ಪರಿಷತ್ ಫೈಟ್; ಕುಟುಂಬ ರಾಜಕೀಯದ ಬಗ್ಗೆ ಬಿಜೆಪಿ ಟ್ವೀಟ್!
ಬೆಂಗಳೂರು, ನವೆಂಬರ್ 23; ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿತ್ತು. ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ದಿನದಿಂದ ಕುಟುಂಬ ರಾಜಕೀಯದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿದೆ.
ಹಾಸನ ಸ್ಥಳೀಯ ಸಂಸ್ಥೆಗಳಿಂದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮೊಮ್ಮಗ ಡಾ. ಸೂರಜ್ ರೇವಣ್ಣ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹಬ್ಬಿದ ತಕ್ಷಣ ರಾಜ್ಯದಲ್ಲಿ ಕುಟುಂಬ ರಾಜಕೀಯದ ಚರ್ಚೆ ಆರಂಭವಾಯಿತು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಕುಟುಂಬ ರಾಜಕೀಯದ ಚರ್ಚೆ ನೆಡೆಯುತ್ತಿದೆ. ಅಂತಿಮವಾಗಿ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಸಾಮಾನ್ಯ ಜನರಿಗೆ ಇಲ್ಲವಾಗಿದೆ.
ಪರಿಷತ್ ಚುನಾವಣೆ; ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕೀಯ ಮುಂದುವರೆದಿದೆ. ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿಯೂ ಕುಟುಂಬ ರಾಜಕೀಯವಿದೆ ಎಂಬುದನ್ನು ಮರೆತಿದ್ದಾರೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವುದರಿಂದ ಕುಟುಂಬ ರಾಜಕೀಯದ ಬಗ್ಗೆ ಮಾತನಾಡಿ ಜನರಿಗೆ ಏನೂ ಉಪಯೋಗವಿಲ್ಲವಾಗಿದೆ.
ಪರಿಷತ್ ಚುನಾವಣೆ, ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ
ಮಂಗಳವಾರ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ನ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡಿದೆ. ವಿವಿಧ ರಾಜಕೀಯ ನಾಯಕರು ಪರಿಷತ್ ಚುನಾವಣೆಯಲ್ಲಿನ ಕುಟುಂಬ ರಾಜಕೀಯದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ.
ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
|
ಒಂದೇ ಕುಟುಂಬದ 8 ಜನರು ಅಧಿಕಾರದಲ್ಲಿ
"ಜೆಡಿಎಸ್ ಪಕ್ಷದಲ್ಲಿ ಒಂದೇ ಕುಟುಂಬದ ಎಂಟು ಜನರು ಅಧಿಕಾರ ಹಂಚಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಸ್ವಲ್ಪ ಉದಾರಿ!. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಆರಂಭವಾಗಿ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಆಯ್ಕೆಯವರೆಗೆ ಕಾಂಗ್ರೆಸ್ ಪಕ್ಷ ಕುಟುಂಬವಾದಕ್ಕೆ ಮನ್ನಣೆ ನೀಡಿದೆ" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.
|
ಕಾಂಗ್ರೆಸ್, ಜೆಡಿಎಸ್ ಜಿದ್ದಿಗೆ ಬಿದ್ದಿವೆ
"ಕುಟುಂಬ ರಾಜಕಾರಣದ ವಿಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜಿದ್ದಿಗೆ ಬಿದ್ದಂತಿವೆ. ಕುಟುಂಬ ರಾಜಕಾರಣದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ವಿಶೇಷ ಸಾಧನೆ ಮಾಡಿದೆ. ಏಳು ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿರುವುದು ಸಾಮಾನ್ಯ ಸಾಧನೆಯೇ?" ಎಂದು ಕರ್ನಾಟಕ ಬಿಜೆಪಿ ಟ್ವೀಟ್ನಲ್ಲಿ ಪ್ರಶ್ನೆ ಮಾಡಿದೆ.
|
ಕಾಂಗ್ರೆಸ್ ಕುಟುಂಬ ರಾಜಕೀಯ
ಕಾಂಗ್ರೆಸ್ ಮತ್ತು ಕುಟುಂಬ ರಾಜಕಾರಣ ಎಂದು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವ ಕಾಂಗ್ರೆಸ್ ನಾಯಕರ ಬಗ್ಗೆ ಮಾಹಿತಿ ನೀಡಿದೆ.
* ಎಸ್. ರವಿ - ಡಿಕೆಶಿ ಸಂಬಂಧಿ
* ಚನ್ನರಾಜ್ ಹಟ್ಟಿಹೊಳಿ - ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ
* ಭೀಮರಾವ್ ಪಾಟೀಲ್ - ರಾಜಶೇಖರ್ ಹುಮನಾಬಾದ್ ಸೋದರ
* ಸುನೀಲ್ ಗೌಡ ಪಾಟೀಲ್ - ಎಂ.ಬಿ. ಪಾಟೀಲ್ ಸಹೋದರ
|
ಕಾಂಗ್ರೆಸ್ ಉದಾರೀಕರಣ
ಕಾಂಗ್ರೆಸ್ ಮತ್ತು ಕುಟುಂಬ ರಾಜಕಾರಣ ಎಂದು ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ ಪರಿಷತ್ ಚುನಾವಣೆ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಕುಟುಂಬವಾದದಲ್ಲೂ ಕಾಂಗ್ರೆಸ್ ಉದಾರೀಕರಣ ಎಂದು ಲೇವಡಿ ಮಾಡಿದೆ.
* ಆರ್. ರಾಜೇಂದ್ರ - ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ
* ಭೀಮಣ್ಣ ನಾಯ್ಕ್ - ಮಾಜಿ ಸಿಎಂ ಬಂಗಾರಪ್ಪ ಸಂಬಂಧಿ
* ಶರಣಗೌಡ ಅನ್ನದಾನ - ಶಾಸಕ ಅಮರೇಗೌಡ ಭಯ್ಯಾಪುರ ಸಹೋದರನ ಪುತ್ರ
Recommended Video
ಡಾ. ಸೂರಜ್ ರೇವಣ್ಣ ಹೇಳಿಕೆ
ಕುಟುಂಬ ರಾಜಕೀಯದ ಟೀಕೆಗಳಿಗೆ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ ತಿರುಗೇಟು ನೀಡಿದ್ದಾರೆ. ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬೆಳಗಾಂನಿಂದ ಕನಕಪುರದವರೆಗೂ ತಗೊಳ್ಳಿ. ಒಂದೊಂದು ಕುಟುಂಬದಲ್ಲಿ ಎಷ್ಟೆಷ್ಟು ಜನ ಇದ್ದಾರೆ ಅಂಥಾ ಲೆಕ್ಕ ಹಾಕಿ. ನಾನು ಹೆಸರು ಹೇಳಲು ಬಯಸಲ್ಲ, ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಇದ್ದಿದ್ದೇ ಅದು" ಎಂದರು.
"ಕುಟುಂಬ
ರಾಜಕಾರಣ
ಅಂಥಾ
ನೀವು
ಹೊಸದಾಗಿ
ಹೇಳುತ್ತಿದ್ದೀರಾ?.
ದೇವೇಗೌಡರ
ಕುಟುಂಬ
ಬಂದಾಗ
ಮಾತ್ರ
ಕುಟುಂಬ
ರಾಜಕಾರಣ
ತರ್ತಾರೆ.
ಎಲ್ಲಾ
ರಾಜಕೀಯ
ವ್ಯಕ್ತಿಗಳ
ಮನೆಯಲ್ಲಿ
ನಾಲ್ಕೈದು
ಜನ
ಇದ್ದಾರೆ.
ನಮ್ಮ
ತಾತ
ಅವರು
ಧೃಡವಾದ
ನಿರ್ಧಾರ
ಕೈಗೊಂಡು
ನನ್ನ
ಅಭ್ಯರ್ಥಿ
ಮಾಡಿದ್ದಾರೆ.
ಸುಮಾರು
ಐವತ್ತು
ವರ್ಷಗಳಿಂದ
ನಮ್ಮ
ಕುಟುಂಬ
ರಾಜ್ಯ,
ಜಿಲ್ಲೆಯಲ್ಲಿ
ಕಳಕಳಿಯಿಂದ
ಕೆಲಸ
ಮಾಡಿಕೊಂಡು
ಬರುತ್ತಿದೆ"
ಎಂದು
ಹೇಳಿದರು.