ಸಿದ್ದರಾಮಯ್ಯ ಇಲ್ಲದೆ ಕೆ.ಪಿ.ಎಂ.ಇ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ : ರಮೇಶ್ ಕುಮಾರ್
ಕಲಬುರಗಿ, ನವೆಂಬರ್ 28 : ಹಲವಾರು ಅಡೆತಡೆಗಳ ನಡುವೆಯೂ ಕೆ.ಪಿ.ಎಂ.ಇ ಕಾಯ್ದೆಯನ್ನು ಯಶಸ್ವಿಯಾಗಿ ಮಂಡಿಸಿ ಅನುಮೋದನೆ ಗಳಿಸಿಕೊಂಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಆತ್ಮತೃಪ್ತಿಯಿಂದ ಬೀಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಕಾಯ್ದೆ ತರಲು ಬೆನ್ನೆಲೆಬಾಗಿ ಸಹಕರಿಸದವರನ್ನು ನೆನೆಯುವುದನ್ನು ಮರೆತಿಲ್ಲ.
ಕೆಪಿಎಂಇ ಕಾಯ್ದೆ ಹಲ್ಲು ಕಿತ್ತ ಹಾವಲ್ಲ ಹಗ್ಗ : ರಮೇಶ್ ಕುಮಾರ್
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅವರು ಕೆ.ಪಿ.ಎಂ.ಇ ಕಾಯ್ದೆ ಮಂಡನೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಬಹಳ ದೊಡ್ಡದು, ಅವರ ಬೆಂಬಲ ಇಲ್ಲದಿದ್ದರೆ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ ಎಂದರು.
'ಸಿದ್ದರಾಮಯ್ಯ ಅವರು ಕಲ್ಲುಬಂಡೆಯಾಗಿ ಈ ಕಾಯ್ದೆ ಮಂಡನೆ ವಿಚಾರದಲ್ಲಿ ನಿಂತಿದ್ದಾರೆ, ಅವರು ಇಲ್ಲದಿದ್ದಲ್ಲಿ ಕಾಯ್ದೆ ಮಂಡನೆ ಅಸಾಧ್ಯವಾಗುತ್ತಿತ್ತು' ಎಂದು ಅವರು ಸಿದ್ದರಾಮಯ್ಯ ಅವರ ಬೆಂಬಲವನ್ನು ನೆನೆದರು.
ಸಿದ್ದರಾಮಯ್ಯ ಅವರು ಕಾಯ್ದೆ ಮಂಡನೆಯಲ್ಲಿ ವಿಶೇಷ ಆಸ್ತೆ ತೋರಿದ್ದರಿಂದ ಕೆಪಿಎಮ್ಇ ಕಾಯ್ದೆ ಮಂಡನೆಯಿಂದ ನನ್ನ ಭಾರ ಕಡಿಮೆಯಾಗಿದೆ ಎಂದ ಅವರು ಈ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಅಭಾರಿಯಾಗಿದ್ದೇನೆ ಎಂದರು.
ಕೆಪಿಎಂಇ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರ
ಈ ಕಾಯ್ದೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸಾಕಷ್ಟು ