ಬಿಜೆಪಿ, ಕಾಂಗ್ರೆಸ್ಸಿನ ಈ ಸೂಪರ್ ಫೋಟೋಗೆ ಶೀರ್ಷಿಕೆ ಕೊಡಿ!
ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಮೂರೂ ಪಕ್ಷಗಳ ಅಬ್ಬರದ ಪ್ರಚಾರದ ಕಾವೂ ಜೋರಾಗಿಯೇ ಬೀಸುತ್ತಿದೆ. ಅವರು ಇವರನ್ನು ಬೈಯುತ್ತಾ, ಇವರು ಅವರನ್ನು ತೆಗಳುತ್ತಾ, ತಾವು ಮಾತ್ರ ಸಂಭಾವಿತರಂತೆ ಫೋಸ್ ಕೊಡುತ್ತಾ ಮತದಾರರ ಮುಂದೆ ಬರುತ್ತಿದ್ದಾರೆ..ಹುಷಾರ್..
ರಾಜಕಾರಣಿಗಳಿಗಿಂತ ನಾವೇನು ಕಮ್ಮಿ ಎನ್ನುವಂತೆ ನೆಟ್ಟಿಗರು ಎಂತೆಂತಾ ಚಿತ್ರಗಳು,ಮೇಮ್ಸ್ ಗಳನ್ನಾ ಸಾಮಾಜಿಕ ತಾಣದಲ್ಲಿ ಹರಿಯ ಬಿಡುತ್ತಿದ್ದಾರೆಂದರೆ, ಅಬ್ಬಬ್ಬಾ ಮುಂದಿನ ಚುನಾವಣೆಯ ಭವಿಷ್ಯವನ್ನು ಇವರೇ ಬರೆದುಬಿಡುತ್ತಾರೆ ಎನ್ನುವರಷ್ಟು ಮಟ್ಟಿಗೆ.
ಅವರವರ ಪಕ್ಷಗಳ ಬೆಂಬಲಿಗರು, ತಮಗೆ ಸೂಕ್ತವೆನಿಸಿದ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತಿರುವುದರಿಂದ, ಒಬ್ಬರು ಇನ್ನೊಬ್ಬರ ಕಾಲೆಳೆಯುವ ಕೆಲಸವನ್ನು ಜೋರಾಗಿಯೇ ಮಾಡುತ್ತಿದ್ದಾರೆ. ಜೊತೆಗೆ, ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೊಂದಿಷ್ಟು ಕಾಮೆಂಟುಗಳು.. ಆಕ್ರೋಶಗಳು..

ಮೇಲಿನ ಚಿತ್ರವನ್ನೊಮ್ಮೆ ನೋಡಿ, ಬಹುಷ: ಇಬ್ಬರೂ ಆಟೋ ಸ್ನೇಹಿತರು ಬಿಜೆಪಿ ಮತ್ತು ಕಾಂಗ್ರೆಸ್ಸಿನ ಫೋಟೋ ಹಾಕಿಕೊಂಡು ಬೇರೆ ಬೇರೆ ಸಮಾವೇಶಕ್ಕೆ ಹೋಗಿರಬೇಕು. ದಾರಿಯಲ್ಲಿ ಬಿಜೆಪಿ ಫೋಟೋ ಹಾಕಿದ ಆಟೋ ಕೈಕೊಟ್ಟಿದೆ.
ತನ್ನ ಸ್ನೇಹಿತನ ಸಹಾಯಕ್ಕೆ ನಿಂತ ಕಾಂಗ್ರೆಸ್ ಫೋಟೋ ಹಾಕಿದ್ದ ಆಟೋ ಚಾಲಕ, ಇನ್ನೊಬ್ಬ ಆಟೋ ಚಾಲಕನಿಗೆ ಸಹಾಯ ಮಾಡುತ್ತಾನೆ. ಆ ಇಬ್ಬರು ಆಟೋ ಚಾಲಕರಲ್ಲಿದ್ದ ವ್ಯತ್ಯಾಸವೆಂದರೆ ಬಿಜೆಪಿ ಮತ್ತು ಕಾಂಗ್ರೆಸ್ ಫೋಟೋ ಮಾತ್ರವೋ ಏನೋ?
ಆದರೆ, ಇದನ್ನು ಯಾರೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದಕ್ಕೊಂದಷ್ಟು ಕಾಮೆಂಟುಗಳು. ಎರಡು ರಾಜಕೀಯ ಪಕ್ಷಗಳು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಎಷ್ಟೇ ದುಷ್ಮನಿಯಿದ್ದರೂ, ಮನಸ್ಸಿಗೆ ಮುದ ನೀಡುವ ಫೋಟೋ ಅದು.
ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಅಲ್ಲ.. ರಾಜಕಾರಣ ನಿಂತ ನೀರಲ್ಲ ಎನ್ನುವ ಪದಕ್ಕೆ ಮೇಲಿನ ಚಿತ್ರ ಕನ್ನಡಿ ಹಿಡಿದಂತಿದೆ. ಈ ಫೋಟೊಗೆ ನೀವೂ ಒಂದು ಶೀರ್ಷಿಕೆ ನೀಡಿ..
-
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications