ ಕರೆದಿದೆ, ನಾಳೆ ಈ ಸದನದಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಯಾಗಬೇಕು. ಇದು ಒಂದು ಅಥವಾ ಎರಡು ರೂ ವಿಷಯ ಅಲ್ಲ. ಇಷ್ಟು ದೊಡ್ಡ ಮತ್ತದ ಲೇಖಾನುದಾನವನ್ನು ಯಾವುದೇ ಚರ್ಚೆ ಇಲ್ಲದೆ ಮುಗಿಸಿದರೆ ಸಂವಿಧಾನದಲ್ಲಿ ಕಪ್ಪು ಪುಟವಾದಂತಾಗುತ್ತದೆ-ಎಚ್ಕೆ ಪಾಟೀಲ
Jul 29, 2019, 11:49 am IST
ಲೇಖಾನುದಾನ 3 ತಿಂಗಳಿಗೆ ತೆಗೆದುಕೊಳ್ಳುವುದು ಸರಿಯಿಲ್ಲ ಎಂಟು ತಿಂಗಳಿಗೆ
ಮಂಡನೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Jul 29, 2019, 11:46 am IST
ಮೂರು ತಿಂಗಳಿಗೆ ಲೇಖಾನುದಾನ ಪಡೆಯುವ ಅಗತ್ಯವಿದೆ-ಯಡಿಯೂರಪ್ಪ
Jul 29, 2019, 11:44 am IST
ಹಣಕಾಸು ವಿಧೇಯಕ ಮಂಡನೆಗೆ ಯಡಿಯೂರಪ್ಪ ಚಾಲನೆ
Jul 29, 2019, 11:42 am IST
ಧ್ವನಿ ಮತದ ಮೂಲಕ ವಿಶ್ವಾಸ ಗೆದ್ದ ಸಿಎಂ ಯಡಿಯೂರಪ್ಪ
Jul 29, 2019, 11:41 am IST
ಸದಾಕಾಲ ನಿಮ್ಮ ಸಹಕಾರವನ್ನು ಬಯಸುತ್ತೇನೆ, ನಾವು ತೆಗೆದುಕೊಂಡಿರುವ ತೀರ್ಮಾನಗಳು ಜನರಿಗೆ ಧಕ್ಕೆಯಾಗುತ್ತದೆ ಎಂದು ನಿಮಗೆ ಅನಿಸಿದರೆ, ಯಾವುದೇ ಒಂದು ವಿಶೇಷ ಕಾರಣಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅವಕಾಶ ಸಿಕ್ಕಾಗ, ಪ್ರತಿ ಕ್ಷಣ ನಾಡಿನ ಜನರ ಕಲ್ಯಾಣದ ದೃಷ್ಟಿಯಿಂದ ಕೆಲಸ ಮಾಡುತ್ತೇನೆ ಸಹಕಾರ ನೀಡಿ-ಯಡಿಯೂರಪ್ಪ
Jul 29, 2019, 11:39 am IST
ನಿಮ್ಮ ಅವ್ಯವಹಾರಗಳಿಗೆ ಬೆಂಬಲ ಕೊಡುವುದಿಲ್ಲ, ನಾಡಿನ ಆಸ್ತಿಗಳನ್ನು ಉಳಿಸುವುದರಲ್ಲಿ, ನಾಡನ್ನು ಕಟ್ಟುವ ವಿಷಯದಲ್ಲಿ ಬೆಂಬಲ ಕೊಡುತ್ತೀವೆ, ಅಕ್ರಮ ನಡೆದಾಗ ಜನರ ಪರವಾಗಿ ನಿಲ್ಲುತ್ತೇವೆ-ಕುಮಾರಸ್ವಾಮಿ
Jul 29, 2019, 11:37 am IST
ನಾಡಿನ ಜನತೆ ತಿಳಿವಳಿಕೆ ಇಲ್ಲದಿರುವವರು ಅಲ್ಲ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಹಲವಾರು ಜನ ಅಧಿಕಾರಕ್ಕೆ ಬಂದಿದ್ದಾರೆ, ಹೋಗಿದ್ದಾರೆ, ಆ ಕ್ಷಣದಲ್ಲಿ ಸಿಕ್ಕಿ ಅವಕಾಶದಲ್ಲಿ ನಾವು ಮಾಡಿದ ಕೆಲಸ ನಮ್ಮನ್ನು ಕಾಯುತ್ತದೆ, ಕುತಂತ್ರ ರಾಜಕಾರಣದಿಂದ ಅಧಿಕಾರ ಹಿಡಿದಿದ್ದೀರಿ, ಯಾರಿಂದಲೂ ಅಧಿಕಾರ ಹಿಡಿದಿಲ್ಲ, ಅಧಿಕಾರಕ್ಕೆ ಬಂದ ನಂತರವಾದಲೂ ಒಳ್ಳೆಯ ಕಾರ್ಯವನ್ನು ಮಾಡಿ- ಎಚ್ಡಿ ಕುಮಾರಸ್ವಾಮಿ
Jul 29, 2019, 11:34 am IST
ಅಪವಿತ್ರ ಸರ್ಕಾರವನ್ನು ತೆಗೆದು, ಪವಿತ್ರವಾದ ಸರ್ಕಾರ ತಂದು ನಿಲ್ಲಿಸಿದ್ದೇನೆ ಎಂದು ನೀವು ಹೇಳುತ್ತಿದ್ದೀರಾ,ಅವರನ್ನು ನಡುನೀರಿನಲ್ಲಿ ಕೈಬಿಡಬೇಡಿ. ಅತೃಪ್ತರು ಯಾವಾಗ ಪಿಶಾಚಿಗಳಾಗುತ್ತಾರೋ ಗೊತ್ತಿಲ್ಲ, ನನಗಂತೂ ಅಂತಹ ಶಾಸಕರ ಬಗ್ಗೆ ಮಾಹಿತಿ ಇಲ್ಲ -ಕುಮಾರಸ್ವಾಮಿ
Jul 29, 2019, 11:31 am IST
ರಾಜಕೀಯ ಜೀವನ, ಅಧಿಕಾರದಿಂದ ನಿರ್ಗಮಿಸುವಂತಹ ಸಮಯದಲ್ಲಿ, ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ- ಕುಮಾರಸ್ವಾಮಿ
ಹಲವಾರು ಅಡಚಣೆ ಗಳ ಮಧ್ಯೆ 14 ತಿಂಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಮ್ಮದು ಪಾಪದ ಸರ್ಕಾರ ಎಂದು ಹೇಳಿದ್ದಾರೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಮೈತ್ರಿ ಸರ್ಕಾರದಲ್ಲಿ ನನ್ನ ಇತಿಮಿತಿಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ- ಕುಮಾರಸ್ವಾಮಿ
Jul 29, 2019, 11:31 am IST
ರಾಜಕೀಯ ಜೀವನ, ಅಧಿಕಾರದಿಂದ ನಿರ್ಗಮಿಸುವಂತಹ ಸಮಯದಲ್ಲಿ, ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ನನಗೆ ನನ್ನ ಕೆಲಸದ ಮೇಲೆ ತೃಪ್ತಿ ಇದೆ- ಕುಮಾರಸ್ವಾಮಿ
Jul 29, 2019, 11:28 am IST
ನನ್ನ ಆತ್ಮಕ್ಕೆ ನಾನು ಉತ್ತರಕೊಡಬೇಕು, ಈ 14 ತಿಂಗಳ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ, ನಾವೆಲ್ಲರೂ ಒಂದಲ್ಲಾ ಒಂದು ದಿನ ಉತ್ತರ ಕೊಡಬೇಕಾಗುತ್ತದೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ, 14 ತಿಂಗಳಲ್ಲಿ ನೀವು ಬಳಸಿದ ಪದಗಳು ರೆಕಾರ್ಡ್ ಆಗಿದೆ. ನಾಡಿನ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಂಡಿದ್ದೇನೆ ಎನ್ನುವ ಕಡತವನ್ನು ನೀವು ನೋಡಬಹುದು, ಸತ್ಯಾಂಶವನ್ನು ಆ ಜಾಗದಲ್ಲಾದರೂ ಕೂತು ಜನತೆಗೆ ತಿಳಿಸಿ- ಎಚ್ಡಿ ಕುಮಾರಸ್ವಾಮಿ
Jul 29, 2019, 11:26 am IST
ಕಳೆದ 14 ತಿಂಗಳಲ್ಲಿ ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಯಂತ್ರ ಕುಸಿತವಾಗಿತ್ತು, ಎಲ್ಲಾ ಮಾಹಿತಿ ನೀಡಿ ಎಂದು ಹೇಳಲು ಹೋಗುವುದಿಲ್ಲ, ಅಧಿವೇಶನ ನಡೆದಾಗ ಸದನದ ಮುಂದೆ ಮಾಹಿತಿ ಇಡಿ, ಬಾಯಿ ಚಪಲಕ್ಕಾಗಿ ಆಧಾರ ರಹಿತ ಆರೋಪ ಮಾಡುವುದಿರಿಂದ ಯಾರಿಗೂ ಶೋಭೆ ತರುವುದಿಲ್ಲ- ಕುಮಾರಸ್ವಾಮಿ
