Get Updates
Get notified of breaking news, exclusive insights, and must-see stories!

ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ... BMTC Bus

ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಹೋರಾಟ & ಪ್ರತಿಭಟನೆಗಳು ನಡೆಯುತ್ತಿರುವ ಕಾರಣಕ್ಕೆ ಜನರಿಗೆ ಕೂಡ ಸವಾಲು ಎದುರಾಗುತ್ತಿದೆ. ಅದರಲ್ಲೂ 2025 ವರ್ಷ ಪೂರ್ತಿ ಸಾಲು ಸಾಲು ಬಂದ್ ಹಾಗೂ ಹೋರಾಟ ನಡೆದ ಕಾರಣಕ್ಕೆ ರಜೆಗಳು ಕೂಡ ಸಾಕಷ್ಟು ಸಿಕ್ಕಿದ್ದವು. ಈಗ ಮತ್ತೊಮ್ಮೆ ಈ ರೀತಿ ಇಡೀ ಕರ್ನಾಟಕದಲ್ಲೇ ಬೃಹತ್ ಹೋರಾಟಕ್ಕೆ ಈಗ ತಯಾರಿ ನಡೆದಿದೆ. ಅಂದಹಾಗೆ ಈ ಬಾರಿ ಬಸ್ ಸಿಗೋದು ಡೌಟ್ ಅನ್ನೋ ಲೆಕ್ಕಾಚಾರದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಾ ಇದ್ದಾರೆ ಸರ್ಕಾರಿ ಸಾರಿಗೆ ಸಿಬ್ಬಂದಿ. ಹೀಗಿದ್ದಾಗಲೇ ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...

ಹೌದು, ಗ್ಯಾರಂಟಿ ಯೋಜನೆಗಳ ಮೂಲಕವೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೇಶಾದ್ಯಂತ ಭರ್ಜರಿ ಸಂಚಲನ ಸೃಷ್ಟಿಸಿತ್ತು. ಅದರಲ್ಲೂ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ ಆಗಿದ್ದು, ಇದರಿಂದ ಕೋಟ್ಯಂತರ ಮಹಿಳೆಯರಿಗೆ ಉಪಯೋಗ ಕೂಡ ಆಗಿದೆ. ಪ್ರಮುಖವಾಗಿ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರು, ಶಕ್ತಿ ಯೋಜನೆಯನ್ನು ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಬಂದು ಯಶಸ್ಸು ಸಾಧಿಸಿದ್ದಾರೆ ಎಂಬ ಹೆಮ್ಮೆಯ ಮಾತುಗಳು ಕೇಳಿ ಬಂದಿದ್ದವು.

BMTC And KSRTC Staffs Are Decided To Do This From December 15 Of 2025

ಮತ್ತೊಂದು ಕಡೆ ಸ್ವತಃ ಕೇಂದ್ರ ಸರ್ಕಾರವೇ ನೀಡುವ ಸಾರಿಗೆ ವಿಭಾಗದ ಹಲವು ಪ್ರಶಸ್ತಿಗಳಲ್ಲಿ ನಮ್ಮ ಕನ್ನಡಿಗರ ಹೆಮ್ಮೆ ಕೆಎಸ್‌ಆರ್‌ಟಿಸಿ & ಬಿಎಂಟಿಸಿ ಗೆದ್ದು ಬೀಗಿದೆ. ಇಂತಹ ಸಮಯದಲ್ಲೇ, ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...

ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...

ಕರ್ನಾಟಕದ ಸಾರಿಗೆ ನೌಕರರು ಸರ್ಕಾರದ ಎದುರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು, ಈ ಡಿಮ್ಯಾಂಡ್ ಜಾರಿಗೆ ಬರಬೇಕು ಎಂದು ಪದೇ ಪದೇ ಹೋರಾಟ ಮಾಡುತ್ತಿದ್ದಾರೆ. ಹೀಗಿದ್ದರು ಕೂಡ ಪದೇ ಪದೇ ಸರ್ಕಾರ ತಮ್ಮ ಬೇಡಿಕೆ ಈಡೇರಿಸಿಲ್ಲ ಎಂಬ ಆರೋಪ ಮಾಡಿ, ಇದೀಗ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಹಾಗಾದರೆ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಬಂದ್ ಆಗುತ್ತಾ? ಪ್ರಯಾಣಿಕರಿಗೆ ದಿಢೀರ್ ಆಘಾತ ಗ್ಯಾರಂಟಿ?

ನೌಕರರ ಸಂಘದಿಂದ ಎಚ್ಚರಿಕೆ ಸಂದೇಶ

ಅಂದಹಾಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 2024 ಆರಂಭದಲ್ಲೇ ಭಾರಿ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಆ ನಂತರ ಆಗಸ್ಟ್‌ನಲ್ಲಿ ಮುಷ್ಕರಕ್ಕೆ ಕರೆ ನೀಡಿ, ನ್ಯಾಯಾಲಯದಿಂದ ಸೂಚನೆ ಸಿಕ್ಕಿದ್ದ ಹಿನ್ನೆಲೆ ಮುಷ್ಕರ ಕೈಬಿಡಲಾಗಿತ್ತು. ಆದರೆ ಡಿಸೆಂಬರ್ 15 ಸೋಮವಾರದಿಂದ ವಿಶಿಷ್ಠವಾಗಿ ಮುಷ್ಕರಕ್ಕೆ ಸಾರಿಗೆ ನೌಕರರು ಸಿದ್ಧತೆ ನಡೆಸಿದ್ದಾರೆ. 39 ತಿಂಗಳ ಹಿಂಬಾಕಿ ಸೇರಿ ಶೇಕಡಾ 25ರಷ್ಟು ವೇತನ ಹೆಚ್ಚಳ ಮತ್ತಿತರ ಬೇಡಿಕೆ ಮುಂದಿಟ್ಟು ಈಗ ಹೋರಾಟ ಆರಂಭಿಸೋದಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಖುದ್ದಾಗಿ ಸಾರಿಗೆ ನೌಕರರ ಸಂಘದ ಮುಖಂಡರೇ ಸಿಬ್ಬಂದಿಯ ಮನವೊಲಿಸಿ ಮುಷ್ಕರ ಆರಂಭಿಸುವ ಸಾಧ್ಯತೆ ಇದ್ದು, ಶೀಘ್ರ ಬೇಡಿಕೆ ಈಡೇರಿಸದೇ ಇದ್ದರೆ ಮತ್ತೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಓಡಾಟವು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್ ಅವರು ಇದೀಗ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+