ರವಿ ಚನ್ನಣ್ಣನವರ್ ಸೇರಿ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Recommended Video

ಬೆಂಗಳೂರು, ಮಾರ್ಚ್ 10 : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಎಸ್ಪಿಯಾಗಿದ್ದ ರವಿ ಡಿ.ಚನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕರ್ನಾಟಕ ಸರ್ಕಾರ ಶುಕ್ರವಾರ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಲವು ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬದಲಾವಣೆಯಾಗಿದ್ದಾರೆ.

* ಬಿ.ದಯಾನಂದ - ಕೇಂದ್ರ ವಲಯ ಐಜಿಪಿ
* ಅಮೃತ್ ಪೌಲ್ - ಐಜಿಪಿ (ಆಡಳಿತ)
* ಸೌಮೇಂದು ಮುಖರ್ಜಿ - ದಕ್ಷಿಣ ವಲಯ ಐಜಿಪಿ,
* ಎಂ.ಎನ್.ಅನುಚೇತ್ - ಎಸ್ಐಟಿ ತನಿಖಾಧಿಕಾರಿ, ಸಿಐಡಿ ಎಸ್ಪಿ
* ರವಿ.ಡಿ.ಚೆನ್ನಣ್ಣನವರ್ - ದಕ್ಷಿಣ ವಲಯ ಡಿಸಿಪಿ
* ಎಸ್.ರವಿ - ಐಜಿಪಿ (ಬಳ್ಳಾರಿ ವಲಯ)
* ವಿಫುಲ್ ಕುಮಾರ್ - ಐಜಿಪಿ (ನಿರ್ದೇಶಕರು, ಮೈಸೂರು ಪೊಲೀಸ್ ಅಕಾಡೆಮಿ)
* ಅಮಿತ್ ಸಿಂಗ್ - ಮೈಸೂರು ಎಸ್ಪಿ
* ಕುಲದೀಪ್ ಕುಮಾರ್ - ಕೆಎಸ್ಆರ್ಪಿ, ಬೆಂಗಳೂರು
* ನಿಖಾಮ್ ಪ್ರಕಾಶ್ ಅಮೃತ್ - ವಿಜಯಪುರ ಎಸ್ಪಿ
* ಭೀಮಾ ಶಂಕರ್ ಎಸ್.ಗುಳೇದ್ - ಬೆಂಗಳೂರು ಗ್ರಾಮಾಂತರ ಎಸ್ಪಿ
* ಜಿ.ರಾಧಿಕಾ - ಎಸ್ಪಿ (ಎಸಿಬಿ, ಬೆಂಗಳೂರು)
* ಡಾ.ಅನೂಪ್ ಎ.ಶೆಟ್ಟಿ - ಎಸ್ಪಿ (ಗುಪ್ತಚರ, ಬೆಂಗಳೂರು)
* ಕಲಾ ಕೃಷ್ಣಮೂರ್ತಿ - ಡಿಸಿಪಿ (ಈಶಾನ್ಯ ವಲಯ, ಬೆಂಗಳೂರು)
* ಉಮೇಶ್ ಕುಮಾರ್ - ಐಜಿಪಿ ಮತ್ತು ಪಿ.ಜಿ.ಎ.ಎಸ್ ಬೆಂಗಳೂರು
* ಶಿವಪ್ರಸಾದ್ ಎನ್. ಐಜಿಪಿ ಮತ್ತು ಕೆಎಸ್ಆರ್ಟಿಸಿ ಭದ್ರತಾ ನಿರ್ದೇಶಕರು
* ರೇಣುಕಾ ಎಸ್. ಸುಕುಮಾರ್ - ಕೊಪ್ಪಳ ಎಸ್ಪಿ
* ಗಿರೀಶ್ - ಮಂಡ್ಯ ಎಸ್ಪಿ












Click it and Unblock the Notifications