ಮಾನವೀಯತೆ ನೆಲೆಯಲ್ಲಿ ತೆಲಂಗಾಣಕ್ಕೆ 5 ಟಿಎಂಸಿ ನೀರು: ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್ 1: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ‌ಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಭೇಟಿ ಮಾಡಿ ನೀರಾವರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತು.

ನಿಯೋಗ ಆಲಮಟ್ಟಿಯ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಡುಗಡೆಗೆ ಮನವಿ ಮಾಡಿತು.

 5 TMC of water to Telangana on the grounds of humanity: Siddaramaiah

ಈ ಸಂದರ್ಭ ಹಾಜರಿದ್ದ ಸಚಿವ ಎಂ ಬಿ ಪಾಟೀಲ್, "ಕುಡಿಯುವ ಉದ್ದೇಶಕ್ಕೆ ನಿನ್ನೆಯಿಂದ ನೀರು ಬಿಡುಗಡೆ ಮಾಡಲಾಗಿದೆ," ಎಂದು ತಿಳಿಸಿದರು.

ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, "ನಮ್ಮಲ್ಲಿಯೂ 7ವರ್ಷಗಳಿಂದ ಬರಗಾಲವಿದೆ. 1.8ಟಿಎಂಸಿ ನೀರು ತೆಲಂಗಾಣಕ್ಕೆ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗಾಗಿ ಮಾನವೀಯ ದೃಷ್ಠಿಯಿಂದ ನಿಮ್ಮ‌ ಮನವಿಗೆ ಒಗೊಟ್ಟಿದ್ದೇವೆ. 15ಟಿಎಂಸಿ ಬೇಕು ಎನ್ನುತ್ತೀರಿ, ಇನ್ನೂ 5ಟಿಎಂಸಿ ಬಿಡುಗಡೆ ಮಾಡಬಹುದು. ಮುಂದೆ ಮಳೆಯಾದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವ ಬಗ್ಗೆ ಆಲೋಚಿಸೋಣ," ಎಂದು ಹೇಳಿದರು.

 5 TMC of water to Telangana on the grounds of humanity: Siddaramaiah

ಈ‌ ಸಂದರ್ಭದಲ್ಲಿ ರಾಜೋಳಿ ಬಂಡಾ ತಿರುವು ಯೋಜನೆ ಕಾಮಗಾರಿ ಕುರಿತೂ ನಿಯೋಗ ಚರ್ಚೆ ನಡೆಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ರಾಜೋಳಿ ಬಂಡಾ ಕಾಮಗಾರಿ ಕುರಿತು ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು," ಎಂದು ನಿಯೋಗಕ್ಕೆ ಭರವಸೆ ನೀಡಿದರು.

 5 TMC of water to Telangana on the grounds of humanity: Siddaramaiah

ಸಭೆಯಲ್ಲಿ ಸತೀಶ್ ಜಾರಕಿಹೊಳಿ, ರಮಾನಾಥ ರೈ ಸೇರಿದಂತೆ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+