ಡಬ್ಬಿಂಗ್ ವಿರುದ್ಧ ದನಿಯೆತ್ತಿದ ಜಗ್ಗೇಶ್, ವಾಟಾಳ್ ನಾಗರಾಜ್
ಮಾರ್ಚ್ 3ರಂದು ಕನ್ನಡ ಚಿತ್ರರಂಗದ ದಿನಾಚರಣೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವರ್ಷದಿಂದ ಮರೆಯಾಗಿದ್ದ ಡಬ್ಬಿಂಗ್ ವಿರೋಧಿ ಚರ್ಚೆ ಮತ್ತೆ ಚಾಲ್ತಿಗೆ ಬಂದಿದೆ.
ಬೆಂಗಳೂರು, ಮಾರ್ಚ್ 1: ಹೆಚ್ಚೂ ಕಡಿಮೆ ಒಂದು ವರ್ಷದಿಂದ ತಣ್ಣಗಾಗಿದ್ದ ಡಬ್ಬಿಂಗ್ ಪರ- ವಿರೋಧ ಚರ್ಚೆ ಈಗ ಮತ್ತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಹಾಗೂ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಡಬ್ಬಿಂಗ್ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ''ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಜ್ಞಾನ ಹೆಚ್ಚಾಗುತ್ತೆ ಅನ್ನೋದು ಸುಳ್ಳು. ಹಾಗಾಗಿ, ಡಬ್ಬಿಂಗ್ ಚಿತ್ರಗಳನ್ನು ವಿರೋಧಿಸುವ ಅವಶ್ಯಕತೆಯಿದೆ'' ಎಂದರು.[ಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆ]

ತಮಿಳುನಾಡಿನಲ್ಲಿ ಸುಮಾರು 17ರಿಂದ 18 ಲಕ್ಷ ಕನ್ನಡಿಗರಿದ್ದಾರೆ. ಆಂಧ್ರಪ್ರದೇಶದಲ್ಲಿ ಸುಮಾರು 25 ಲಕ್ಷ ಕನ್ನಡಿಗರಿದ್ದಾರೆ. ಅವರೆಲ್ಲರಿಗೂ ಕನ್ನಡದ ಚಿತ್ರಗಳು ತಲುಪುವಂತಾಗಬೇಕು ಎಂದು ಅವರು ಆಶಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಾಟಾಳ್ ನಾಗರಾಜ್ ಕೂಡ ಜಗ್ಗೇಶ್ ಅವರ ಮಾತುಗಳನ್ನು ಅನುಮೋದಿಸಿದರು.












Click it and Unblock the Notifications