ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯುಪಿಎಸ್ಸಿ ವ್ಯಕ್ತಿತ್ವ ಪರೀಕ್ಷೆ: ಕರ್ನಾಟಕದ 52 ಮಂದಿ ಅರ್ಹ
ಬೆಂಗಳೂರು, ಡಿಸೆಂಬರ್ 21: ಕೇಂದ್ರ ಲೋಕಸೇವಾ ಆಯೋಗವು 2018ರ ನಾಗರಿಕ ಸೇವಾ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ರಾಜ್ಯದ 52 ಮಂದಿ ಸೇರಿದಂತೆ 1994 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಹಪಂದಿರುವುದಾಗಿ ಪ್ರಕಟಿಸಿದೆ.
2018ರ ಜೂನ್ 3ರಂದು ನಡೆದ ಪೂರ್ವಭಾವಿ ಪರೀಕ್ಷೆಯನ್ನು 6.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 10,668 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು. ಇದರಲ್ಲಿ ಕರ್ನಾಟಕದ 326 ಅಭ್ಯರ್ಥಿಗಳು ಕೂಡ ಸೇರಿದ್ದರು.
ಕಳೆದ ಸೆಪ್ಟೆಂಬರ್ 28 ಹಾಗೂ ಅಕ್ಟೋಬರ್ 7 ರಂದು ಮುಖ್ಯ ಪರೀಕ್ಷೆ ನಡೆದಿತ್ತು. ಆಯೋಗವು ನವದೆಹಲಿಯಲ್ಲಿ ಫೆಬ್ರವರಿ 4ರಿಂದ ಅರ್ಹ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆಯುವ ನಿರೀಕ್ಷೆ ಇದೆ. ಬೆಂಗಳೂರು, ಚೆನ್ನೈ, ತಿರುವನಂತಪುರ ವಿದ್ಯಾರ್ಥಿಗಳು ಇದರಲ್ಲಿ ಸೇರಿದ್ದಾರೆ.
Comments
English summary
52 candidate of the Karnataka state have been qualified for UPSC interview round. The Union Public Service Commission on Thursday announced the results of the UPSC Main examination 2018. The Union Public Service Commission declared the results of the UPSC Main examination 2018.