Jul 29, 2019, 11:19 am IST
ಜನರ ಆಶೋತ್ತರವೇನಿತ್ತು ಅದರಂತೆ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದ್ದೀರಿ, ಆದರೆ ನಿಮಗೆ ಜನಾದೇಶವೇ ಇಲ್ಲ, ಕೆಲವರನ್ನು ಅತೃಪ್ತರನ್ನು ಮಾಡಿದಿರಿ, ಪ್ರಜಾಪ್ರಭುತ್ವದಲ್ಲಿ ತೃಪ್ತಿ ಯಾವಾಗ ಆಗುತ್ತೆ ಎಂದರೆ ಜನರ ನಿರೀಕ್ಷೆಯಂತೆ ನಡೆದುಕೊಳ್ಳಬೇಕು... ಸಿದ್ದರಾಮಯ್ಯ
Jul 29, 2019, 11:17 am IST
ನೀವು ಕೇಂದ್ರ ಸರ್ಕಾರದಿಂದ 6 ಸಾವಿರ ಕೊಡ್ತೀವಿ ಅಂತ ನರೇಂದ್ರ ಮೋದಿಯವರು ಮಾಡಿದ್ದಾರೆ ಅದಕ್ಕೆ ನಾಲ್ಕು ಸಾವಿರ ಸೇರಿ ಕೊಡುತ್ತೇವೆ ಎಂದು ಹೇಳಿದ್ದೀರಾ, ಒಳ ಬೇಸಾಯ ರೈತರಿಗೆ, ವರ್ಷಕ್ಕೆ 10 ಸಾವಿರದವರೆಗೆ ಕೊಡಬೇಕು ಎನ್ನುವ ರೈತ ಬೆಳಕು ಎನ್ನುವ ಯೋಜನೆ ಜಾರಿಗೆ ತಂದಿದ್ದೆವು. ನೇಕಾರರ ಸಾಲ ಕೂಡ ಮನ್ನಾ ಮಾಡಿದ್ದೆವು. ಸಿದ್ದರಾಮಯ್ಯ
Jul 29, 2019, 11:14 am IST
ರಾಜ್ಯದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿರಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಕಾಮನ್ ಮಿನಿಮಮ್ ಪ್ರೋಗ್ರಾಮ್ , ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ಮಾಡಿದ್ದೇವೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದ್ದ ಕಾರ್ಯಕ್ರಮಗಳು ಮುಂದುವರೆಸಿದ್ದೆವು. ಸಾಲಮನ್ನಾ ಮಾಡಿದ್ದರು, ಖಾಸಗಿಯವರ ಜೊತೆ ಸಾಲ ತೆಗೆದುಕೊಂಡಿರುವ ಸಾಲ ಮನ್ನಾ ಇರಬಹುದು, ಆಡಳಿತ ಯಂತ್ರ ಕುಸಿದಿರಲಿಲ್ಲ, ಜನರು ಮೆಚ್ಚುವ ರೀತಿಯಲ್ಲಿ 14 ತಿಂಗಳು ಆಡಳಿತ ನಡೆದಿದೆ.-ಸಿದ್ದರಾಮಯ್ಯ
Jul 29, 2019, 11:12 am IST
ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಅದನ್ನೂ ಸ್ವಾಗತ ಮಾಡುತ್ತೇನೆ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ ಅದನ್ನೂ ಕೂಡ ಸ್ವಾಗತ ಮಾಡುತ್ತೇನೆ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು- ಸಿದ್ದರಾಮಯ್ಯ
Jul 29, 2019, 11:12 am IST
