ಅಬ್ಬಬ್ಬಾ 25 ಕೋಟಿ ರೂ. ಲಾಟರಿ; ಆ ಒಂದು ಕಾರಣದಿಂದ ಕನ್ನಡಿಗ ಸೇಫ್, ಏನದು!
Kerala Onam Bumper: ಲೈಫ್ನಲ್ಲಿ ಸ್ವಲ್ಪ ಸೆಲ್ಫಿಶ್ ಆಗಿರಬೇಕು ಕಣ್ರಿ ಅಂತಾರೆ. ಕೇರಳದ 25 ಕೋಟಿ ಲಾಟರಿಯಲ್ಲಿ ಮೊದಲ ಬಹುಮಾನ ಪಡೆದ ಮಂಡ್ಯದ ಅಲ್ತಾಫ್ ಅವರ ವಿಷಯದಲ್ಲಿ ನಿಜವಾಗಿದೆ. ಅಲ್ಲದೇ ಕೆಲವೊಮ್ಮೆ ತಮಾಷೆಗೆ ಹೆಂಡ್ತಿ ಮಾತು ಕೇಳ್ಬೇಕು ಅಂತಿರ್ತಾರೆ. ಈ ಎರಡೂ ಮಾತುಗಳು ಅಲ್ತಾಫ್ ಅವರ ಜೀವನದಲ್ಲಿ ನಿಜವಾಗಿದ್ದು, ಅವರ ಅದೃಷ್ಟ ಕೈಹಿಡಿದಿದೆ.
ಕೇರಳದ ಓಣಂ ಬಂಪರ್ ಡ್ರಾ ಲಾಟರಿಯಲ್ಲಿ ಕರ್ನಾಟಕದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್ ಅವರಿಗೆ ಮೊದಲ ಬಹುಮಾನ ಬರೋಬ್ಬರಿ 25 ಕೋಟಿ ರೂಪಾಯಿ ಸಿಕ್ಕಿದೆ. ಕೇರಳದಲ್ಲಿ ಪ್ರತಿ ದಿನವೂ ವಿವಿಧ ಲಾಟರಿಗಳು ಮಾರಾಟವಾಗುತ್ತವೆ. ಆದರೆ, ಕೇರಳದ ಸರ್ವಧರ್ಮೀಯರು ಅತ್ಯಂತ ಅನ್ಯೂನ್ಯತೆಯಿಂದ ಆಚರಿಸುವ ಏಕೈಕ ಹಬ್ಬ ಎಂದರೆ ಅದು ಓಣಂ. ಕೇರಳದಲ್ಲಿ ಓಣಂ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಈ ಹಬ್ಬಕ್ಕೆ ಮಲಯಾಳಿಗರು ದೇಶ - ವಿದೇಶದಲ್ಲಿ ಎಲ್ಲೆ ಇದ್ದರೂ, ಕೇರಳಕ್ಕೆ ಬರುತ್ತಾರೆ. ಕೇರಳದಲ್ಲಿ ಓಣಂ ಸಮಯದಲ್ಲಿ ವಿಶೇಷ ಬಂಪರ್ ಲಾಟರಿ ಬಿಡುಗಡೆಯಾಗುತ್ತದೆ. ಈ ಲಾಟರಿಯ ಮೊದಲ ಬಹುಮಾನವೇ ಬರೋಬ್ಬರಿ 25 ಕೋಟಿ ರೂಪಾಯಿ ಇದೆ.

ಅಲ್ತಾಫ್ ಅವರು ಎರಡು ಲಾಟರಿ ಟಿಕೆಟ್ಗಳನ್ನು ಖರೀದಿ ಮಾಡಿದ್ದರು. ಅದರಲ್ಲಿ ಒಂದು ಲಾಟರಿಯನ್ನು ಅವರ ಗೆಳೆಯನಿಗೆ ನೀಡಲು ನಿರ್ಧರಿಸಿದ್ದರು. ಅದೇ ಲಾಟರಿ ಇದೀಗ ಅವರ ಅದೃಷ್ಟ ಕೈಹಿಡಿಯಲು ಕಾರಣವಾಗಿದೆ. ಎರಡು ಲಾಟರಿಯಲ್ಲಿ ಒಂದನ್ನು ಗೆಳೆಯನಿಗೆ ನೀಡಲು ಮುಂದಾಗಿದ್ದರು. ಆದರೆ, ಅಲ್ತಾಫ್ ಅವರ ಪತ್ನಿ ನಿರಾಕರಿಸಿದ್ದರಂತೆ. ಅದೇ ಲಾಟರಿಯಿಂದ ಅಲ್ತಾಫ್ ಅವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಿಗಲು ಕಾರಣವಾಗಿದೆ.
ಅಲ್ತಾಫ್ ಅವರ ಪತ್ನಿ ಲಾಟರಿ ಸಂಖ್ಯೆ ಟಿಜಿ 434222 ಯನ್ನು ಯಾರಿಗೂ ಕೊಡಬೇಡಿ ಎಂದಿದ್ದರಂತೆ. ಈ ನಿರ್ಧಾರ ಅವರಿಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯುವಂತೆ ಮಾಡಿದೆ. ಕೊನೆಗೆ ಗೆಳೆಯನಿಗೆ ನೀಡದೆ ಉಳಿಸಿಕೊಂಡಿದ್ದ ಲಾಟರಿಯಿಂದಲೇ ಅವರಿಗೆ ಲಕ್ ಸಿಕ್ಕಿದೆ. ಈ ಲಾಟರಿ ಹಣದಿಂದ ಅಲ್ತಾಫ್ ಅವರ ಕುಟುಂಬವು ಸಾಲವನ್ನು ತೀರಿಸಿ, ಸಣ್ಣದೊಂದು ಕನಸಿನ ಮನೆಯನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ.
15 ವರ್ಷಗಳಿಂದ ಟಿಕೆಟ್ ಖರೀದಿ: ಕೇರಳದ ಲಾಟರಿಯಲ್ಲಿ ಈ ಬಾರಿ ಅಲ್ತಾಫ್ ಅವರಿಗೆ ಅದೃಷ್ಟ ಕೈಹಿಡಿದಿದೆ. ಆದರೆ, ಈ ಅದೃಷ್ಟಕ್ಕಾಗಿ ಅವರು ಕಳೆದ 15 ವರ್ಷಗಳಿಂದ ಶ್ರಮ ಹಾಕಿದ್ದಾರೆ. ಕೇರಳದಲ್ಲಿ ಕಳೆದ 15 ವರ್ಷಗಳಿಂದ ವಿವಿಧ ಲಾಟರಿಗಳನ್ನು ಖರೀದಿ ಮಾಡುತ್ತಿದ್ದವರ ಅದೃಷ್ಟ ಈ ಬಾರಿ ಓಣಂನಲ್ಲಿ ಕೈಹಿಡಿದಿದೆ. ಕರ್ನಾಟಕದ ಮಂಡ್ಯದ ಪಾಂಡವಪುರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಅಲ್ತಾಫ್ ಅವರು ಒಂದು ಸಾವಿರ ರೂಪಾಯಿಗೆ ಎರಡು ಟಿಕೆಟ್ಗಳನ್ನು ಖರೀದಿಸಿದ್ದರು.

ಕೇರಳದಲ್ಲಿ ಲಾಟರಿ ಪ್ರವಾಸ: ಕೇರಳ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿದೆ ನಿಜ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ಲಾಟರಿಗಾಗಿಯೂ ಪ್ರವಾಸ ಪ್ರಾಂಭವಾಗಿದೆಯಂತೆ. ಇತ್ತೀಚಿನ ವರ್ಷಗಳಲ್ಲಿ ಕೇರಳದಲ್ಲಿ ಲಾಟರಿಗಾಗಿಯೂ ಪ್ರವಾಸ ಬರುತ್ತಿದ್ದಾರಂತೆ. ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗದಿಂದ ಕೇರಳಕ್ಕೆ ಬಂದು ಜನ ಲಾಟರಿ ಖರೀದಿ ಮಾಡುತ್ತಿದ್ದಾರಂತೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications