'ಗೋವಿನ ಬಗ್ಗೆ ಬಿಜೆಪಿ ಹಗಲೊಂದು, ರಾತ್ರಿಯೊಂದು ಹೇಳೋದು ನಿಲ್ಲಿಸಲಿ'
ಬೆಂಗಳೂರು, ಜೂನ್ 5: ಗೋ ಹತ್ಯೆ ನಿಷೇಧದ ಬಗ್ಗೆ ಕರುಳು ಇರಿಯುವಂತೆ ಭಾಷಣ ಕುಟ್ಟುವ ಬಿಜೆಪಿಯಲ್ಲೇ ಎರಡೆರಡು ಅಭಿಪ್ರಾಯ ಇದೆಯಾ ಎಂಬ ಅನುಮಾನ ವಾಮನಾಚಾರ್ಯ ಅವರ ಹೇಳಿಕೆಯಿಂದ ಬಯಲಾಗಿದೆ. ಹೊಸದಾಗಿ ಜಾರಿಗೆ ತರಲಿ ನಿರ್ಧರಿಸಿರುವ ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಅಧಿಸೂಚನೆ ಅಷ್ಟು ಹಾಸ್ಯಾಸ್ಪದವಾಗಿದೆ.
ಹಸುವನ್ನು ಸಾಕಣೆ ಮಾಡುವುದಕ್ಕೆ ಆಗುವ ಖರ್ಚು, ಇರುವ ಸವಾಲುಗಳ ಬಗ್ಗೆ ನಯಾಪೈಸೆ ಯೋಚನೆ ಮಾಡದೆ ಅಧಿಸೂಚನೆ ತರಲಾಗಿದೆ. ಗೋವಿನ ವಿಚಾರದಲ್ಲಿ ವಾಮನಾಚಾರ್ಯ ಅವರು ಖಡಾಖಡಿ ಮಾತನಾಡುತ್ತಿದ್ದ ಹಾಗೆ ಬಿಜೆಪಿಯ ಶಾಸಕ- ಮಾಜಿ ಸಚಿವ ಸುರೇಶ್ ಕುಮಾರ್, ಇದು ಅವರ ವೈಯಕ್ತಿಕ ಅಭಿಪ್ರಾಯ- ಅದು ಬಿಜೆಪಿ ನಿಲುವಲ್ಲ ಎಂದಿದ್ದಾರೆ.[ವಾಮನ್ ರನ್ನು ಹುದ್ದೆಯಿಂದ ಕಿತ್ತು ಹಾಕಲು ಆಗ್ರಹಿಸಿ ಮೋದಿಗೆ ಪತ್ರ]

ಈಶಾನ್ಯ ರಾಜ್ಯಗಳಲ್ಲಿ, ಕೇರಳ ಇನ್ನೂ ಕೆಲವೆಡೆ ಇಂಥ ಅಧಿಸೂಚನೆಗೆ ಬಿಜೆಪಿಯವರೇ ವಿರೋಧ ವ್ಯಕ್ತಪಡಿಸುತ್ತಾರೆ. ಅಷ್ಟೇ ಏಕೆ, ಮೈಸೂರು ಮೃಗಾಲಯದಲ್ಲಿ ಪರಿಸ್ಥಿತಿ ಏನು ಅಂತ ಬಿಜೆಪಿಯವರು ಯಾರಾದರೊಬ್ಬರು ಹೋಗಿ ವಿಚಾರಿಸಿ ನೋಡಲಿ. ಗೋ ಮಾಂಸ ಸಿಗದಿದ್ದರೆ ಮಾಂಸಾಹಾರಿ ಪ್ರಾಣಿಗಳನ್ನು ಸಾಕುವುದಕ್ಕೆ ಅದ್ಯಾವ ಪರಿ ಖರ್ಚು ಬರುತ್ತದೆ ಎಂಬುದು ತಿಳಿಯುತ್ತದೆ.
