ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 23 : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ವಿರುದ್ಧ ಕೇಳಿಬಂದಿರುವ ಭೂ ಹಗರಣಕ್ಕ ಸಂಬಂಧಿಸಿ ವರದಿ ಸಲ್ಲಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಜಾಧವ್ ಹಗರಣದ ಸಂಬಂಧ ವರದಿ ಬಿತ್ತರವಾಗುತ್ತಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿಲು ಜಾಧವ್ ಸಿಎಂ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿದ್ದರು. ಆದರೆ ದಾಖಲೆಗಳ ಸಮೇತ ಬನ್ನಿ, ಇದರಲ್ಲಿ ನಿಮ್ಮ ಕೈವಾಡ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಿಎಂ ಸಿದ್ದರಾಮಯ್ಯ, ಜಾಧವ್ ಅವರಿಗೆ ಸೂಚನೆ ನೀಡಿದ್ದಾರೆ.[ಅರವಿಂದ ಜಾಧವ್ ಅವರ ವಿರುದ್ಧ ಭೂ ಹಗರಣ ಆರೋಪ?]
ಸಿಎಂ ಭೇಟಿ ಮಾಡಿದ ಜಾಧವ್ ಸ್ಪಷ್ಟನೆ ನೀಡಲು ಮುಂದಾದರು. ಆದರೆ ಇದನ್ನು ತಲೆಗೆ ಹಾಕಿಕೊಳ್ಳದ ಸಿದ್ದರಾಮಯ್ಯ' ನೀವು ದಾಖಲೆಗಳೊಂದಿಗೆ ಬನ್ನಿ' ಎಂದು ಹೇಳಿ ಕಳುಹಿಸಿದರು. ಅಲ್ಲದೆ ಆದಷ್ಟು ಬೇಗ ವರದಿ ಸಲ್ಲಿಕೆ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.[ಓಡಿ ಹೋದ ಮುಖ್ಯ ಕಾರ್ಯದರ್ಶಿ ಜಾಧವ್!]
ಆರೋಪ
ಏನು?
ಅರವಿಂದ್
ಜಾಧವ್
ಅವರ
ತಾಯಿ
ತಾರಾಬಾಯಿ
ಅವರು
ಆನೇಕಲ್
ತಾಲೂಕಿನ
ಸರ್ಜಾಪುರ
ಹೋಬಳಿಯ
ರಾಮನಾಯಕನಹಳ್ಳಿಯಲ್ಲಿ
ಖರೀದಿ
ಮಾಡಿರುವ
ಸರ್ಕಾರಿ
ಭೂಮಿಗೆ
ದಾಖಲಾತಿಗಳನ್ನು
ಸಿದ್ಧಪಡಿಸಲು
ಅರವಿಂದ್
ಜಾಧವ್
ಅವರು
ಅಧಿಕಾರ
ದುರುಪಯೋಗ
ಮಾಡಿದ್ದಾರೆ
ಎಂಬುದು
ಆರೋಪ.