ತುಳಜಾಪುರ ಅಂಬಾ ಭವಾನಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ
ಕಲಬುರಗಿ, ಸೆ.28: ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರಿಂದ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 18ರವರೆಗೆ ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಕಲಬುರಗಿ-ತುಳಜಾಪುರ, ಚಿಂಚೋಳಿ-ತುಳಜಾಪುರ, ಕಾಳಗಿ-ತುಳಜಾಪುರ, ಚಿತ್ತಾಪೂರ-ತುಳಜಾಪುರ, ಸೇಡಂ-ತುಳಜಾಪುರ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವಾಸು ತಿಳಿಸಿದ್ದಾರೆ.
ಘಟಕಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ 54ಜನ ಪ್ರಯಾಣಿಕರು ತುಳಜಾಪುರಕ್ಕೆ ಪ್ರಯಾಣಿಸಿದ್ದಲ್ಲಿ ಅವರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.

ಸಾರ್ವಜನಿಕರು/ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂ.-77609 92102,
ಕಲಬುರಗಿ ಘಟಕ-1ರ ಮೊಬೈಲ್ ಸಂ.-77609 92113,
ಚಿಂಚೋಳಿ ಮೊಬೈಲ್ ಸಂ.-77609 92117,
ಚಿತ್ತಾಪುರ ಮೊಬೈಲ್ ಸಂ.-77609 92119,
ಕಾಳಗಿ ಮೊಬೈಲ್ ಸಂ.-77609 92120,
ಸೇಡಂ ಮೊಬೈಲ್ ಸಂ.-77609 92466,
ವಿಭಾಗೀಯ ಕಚೇರಿ ಮೊಬೈಲ್ ಸಂ.-7760992108 ಗಳನ್ನು ಸಂಪರ್ಕಿಸಲು ಕೋರಿದೆ.
ತುಳಜಾ ಭವಾನಿ ಜಾತ್ರೆ: ಮಹಾರಾಷ್ಟ್ರದ ಮರಾಠ್ ವಾಡ ಪ್ರದೇಶದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ಹಿಂದೂಗಳ ಪವಿತ್ರ ಕ್ಷೇತ್ರ ತುಳಜಾಪುರ. 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಭವಾನಿ ದೇಗುಲವು 51 ಶಕ್ತಿಪೀಠಗಳಲ್ಲಿ ಒಂದೆನಿಸಿದೆ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಈ ದೇಗುಲಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಭೇಟಿ ಕೊಡುತ್ತಿದ್ದರು. ಇಲ್ಲಿನ ದೇವಿಯ ಅನುಗ್ರಹದಿಂದಲೇ ಅವರಿಗೆ 'ಭವಾನಿ ಖಡ್ಗ' ಲಭಿಸಿತು ಎಂಬ ಪ್ರತೀತಿ ಇದೆ.












Click it and Unblock the Notifications