ನಾಲ್ಕು ದಿನಗಳ ಕಾಲ ಚರ್ಚೆಯಾಗಿದೆ, ಅನೇಕ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ, ಹಾಗಾಗಿ ದೀರ್ಘ ಚಚೆ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ, ಯಡಿಯೂರಪ್ಪ ಅವರು ಯಾವ ಮಾರ್ಗದಿಂದ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವ ಬಗ್ಗೆ ಪ್ರಸ್ತಾಪ ಮಾಡಬಹುದಿತ್ತು-ಸಿದ್ದರಾಮಯ್ಯ.
READ MORE
8:31 AM, 29 Jul
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವ ಹಾದಿ ಸುಲಭವಾಗಿದೆ.
8:31 AM, 29 Jul
ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ಡಿ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆ ಪರಸ್ತಾವನೆ ಮೇಲೆ ನಡೆದ ದೀರ್ಘ ಚರ್ಚೆಯ ಬಳಿಕ ಮಂಗಳವಾರ ನಡೆದ ಕಲಾಪದಲ್ಲಿ ವಿಶ್ವಾಸಮತ ಪಡೆಯಲು ವಿಫಲರಾಗಿದ್ದರು.
8:31 AM, 29 Jul
ಪ್ರಸಕ್ತ 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನ್ವಯವಾಗುವಂತೆ ಎಲ್ಲಾ 14 ಶಾಸಕರನ್ನು ಅನರ್ಹಗೊಳಿಸ ಸ್ಪೀಕರ್ ಆದೇಶ ಹೊರಡಿಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ, ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಕಚೇರಿಯಲ್ಲಿ ಸಭೆ ನಡೆಯಲಿದೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಲ್ಪಿ ಸಭೆ ನಡೆಯಲಿದೆ.
8:57 AM, 29 Jul
ಆಡಳಿತ ಪಕ್ಷದ ವಿಧಾನಪರಿಷತ್ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ , ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಇಂದಿನ ವಿಧಾನಪರಿಷತ್ ಕಲಾಪದ ಬಗ್ಗೆ ಯಡಿಯೂರಪ್ವ ಜೊತೆ ಚರ್ಚೆ ನಡೆಸಲು ಆಗಮಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಇಂದು ಧನವಿಧೇಯಕ ಮಂಡನೆ ಬರುವ ಹಿನ್ನಲೆ ಚರ್ಚೆ ನಡೆಸಲಾಗುತ್ತಿದೆ.
9:02 AM, 29 Jul
ಸಿಎಂ ಯಡಿಯೂರಪ್ಪ ಮನೆಗೆ ಆಗಮಿಸಿದ ಡಿಜಿ ನೀಲಮಣಿ ರಾಜು ಆಗಮಿಸಿದ್ದಾರೆ, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಲು ಆಗಮಿಸಿದ ನೀಲಮಣಿರಾಜು ಬಂದಿದ್ದಾರೆ.
9:08 AM, 29 Jul
ಶ್ರೀರಂಗ ಪಟ್ಟಣದ ಬೇಬಿ ಮಠದ ಶಿವಯೋಗಿ ಸ್ವಾಮಿಗಳ ಆಗಮನ, ಬೆಳಿಗ್ಗೆಯೇ ಯಡಿಯೂರಪ್ವ ಮನೆಗೆ ಆಗಮಿಸುತ್ತಿರೋ ಸ್ವಾಮಿಜಿಗಳು ಮತ್ತು ಅಭಿಮಾನಿಗಳು ಡಾಲರ್ಸ್ ಕಾಲನಿಯ ಯಡಿಯೂರಪ್ಪ ಮನೆಮುಂದೆ ಜಮಾಯಿಸಿರೋ ಸಾರ್ವಜನಿಕರು.
9:12 AM, 29 Jul
ರಾಜಕೀಯ ಇತಿಹಾಸದಲ್ಲಿ ಯಾರೂ ಈ ರೀತಿ ಮಾಡಿಲ್ಲ, ಶಾಸಕರನ್ನು ಅನರ್ಹಗೊಳಿಸಿರುವುದು ಖಂಡನೀಯ- ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್
9:13 AM, 29 Jul
ಅನರ್ಹಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನ 17 ಶಾಸಕರು ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
9:27 AM, 29 Jul
ಯಡಿಯೂರಪ್ಪ ವಿಶ್ವಾಸ ಮತಯಾಚೆನೆಗೂ ಮುನ್ನ ಜೆಡಿ ಎಸ್ ಮಹತ್ವದ ಸಭೆ ನಡೆಸಲಿದೆ. ಶಾಸಕರ ಮಹತ್ವ ಸಭೆ ಕರೆದ ಮಾಜಿ ಸಿಎಂ ಕುಮಾರಸ್ವಾಮಿ, ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ತಾಜ್ ವೆಸ್ಟೆಂಡ್ ಹೊಟೆಲ್ ನಲ್ಲಿ ದಳಪತಿಗಳ ಸಭೆ ಬಿಜೆಪಿ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಕುರಿತು ಚರ್ಚೆ ನಡೆಯಲಿದೆ.
ನಮ್ಮನ್ನು ಪ್ರಚೋದಿಸಿದವರು ಯಾರು ಎನ್ನುವ ಕುರಿತು ಶೀಘ್ರವೇ ಬಹಿರಂಗಪಡಿಸುತ್ತೇನೆ, ಸದ್ಯಕ್ಕೆ ಕಾನೂನು ಹೋರಾಟ ಮುಂದುವರೆಸುತ್ತೇವೆ, ನ್ಯಾಯ ಸಿಗುತ್ತಿದೆ ಎನ್ನುವ ನಂಬಿಕೆ ಇದೆ - ಅನರ್ಹ ಶಾಸಕ ಮುನಿರತ್ನ
10:08 AM, 29 Jul
ಕುದುರೆ ವ್ಯಾಪಾರಕ್ಕೆ ಬಲಿಯಾಗಿಲ್ಲ, ಹಣಕ್ಕಾಗಿ ನಾವು ಈ ಕೆಲಸ ಮಾಡಿಲ್ಲ, ಯಾರು ಸತ್ತ ಮೇಲೆ ಯಾರು ಪಲ್ಲಕ್ಕಿ ಹೊರುತ್ತಾರೆ ಎಂದು ನೋಡಬೇಕು- ಮುನಿರತ್ನ
10:11 AM, 29 Jul
ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿಲ್ಲ, ಯಾರು ಮಾಡಿದ್ದಾರೋ ಗೊತಿಲ್ಲ, ನಮ್ಮ ಈ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರೇ ಕಾರಣ- ಬೈರತಿ ಬಸವರಾಜ್
10:12 AM, 29 Jul
ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚನೆ ವೇಳೆ ಕಾಂಗ್ರೆಸ್ ಸಭಾತ್ಯಾಗ ಸಾಧ್ಯತೆ, ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕುವ ಸಾಧ್ಯತೆ.
