ಬಂದ್, ಬಕ್ರೀದ್, ಗಣೇಶ ಚತುರ್ಥಿ...ಪೊಲೀಸರಿಗೆ ಬಿಡುವಿಲ್ಲ
ಬೆಂಗಳೂರು, ಸೆಪ್ಟೆಂಬರ್ 07 : ಜುಲೈ 25ರಿಂದ ಸಾರಿಗೆ ಮುಷ್ಕರ, ಜುಲೈ 30ರಂದು ಕರ್ನಾಟಕ ಬಂದ್, ಸೆಪ್ಟೆಂಬರ್ 2ರಂದು ಕಾರ್ಮಿಕ ಸಂಘಟನೆಗಳ ಬಂದ್. ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್. ಸಾಲು-ಸಾಲು ಬಂದ್ ಹಿನ್ನಲೆಯಲ್ಲಿ ಪೊಲೀಸರು ಹೈರಾಣಾಗಿದ್ದಾರೆ.
ಹೌದು. ಬಂದ್, ಗಣೇಶ ಚತುರ್ಥಿ, ಬಕ್ರೀದ್ ಹೀಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಕೈತುಂಬಾ ಕೆಲಸವಿದೆ. ಯಾವುದೇ ಅಹಿತರಕರ ಘಟನೆ ನಡೆಯದಂತೆ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸಾಲು-ಸಾಲು ಕೆಲಸಗಳಿಂದ ಅವರಿಗೂ ವಿಶ್ರಾಂತಿ ಇಲ್ಲದಂತಾಗಿದೆ.[ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]
ಜುಲೈ 25ರಿಂದ ಮೂರು ದಿನಗಳ ಕಾಲ ಸಾರಿಗೆ ಮುಷ್ಕರ ನಡೆಯಿತು. ನಂತರ ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ನಡೆಯಿತು. ನಂತರ ಎಬಿವಿಪಿ ಎರಡು ದಿನ ಬೃಹತ್ ಪ್ರತಿಭಟನೆ ನಡೆಸಿತು. ಸೆಪ್ಟೆಂಬರ್ 2ರಂದು ಭಾರತ್ ಬಂದ್, ಸೆಪ್ಟೆಂಬರ್ 5 ಗಣೇಶ ಚತುರ್ಥಿ, ಸೆ.9 ಕರ್ನಾಟಕ ಬಂದ್, ಸೆ.12 ಬಕ್ರೀದ್.
ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸದ ಜೊತೆ ಪೊಲೀಸರನ್ನು ಭದ್ರತೆಗೂ ನಿಯೋಜನೆ ಮಾಡಲಾಗುತ್ತದೆ. ಹೀಗೆ ಸಾಲು-ಸಾಲು ಬಂದ್ಗಳಿಂದಾಗಿ ಪೊಲೀಸರಿಗೆ ಬಿಡುವಿಲ್ಲದಂತಾಗಿದೆ.[ಚಿತ್ರಗಳು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ]
ಬಂದ್ಗಳ ಸರಣಿ : 2016ರಲ್ಲಿ ಬಂದ್ಗಳ ಸರಣಿಯೇ ನಡೆಯುತ್ತಿದೆ. ಈಗ ಕಾವೇರಿ ವಿವಾದದ ಹಿನ್ನಲೆಯಲ್ಲಿ ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಆದ್ದರಿಂದ ಪೊಲೀಸರಿಗೆ ಇನ್ನೊಂದು ವಾರ ಕೈ ತುಂಬಾ ಕೆಲಸವಿರುತ್ತದೆ.[ಪೊಲೀಸರ ಪ್ರತಿಭಟನೆ : ಶಶಿಧರ್ ವೇಣುಗೋಪಾಲ್ ಗೆ ಜಾಮೀನು]
* 2016ರ ಮೇ 3ರಂದು ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರು ಟ್ರಾಕ್ಟರ್ಗಳಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಪೊಲೀಸರು ರೈತರನ್ನು ತಡೆಯಲು ಹರಸಾಹಸ ಪಡಬೇಕಾಯಿತು.
* ನೂತನ ಪಿಎಫ್ ನೀತಿ ವಿರೋಧಿಸಿ ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿತ್ತು. ಇದರಿಂದ ಪೊಲೀಸರಿಗೆ ಮೂರು ದಿನಗಳ ಕಾಲ ಹೆಚ್ಚು ಕೆಲಸವಿತ್ತು. ಹಿಂಸಾಚಾರದಲ್ಲಿ ಪೊಲೀಸರಿಗೂ ಗಾಯಗಳಾಗಿತ್ತು.
* ಜುಲೈ 3ರಿಂದ ಸಾರಿಗೆ ಸಂಸ್ಥೆಗಳ ನೌಕರರು ಮೂರು ದಿನಗಳ ಕಾಲ ಮುಷ್ಕರ ನಡೆಸಿದರು. ಇದರಿಂದಾಗಿ ಪೊಲೀಸರು ಮೂರು ದಿಗಳ ಕಾಲ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜನೆಗೊಂಡಿದ್ದರು.
* ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಜುಲೈ 30ರಂದು ಕರ್ನಾಟಕ ಬಂದ್ ನಡೆಸಲಾಯಿತು. ಇದರಿಂದಾಗಿ ಎರಡು ದಿನಗಳ ಮಟ್ಟಿದೆ ಪೊಲೀಸರಿಗೆ ಹೆಚ್ಚಿನ ಕೆಲಸವಿತ್ತು.
* ಆಗಸ್ಟ್ 16ರಂದು ದೇಶವಿರೋಧಿ ಘೋಷಣೆ ಕೂಗಿದ್ದನ್ನು ಖಂಡಿಸಿ ಎಬಿವಿಪಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು.
* ಸೆಪ್ಟೆಂಬರ್ 2ರಂದು ವಿವಿಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪ್ತಿ ಬಂದ್ಗೆ ಕರೆ ನೀಡಿದ್ದವು. ಅದು ಮುಗಿಯುತ್ತಿದ್ದಂತೆ ಸೆ.5ರಂದು ಗಣೇಶ್ ಚತುರ್ಥಿ ಎದುರಾಯಿತು.