ಇನ್ನು ಈ ಅಧಿಸೂಚನೆ ಜಾರಿಗೆ ಬಂದ ಮೇಲೆ ಗೋವುಗಳನ್ನು ರಾತ್ರೋರಾತ್ರಿ ಮಾರೋ ಹಾಗಿಲ್ಲ, ಅವುಗಳು ಮೃತಪಟ್ಟರೆ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೆ ಹೂಳುವ ಹಾಗಿಲ್ಲ, ಅವುಗಳನ್ನು ಉದ್ದೇಶಪೂರ್ವಕವಾಗಿ ತೊಲಗಿಸಿ ಕೊಳ್ಳುವ ಹಾಗಿಲ್ಲ ಎಂದೆಲ್ಲ ನಿಯಮ ಮಾಡಬೇಕಾಗುತ್ತದೆ.[ಗೋಮಾಂಸ ಸೇವನೆ ಬಗ್ಗೆ ಬಿಜೆಪಿ ವಕ್ತಾರ ವಾಮನ್ ನೀಡಿದ ವಿವಾದಿತ ಹೇಳಿಕೆ]
ಬಿಡಿ, ಇದೆಲ್ಲ ಇರಲಿ. ಗೋವು ಮಾರಾಟಕ್ಕೆ ನಿಯಮ ಅಂತ ಮಾಡಿದರೆ ಇಡೀ ದೇಶದಲ್ಲಿ ಒಂದೇ ನಿಯಮ ಮಾಡಲಿ. ಮೇಘಾಲಯ, ಕೇರಳ, ಪಶ್ಚಿಮ ಬಂಗಾಲಕ್ಕೆ ಇಲ್ಲಿಗೆ ಅನ್ವಯಿಸಲ್ಲ ಅನ್ನೋದೆಲ್ಲ ಬೇಡ. ಮಾಂಸಾಹಾರ ಸೇವಿಸುವವರು ಅದರಲ್ಲೂ ಬಡ ಮುಸ್ಲಿಮರ ಪಾಲಿಗೆ ಗೋ ಮಾಂಸ ಕಡಿಮೆ ದರಕ್ಕೆ ಸಿಗುವಂಥದ್ದು. ಆ ಕಾರಣಕ್ಕೆ ಗೋ ಹತ್ಯೆ ನಿಷೇಧಕ್ಕೆ ಬಿಜೆಪಿ ಇಷ್ಟೆಲ್ಲ ಉತ್ಸುಕವಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಹೀಗಂದರೆ ಯಥಾಪ್ರಕಾರ ವಿರೋಧ ಪಕ್ಷಗಳ ಕಡೆಗೆ ಬೊಟ್ಟು ಮಾಡುವ ಸಾಧ್ಯತೆ ಇದೆ ಬಿಜೆಪಿ. ಆದ್ದರಿಂದ ಲೋಕಪಾಲ ಕಾಯ್ದೆ ಏನಾಯಿತು ಅಂತ ಗಮನ ಕೊಡಲಿ. ಅದನ್ನು ಮತ್ತು ಅಂಥ ಕಾಯ್ದೆಯನ್ನು ಜಾರಿಗೆ ತರಲಿ. ಗೋವಿನ ಮಾರಾಟದ ಬಗ್ಗೆ ಹೊರಡಿಸಿದ ಅಧಿಸೂಚನೆ ವಿಚಾರದಲ್ಲಿ ಅಭಿಪ್ರಾಯ ಮಂಡನೆ ಮಾಡುವವರಿಗೆ ಸ್ವಾಗತ.[ಬಿಜೆಪಿ ಸೋಲಿಸೋದಕ್ಕೆ ರಾಹುಲ್ ಗಾಂಧಿ ಭಗವದ್ಗೀತೆ ಓದ್ತಿದ್ದಾರಂತೆ!]
ಗೋವು, ಗೋವಿನ ಮಾರಾಟ-ಹತ್ಯೆ ಮತ್ತಿತರ ವಿಚಾರವಾಗಿ ವಾಸ್ತವ ಹಾಗೂ ತಲಸ್ಪರ್ಶಿಯಾದ ಚರ್ಚೆಯಾಗಬೇಕು. ಅದಕ್ಕೆ ಮುಂಚೆ ಈಗ ಹೊರಡಿಸಿದ ಅಧಿಸೂಚನೆಯನ್ನು ಜಾರಿಗೆ ತರಬಾರದು.
-
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications