'ಎಬಿವಿಪಿ ಪ್ರತಿಭಟನೆ ಹಿಂದೆ ಬಿಜೆಪಿ ಕೈವಾಡವಿದೆ'
ಬೆಂಗಳೂರು, ಆಗಸ್ಟ್ 19 : 'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಎಬಿವಿಪಿಯ ಪ್ರತಿಭಟನೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು' ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರಿನಲ್ಲಿ
ಶುಕ್ರವಾರ
ಮಾತನಾಡಿದ
ಸಿದ್ದರಾಮಯ್ಯ
ಅವರು,
'ಆಮ್ನೆಸ್ಟಿ
ಇಂಟರ್
ನ್ಯಾಷನಲ್
ಇಂಡಿಯಾ
ವಿರುದ್ಧ
ದಾಖಲಾಗಿರುವ
ರಾಜದ್ರೋಹದ
ಆರೋಪದ
ಬಗ್ಗೆ
ತನಿಖೆ
ನಡೆಯುತ್ತಿದೆ.
ತನಿಖಾ
ವರದಿ
ಬಂದ
ಬಳಿಕ
ಮುಂದಿನ
ನಿರ್ಧಾರವನ್ನು
ತೆಗೆದುಕೊಳ್ಳಲಾಗುತ್ತದೆ'
ಎಂದು
ಹೇಳಿದರು.[ಆಮ್ನೆಸ್ಟಿ
ಇಂಟರ್
ನ್ಯಾಷನಲ್
ಇಂಡಿಯಾ
ಕಚೇರಿಗಳಿಗೆ
ಬೀಗ!]
'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ವಿರುದ್ಧ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆ ಹಿಂದೆ ಬಿಜೆಪಿ ಕೈವಾಡವಿದೆ. ಬಿಜೆಪಿಯ ಅಂಗ ಸಂಸ್ಥೆ ಎಬಿವಿಪಿ ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನ ನಡೆಸಿದೆ' ಎಂದು ಸಿದ್ದರಾಮಯ್ಯ ದೂರಿದರು.[Amnesty International ಬಗ್ಗೆ ತಿಳಿಯಿರಿ]
ಪರಿಶೀಲನೆ ನಡೆಯುತ್ತಿದೆ : ಎಬಿವಿಪಿ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದ ವಿಡಿಯೋ ಪರಿಶೀಲನೆ ನಡೆಯುತ್ತಿದೆ. ಘೋಷಣೆ ಕೂಗಿರುವ ಕುರಿತು ಸಾಕ್ಷಿಗಳು ಸಿಕ್ಕರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ' ಎಂದರು.