ಸದನದಲ್ಲಿ ಸುದ್ದಿ ಮಾಡಿದ ಪ್ರಭು ಚೌವಾಣ್ ಯಾರು?
ಬೆಂಗಳೂರು, ಡಿ. 11 : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡ ಔರಾದ್ ಶಾಸಕ ಪ್ರಭು ಚೌವಾಣ್ ವಿವಾದಕ್ಕೆ ಕಾರಣರಾಗಿದ್ದಾರೆ. ಚೌವಾಣ್ ಯಾರು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವಾಣ್ ಎರಡನೇ ಬಾರಿ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಗೋಪಿನಾಥ್ ಮುಂಡೆ ಅವರ ಕಟ್ಟಾ ಬೆಂಬಲಿಗರಾದ ಚೌವಾಣ್ ಅವರಿಗೆ 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತ್ತು. ಎರಡು ಬಾರಿ ಔರಾದ್ ಕ್ಷೇತ್ರದಿಂದ ಚೌವಾಣ್ ಆರಿಸಿ ಬಂದಿದ್ದಾರೆ.[ಚೌವಾಣ್ ಸದನಲ್ಲಿ ಮಾಡಿದ್ದೇನು?]

ಬುಧವಾರದ ಕಲಾಪದಲ್ಲಿ ಬೆಳಗ್ಗೆ ತಮ್ಮ ಕ್ಷೇತ್ರದಲ್ಲಿ ಪಡಿತರ ಕಾರ್ಡ್ಗಳ ವಿತರಣೆಯಲ್ಲಿ ಗೊಂದಲವಿರುವ ಬಗ್ಗೆ ಮಾತನಾಡಿ ಸದನದ ಗಮನ ಸೆಳೆದಿದ್ದ ಚೌವಾಣ್, ಸಂಜೆಯ ಹೊತ್ತಿಗೆ ನಡೆದ ಘಟನೆಯಿಂದ ತೀವ್ರ ಇರಸುಮುರಸಿಗೆ ಒಳಗಾದರು. [ಸದನದಲ್ಲಿ ಶಾಸಕರ ಆಟ-ನೋಟ : ಯಾರು ಏನು ಹೇಳಿದರು?]
ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಚೆನ್ನಾಗಿ ಮಾತನಾಡ ಬಲ್ಲ ಪ್ರಭು ಚೌವಾಣ್ ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲ. ಸದನದಲ್ಲಿ ಬುಧವಾರ ವಿಷಯ ಮಂಡಿಸಲು ಕಾಗದದಲ್ಲಿ ಬರೆದುಕೊಂಡು ಬಂದಿದ್ದರು. ಪ್ರಭು ಚೌವಾಣ್ ಸಂಕ್ಷಿಪ್ತ ಪರಿಚಯ ಇಲ್ಲಿದೆ.

* ಚೌವಾಣ್ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ನಿವಾಸಿ
* ಸಿಳವಣಿ ಆಶ್ರಮ ಶಾಲೆಯಲ್ಲಿ ಎಸ್ಎಸ್ಎಲ್ಸಿವರೆಗೆ ಮರಾಠಿ ಭಾಷೆಯಲ್ಲಿ ಅಧ್ಯಯನ ಮಾಡಿದ್ದಾರೆ
* ಎಸ್ಎಸ್ಎಲ್ಸಿ ಬಳಿಕ ಮುಂಬೈಗೆ ಥಾಣೆಗೆ ತೆರಳಿದರು
* ಥಾಣೆಯಲ್ಲಿ ಕಬ್ಬಿಣದ ವ್ಯಾಪಾರ ಆರಂಭಿಸಿದರು [ಚಾವಾಣ್ ಫೇಸ್ಬುಕ್ ಪುಟ]
* ಮುಂಬೈನಲ್ಲಿ ಬಿಜೆಪಿ ಮುಖಂಡ ದಿ.ಗೋಪಿನಾಥ್ ಮುಂಡೆ ಅವರ ಪರಿಚಯ
* ಮುಂದೆ ಗೋಪಿನಾಥ್ ಮುಂಡೆ ಅವರ ನಿಷ್ಠಾವಂತ ಬೆಂಬಲಿಗರಾದರು
* 2008ರಲ್ಲಿ ಔರಾದ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಕ್ಕಿತ್ತು, ಗೆಲುವು ಸಾಧಿಸಿದರು
* 2013ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ
* ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುವ ಚೌವಾಣ್ಗೆ ಕನ್ನಡ ಬರುವುದಿಲ್ಲ

ಚೌವಾಣ್ ವಿವಾದ : ಕರ್ನಾಟಕದಲ್ಲಿ ಪಿಸ್ತೂಲ್ ಬಳಕೆಗೆ ಅನುಮತಿ ಪಡೆದಿದ್ದ ಪ್ರಭು ಚೌವಾಣ್ 4 ವರ್ಷದ ಹಿಂದೆ ಹೈದರಾಬಾದ್ನಲ್ಲಿ ವಿಮಾನ ನಿಲ್ದಾಣದಲ್ಲಿ ಅದೇ ಪಿಸ್ತೂಲ್ ತೆಗೆದುಕೊಂಡು ಹೋಗಿದ್ದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಪಿಸ್ತೂಲ್ ಬಳಕೆಯ ಪರವಾನಿಗೆ ಅವಧಿಯೂ ಮುಗಿದಿತ್ತು. ಕೊನೆಗೆ ದಂಡ ಕಟ್ಟಿ ಚೌವಾಣ್ ಬಿಡುಗಡೆಗೊಂಡಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications