ಆಸಿಡ್ ದಾಳಿ ವಿವರ ನೀಡದೆ ನ್ಯಾಯಾಂಗ ನಿಂದನೆ ಮಾಡಿದ ಕರ್ನಾಟಕ
ಬೆಂಗಳೂರು, ಸೆಪ್ಟೆಂಬರ್, 09 : ಆಸಿಡ್ ದಾಳಿ ತಡೆಯಲು ತೆಗೆದುಕೊಂಡ ಕ್ರಮ ಮತ್ತು ದಾಳಿಗೆ ಒಳಗಾದ ಸಂತ್ರಸ್ತರಿಗೆ ಪುರ್ನವಸತಿ ಕಲ್ಪಿಸಲು ಮಾಡಿದ ಯೋಜನೆಗಳ ಬಗ್ಗೆ ಮಾಹಿತಿ ನೀಡದ ಕರ್ನಾಟಕ ಮತ್ತು ಇತರ ನಾಲ್ಕು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಆಸಿಡ್
ದಾಳಿಯ
ಕುರಿತ
ಅರ್ಜಿಯ
ವಿಚಾರಣೆಯನ್ನು
ಬುಧವಾರ
ನಡೆಸಿದ
ಸುಪ್ರೀಂಕೋರ್ಟ್
ಕರ್ನಾಟಕ,
ಕೇರಳ,
ಜಮ್ಮು
ಮತ್ತು
ಕಾಶ್ಮೀರ,
ಮಿಜೋರಾಂ
ಮತ್ತು
ಮಧ್ಯ
ಪ್ರದೇಶ
ರಾಜ್ಯಗಳ
ಮುಖ್ಯ
ಕಾರ್ಯದರ್ಶಿಗಳಿಗೆ
ನೋಟಿಸ್
ಜಾರಿಗೊಳಿಸಿದೆ.
[ಆಸಿಡ್
ದಾಳಿ
ಜಾಮೀನು
ರಹಿತ
ಅಪರಾಧ]
ಹಿಂದೆ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರ ಪುರ್ನವಸತಿಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಆದರೆ, ಐದು ರಾಜ್ಯಗಳು ಈ ಬಗ್ಗೆ ವರದಿ ನೀಡದ ಹಿನ್ನಲೆಯಲ್ಲಿ ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ.[ಆಸಿಡ್ ದಾಳಿ ಸಂತ್ರಸ್ತೆಗೆ 5 ಲಕ್ಷ ಪರಿಹಾರ]
ಆಸಿಡ್ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್, ಅರ್ಜಿಯ ವಿಚಾರಣೆ ಸಮಯದಲ್ಲಿ ಕಾಳಸಂತೆಯಲ್ಲಿ ಆಸಿಡ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿತ್ತು. [ಮದುವೆ ತಪ್ಪಿಸಲು ಆಸಿಡ್ ಹಾಕಿದ ಭಗ್ನ ಪ್ರೇಮಿ]
ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ಕೇಂದ್ರ ಸರ್ಕಾರ 2014ರಲ್ಲಿ ದೇಶದಲ್ಲಿ 309 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 185 ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ದಾಖಲಾಗಿವೆ ಎಂದು ಮಾಹಿತಿ ನೀಡಿತ್ತು.
ಮಧ್ಯಪ್ರದೇಶದಲ್ಲಿ 57 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯದ ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ದಾಳಿಗೆ ಒಳಗಾದವರ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿತ್ತು.