10:19 AM, 29 Jul
ಮೈತ್ರಿ ಮುಂದುವರಿಕೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಡುವೆ ಚರ್ಚೆ, ಗುಲಾಂ ನಬಿ ಆಜಾದ್ ಬೆಂಗಳೂರಿಗೆ ಆಗಮನ
10:37 AM, 29 Jul
ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಸಲುವಾಗಿ ಸ್ಪೀಕರ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಇದನ್ನು ನಾವು ಮೊದಲೇ ಊಹೆ ಮಾಡಿದ್ದೆವು. ಹೀಗಾಗಿಯೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇದೀಗ ನಾವು ಮತ್ತೆ ಕಾನೂನು ಹೋರಾಟ ಮಾಡುತ್ತೇವೆ-ಎಸ್ಟಿ ಸೋಮಶೇಖರ್
10:37 AM, 29 Jul
ವಿಧಾನಸಭೆ ಸ್ಪೀಕರ್ ಭೇಟಿ ಮಾಡಿ ವಾಪಸಾದ ಸಿಎಂ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್
10:40 AM, 29 Jul
ಅತೃಪ್ತ ಶಾಸಕರು ತಮ್ಮ ಅನರ್ಹತೆಯ ವಿಚಾರವಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್ ಶಂಕರ್ ಅರ್ಜಿ ಸಲ್ಲಿಸಿದ್ದಾರೆ.
10:45 AM, 29 Jul
ಬಿಜೆಪಿಯಿಂದ ಅಡ್ಡ ಮತದಾನ ಯಾಕ್ ಆಗುತ್ತೆ, ವಿಶ್ವಾಸಮತದಲ್ಲಿ ನಾವು ಗೆದ್ದೇ ಗೆಲ್ತೀವಿ, ಆತಂಕ ಪಡುವ ಯಾವುದೇ ಪರಿಸ್ಥಿತಿ ಇಲ್ಲ, ಮಾಧುಸ್ವಾಮಿ ಹೇಳಿಕೆ
10:50 AM, 29 Jul
ಮೈತ್ರಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದೇವೆ ಹೊರತು ಹಣ, ಅಧಿಕಾರದ ಆಮಿಷಕ್ಕೆ ಒಳಗಾಗಿಲ್ಲ. ದೇವರು ನಮಗೆ ಅಂತ ಪರಿಸ್ಥಿತಿ ತಂದಿಲ್ಲ- ಎಂಟಿಬಿ ನಾಗರಾಜ್
10:56 AM, 29 Jul
ಕಾಂಗ್ರೆಸ್ ಶಾಸಕಾಂಗ ಸಭೆ ಮುಕ್ತಾಯವಾಗಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರು ಸಭಾತ್ಯಾಗ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
10:57 AM, 29 Jul
ಸ್ಪೀಕರ್ ಆದೇಶ ಪ್ರಶ್ನೆ ಮಾಡಬಾರದು, ಸ್ಪೀಕರ್ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ, ಕೇವಲ ಮುಖ್ಯಮಂತ್ರಿಯಾಗುವುದಷ್ಟೇ ಅಲ್ಲ, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು- ದಿನೇಶ್ ಗುಂಡೂರಾವ್
10:58 AM, 29 Jul
ಮೈತ್ರಿ ವಿಶ್ವಾಸಮತ ಯಾಚನೆ ಮಾಡಲು ಕೇವಲ ಮೂರು ನಿಮಿಷಗಳ ಮಾತ್ರ ಬಾಕಿ ಇದೆ. ಸ್ಪೀಕರ್ ಅನುಮತಿ ಕೊಟ್ಟ ಮೇಲೆ ವಿಶ್ವಾಸ ಮತ ಯಾಚನೆ ಮಾಡಲಾಗುತ್ತದೆ. ಚರ್ಚೆಗೆ ಅವಕಾಶ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.