ಶಿರೂರು ಗುಡ್ಡ ಕುಸಿತ 71 ದಿನಗಳ ನಂತರ ಅರ್ಜುನ ಮೃತದೇಹ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಶಿರೂರಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಕೋಯಿಕೋಡ್ನ ಲಾರಿ ಚಾಲಕರಾದ ಅರ್ಜುನ್ ಅವರ ಮೃತದೇಹ ಸುದೀರ್ಘ ಎರಡೂವರೆ ತಿಂಗಳ ನಂತರ ಸಿಕ್ಕಿದೆ. ಅರ್ಜುನನಿಗಾಗಿ ಇಡೀ ಕೇರಳವೇ ಪ್ರಾರ್ಥಿಸಿತ್ತು. ಆದರೆ, ದುರಾದೃಷ್ಟವಶಾತ್ ಅರ್ಜುನ್ ಬದುಕುಳಿಯಲಿಲ್ಲ. ಕೊನೆಯಾಗಿ ಅವರ ಮೃತದೇಹವಾದರೂ ಸಿಗಲಿ ಎಂದು ಅವರನ್ನು ಕಡೆಯಬಾರಿ ನೋಡಬೇಕು ಎಂದು ಅವರ ಕುಟುಂಬ ಕಾದಿತ್ತು. ಅದೂ ಸಹ ಸಾಧ್ಯವಾಗಿರಲಿಲ್ಲ. ಇದೀಗ ಮೃತದೇಹ ಸಿಕ್ಕಿದೆಯಾದರೂ..
ಏನಿದು ಘಟನೆಯ ಹಿನ್ನೆಲೆ: ಉತ್ತರ ಕನ್ನಡದಲ್ಲಿ ಜುಲೈನಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಮಳೆಯಿಂದಾಗಿ ಜುಲೈ 16ರಂದು ಭೂಕುಸಿತ (ಗುಡ್ಡ)ವಾಗಿತ್ತು. ಲಾರಿಯಲ್ಲಿ ಮರದ ದಿಮ್ಮೆಯನ್ನು ಸಾಗಿಸುತ್ತಿದ್ದ ಕೇರಳದ ಅರ್ಜುನ್ ಅವರು ಲಾರಿ ಸಹಿತ ಕಣ್ಮರೆಯಾಗಿದ್ದರು. ಭಾರೀ ಭೂಕುಸಿತದಿಂದಾಗಿ ಈ ಭಾಗದಲ್ಲಿ ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟವರು ಸಹ ಸಾವನ್ನಪ್ಪಿದ್ದರು. ಇಲ್ಲಿಯವರೆಗೆ ಈ ದುರಂತದಲ್ಲಿ 9 ಜನ ಮೃತಪಟ್ಟಿದ್ದಾರೆ. ಅರ್ಜುನ್ ಅವರ ಮೃತದೇಹ ಸಹ 71 ದಿನಗಳ ನಂತರ ಸಿಕ್ಕಿದೆ. ಶಿರೂರಿನ ಲೋಕೇಶ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಅವರು ಪತ್ತೆಯಾಗಿಲ್ಲ.

ಮೃತದೇಹ ಸಿಕ್ಕಿದ್ದು ಹೇಗೆ ?
ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯ ಆಳಭಾಗದಲ್ಲಿ ಲಾರಿಯೊಂದರ ಒಳಗೆ ಕೊಳತೆ ಸ್ಥಿತಿಯಲ್ಲಿ ಅರ್ಜುನ್ ಅವರ ಮೃತದೇಹ ಸಿಕ್ಕಿದ್ದು, ಈ ಮೃತದೇಹ ಅರ್ಜುನ್ ಅವರದ್ದೇ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣು ಹಾಗೂ ಕಲ್ಲಿನ ಅಡಿಗಳಲ್ಲಿ ತೀವ್ರ ಜಖಂಗೊಂಡ ಲಾರಿಯಲ್ಲಿ ಅರ್ಜುನ್ ಅವರ ಮೃತದೇಹ ಸಿಕ್ಕಿದೆ. ಮೃತದೇಹ ಬಹುತೇಕ ಕೊಳತೆ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಹೇಳಲಾಗಿದೆ. ಇನ್ನು ಕೇರಳ ಸರ್ಕಾರವು ಮೃತ ಅರ್ಜುನ ಅವರ ಕುಟುಂಬಕ್ಕೆ ಆಸರೆಯಾಗಿದೆ. ಅರ್ಜುನ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುರಂತ ಸಂಭವಿಸಿದ ಬೆನ್ನಲ್ಲೇ ಈ ಪರಿಹಾರವನ್ನು ಘೋಷಿಸಿದ್ದರು.
ಕೇರಳದಲ್ಲಿ ನಡೆದಿತ್ತು ಪ್ರಾರ್ಥನೆ: ಅರ್ಜುನ್ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಅಲ್ಲದೇ ಇಡೀ ಕುಟುಂಬವನ್ನು ಅವರು ಮುನ್ನಡೆಸಿದ್ದರು. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಬಡ ಕುಟುಂಬದಲ್ಲಿ ಬೆಳೆದು ಇನ್ನೇನು ಒಳ್ಳೆಯ ಜೀವನ ನಡೆಸಬೇಕು ಎನ್ನುವ ಹಂತದಲ್ಲಿ ಅರ್ಜುನ್ ಕಣ್ಮರೆ ಸುದ್ದಿ ಕೇಳಿತ್ತು. ಕೇರಳದಲ್ಲಿ ಅರ್ಜುನ್ ಅವರು ಹೇಗಾದರೂ ಬದುಕಿ ಬರಬೇಕು ಎನ್ನುವ ಪ್ರಾರ್ಥನೆಗಳು ನಡೆದಿದ್ದವು. ಆದರೆ, ಯಾವ ಪ್ರಾರ್ಥನೆಗಳು ಸಹ ಫಲಿಸಲಿಲ್ಲ. ಇದೀಗ ಅವರ ಮೃತದೇಹವೂ ಸಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಇನ್ನು ಕಾರ್ಯಾಚರಣೆ ನಡೆಸುವಂತೆ ಕೇರಳ ಸರ್ಕಾರವು ಸಹ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಶಿರೂರಿನ ಗುಡ್ಡ ಕುಸಿತದ ಕಾರ್ಯಾಚರಣೆಗೆ ಕೇರಳವೂ ಕೈಜೋಡಿಸಿತ್ತು. ಅಲ್ಲದೇ ಕಳೆದ ಆರು ದಿನಗಳಿಂದಲೂ ಈ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯ ಹಿಂದೆ ಹಲವರು ಪರಿಶ್ರಮ ಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ, ಪೊಲೀಸರು ಹಾಗೂ ಭದ್ರತಾ ಪಡೆಗಳು ಹಾಗೂ ಮುಳುಗು ತಜ್ಞರು ಶ್ರಮಿಸಿದ್ದಾರೆ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications