ಕರ್ನಾಟಕದಿಂದ ಕಾಂಗ್ರೆಸ್ಗೆ ಟಾಟಾ ಹೇಳಿ : ಬಿಜೆಪಿ ವ್ಯಂಗ್ಯ
Recommended Video
ಬೆಂಗಳೂರು, ಏಪ್ರಿಲ್ 01 : 'ಇದು ಕರ್ನಾಟಕದಿಂದ ಕಾಂಗ್ರೆಸ್ಗೆ ಟಾಟಾ ಹೇಳಲು ಸೂಕ್ತ ಸಮಯ' ಎಂದು ಬಿಜೆಪಿ ಲೇವಡಿ ಮಾಡಿದೆ. ಭಾನುವಾರ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದ ಬ್ಯಾನರ್ ಇದಕ್ಕೆ ಕಾರಣವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಭಾನುವಾರ ಬೆಂಗಳೂರು ನಗರದ ಹೊರವಲಯದ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಮೈತ್ರಿಕೂಟದ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಜಂಟಿಯಾಗಿ ಸಮಾವೇಶದ ಮೂಲಕ ಚಾಲನೆ ನೀಡಿದವು.
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?
ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್
ಸಮಾವೇಶದಲ್ಲಿ ಹಾಕಿದ್ದ ಬ್ಯಾನರ್ನಲ್ಲಿ Karnataka ಎಂಬುವುದನ್ನು Karnatata ಎಂದು ತಪ್ಪಾಗಿ ಬರೆಯಲಾಗಿತ್ತು. Karnataka Pradesh Congress Committee ಎಂಬುದನ್ನು ತಪ್ಪಾಗಿ ಬರೆಯಲಾಗಿತ್ತು. ಇದನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಲೇವಡಿ ಮಾಡಿದೆ...
ಲೇವಡಿ ಮಾಡಿದ ಬಿಜೆಪಿ
ಈ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿರುವ ಬಿಜೆಪಿ 'ಇದು ಕರ್ನಾಟಕದಿಂದ ಕಾಂಗ್ರೆಸ್ಗೆ ಟಾಟಾ ಹೇಳಲು ಸೂಕ್ತ ಸಮಯ' ಎಂದು ಬಿಜೆಪಿ ಲೇವಡಿ ಮಾಡಿದೆ.
|
ಜೆಡಿಎಸ್ ಕಾಂಗ್ರೆಸ್ ಜೊತೆ ವಿಲೀನ?
ಬಿಜೆಪಿ ಟ್ವೀಟ್ಗೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಜೊತೆ ವಿಲೀನ ವಾಯಿತೇ?, ಕಾಂಗ್ರೆಸ್ ಪೋಸ್ಟರ್ನಲ್ಲಿ ಕುಮಾರಸ್ವಾಮಿ ಅವರ ಫೋಟೋ ಇದೆ ಎಂದು ಪ್ರತಿಕ್ರಿಯೆ ನೀಡಲಾಗಿದೆ.
|
ನಾನಾಗಲೇ ಟಾಟಾ ಹೇಳಿದ್ದೇನೆ
ನಾನಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಟಾಟಾ ಹೇಳಿದ್ದೇನೆ. ಈಗ ಕರ್ನಾಟಕದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಟಾಟಾ ಹೇಳಬೇಕು ಎಂದು ಟ್ವೀಟ್ ಮಾಡಲಾಗಿದೆ.
|
ರಾಹುಲ್ ಗಾಂಧಿ ಬರೆದಿರಬೇಕು
Karnataka ಎಂಬುವುದನ್ನು Karnatata ಎಂದು ತಪ್ಪಾಗಿ ರಾಹುಲ್ ಗಾಂಧಿ ಬರೆದಿರಬೇಕು ಎಂದು ಟ್ವೀಟ್ನಲ್ಲಿ ವ್ಯಂಗ್ಯವಾಡಲಾಗಿದೆ.