ದಸರಾ ನಂತರ ನಿಗಮ-ಮಂಡಳಿಗಳಿಗೆ ನೇಮಕಾತಿ
ಬೆಂಗಳೂರು, ಸೆ.16 : ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕಾತಿ ಮಾಡುವ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡೆಸಿದ ಸಭೆ ಪಟ್ಟಿಯನ್ನು ಅಂತಿಮಗೊಳಿಸಲು ವಿಫಲವಾಗಿದೆ. ಮೈಸೂರು ದಸರಾ ನಂತರ ಮತ್ತೊಮ್ಮೆ ಸಭೆ ಸೇರಿ ಪಟ್ಟಿಯನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ
ಮತ್ತು
ಪರಮೇಶ್ವರ್
ನಗರದ
ಖಾಸಗಿ
ಹೋಟೆಲ್ನಲ್ಲಿ
ಸೋಮವಾರ
ಸುಮಾರು
ಒಂದು
ಗಂಟೆಗಳ
ಕಾಲ
ನಿಗಮ-ಮಂಡಳಿಗಳ
ನೇಮಕಾತಿ
ಕುರಿತು
ಚರ್ಚೆ
ನಡೆಸಿದರು.
ಜಿಲ್ಲಾ
ಮಟ್ಟದ
ಕಾಂಗ್ರೆಸ್
ಘಟಕಗಳಿಗೆ
ನಿಗಮ-ಮಂಡಳಿಗಳ
ಅಧ್ಯಕ್ಷ
ಮತ್ತು
ಉಪಾಧ್ಯಕ್ಷ
ಹುದ್ದೆಯ
ಹೆಸರನ್ನು
ಶಿಫಾರಸು
ಮಾಡಲು
ಸೆ.20ರವರೆಗೆ
ಕಾಲಾವಕಾಶ
ನೀಡಲಾಗಿದೆ.
ಆದ್ದರಿಂದ
ನಂತರ
ಪಟ್ಟಿ
ಅಂತಿಮಗೊಳಿಸಬಹುದು
ಎಂದು
ತೀರ್ಮಾನ
ಕೈಗೊಳ್ಳಲಾಯಿತು.
110 ನಿಗಮ-ಮಂಡಳಿಗಳ ಬಗ್ಗೆ ಚರ್ಚೆ ನಡೆಸಿದ ಉಭಯ ನಾಯಕರು ಇವುಗಳಲ್ಲಿ ಪ್ರಮುಖವಾದವುಗಳು ಯಾವುವು ಎಂದು ಪಟ್ಟಿ ಮಾಡಿದ್ದಾರೆ. ಆದರೆ, ಸಚಿವ ಸಂಪುಟ ವಿಸ್ತರಣೆ ಮತ್ತು ಉಪ ಮುಖಖ್ಯಮಂತ್ರಿ ಹುದ್ದೆ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. [ನಿಗಮ-ಮಂಡಳಿ ನೇಮಕಕ್ಕೆ ಎಐಸಿಸಿ ಮಾರ್ಗಸೂಚಿಗಳು]
ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ದಸರಾ ನಂತರ ಒಂದು ದಿನ ನಿಗಮ-ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವ ಕುರಿತು ಚರ್ಚೆ ನಡೆಸಲಾಗುವುದು. ದಸರಾ ನಂತರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಆಯ್ಕೆ ಪ್ರಕ್ರಿಯೆ ಕಗ್ಗಂಟು : ಶಾಸಕರಿಗೆ ಶೇ 30ರಷ್ಟು ಕಾರ್ಯಕರ್ತರಿಗೆ ಶೇ 70 ರಷ್ಟು ಹುದ್ದೆಗಳನ್ನು ನೀಡಬೇಕು ಎಂದು ಹೈಕಮಾಂಡ್ ಈಗಾಗಲೇ ಕೆಪಿಸಿಸಿಗೆ ಸೂಚನೆ ನೀಡಿದೆ. ಆದ್ದರಿಂದ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ. ಪ್ರಮುಖ ನಿಗಮ-ಮಂಡಳಿಗಳಿಗೆ ಹಲವು ಶಾಸಕರು ಲಾಬಿ ನಡೆಸುತ್ತಿದ್ದು, ಪಟ್ಟಿಯನ್ನು ಅಂತಿಮಗೊಳಿಸಲು ತೊಡಕಾಗುತ್ತಿದೆ.