ಗಣಿಗಾರಿಕೆ ನಿಷೇಧದಿಂದ 10 ಲಕ್ಷ ಉದ್ಯೋಗ ನಷ್ಟ
ಬೆಂಗಳೂರು, ಜ. 2: ಕರ್ನಾಟಕದ ಹಾಗೂ ಗೋವಾ ರಾಜ್ಯಗಳಲ್ಲಿ ಉಕ್ಕು ಗಣಿಗಾರಿಕೆ ಹಾಗೂ ರಫ್ತಿನ ಮೇಲೆ ಹೇರಿರುವ ನಿಷೇಧದಿಂದ ಸುಮಾರು 10 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಯೆಸ್ ಬ್ಯಾಂಕ್ ಹಾಗೂ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (Assocham) ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಕರ್ನಾಟಕ ಹಾಗೂ ಗೋವಾದಲ್ಲಿ ಗಣಿಗಾರಿಕೆ ರಫ್ತು ನಿಷೇಧಿಸಿದ ನಂತರ ಖನಿಜಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2009-10ರಲ್ಲಿ 117 ದಶಲಕ್ಷ ಟನ್ ರಫ್ತು ನಡೆದಿತ್ತು. ಆದರೆ, ನಿಷೇಧ ಹೇರಿದ ಮೇಲೆ ರಫ್ತು ಪ್ರಮಾಣ 2013-14 ದಶಲಕ್ಷ ಟನ್ಗೆ ಕುಸಿದಿದೆ. [ಅಕ್ರಮ ಗಣಿಗಾರಿಕೆ ಮೇಲಷ್ಟೇ ಸಿಬಿಐ]
ಏಕಗವಾಕ್ಷಿ ಜಾರಿಗೆ ತನ್ನಿ : ಖಾಸಗಿ ವಲಯವನ್ನು ಪ್ರೋತ್ಸಾಹಿಸಲು ಹಸಿರು ಭೂಮಿ ಹಾಗೂ ಕಂದು ಭೂಮಿ ಪ್ರೊಜೆಕ್ಟ್ಗಳಿಗೆ ಕ್ಲಿಯರೆನ್ಸ್ ನೀಡಲು ಏಕಗವಾಕ್ಷಿಯಂತಹ ಅಭಿವೃದ್ಧಿಪರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. [ರೆಡ್ಡಿಗೆ ಜಾಮೀನು ನೀಡಲು 7 ಷರತ್ತು]
ನಗರೀಕರಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ವಿವಿಧ ಲೋಹಗಳು ಹಾಗೂ ಖನಿಗಳ ಬೇಡಿಕೆ 4ರಿಂದ 5 ಪಟ್ಟು ಹೆಚ್ಚುವ ನಿರೀಕ್ಷೆಯಿದೆ. ಉತ್ಪಾದನೆ ವಲಯವು ವಾರ್ಷಿಕ ಶೇ. 9ರಿಂದ 10ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.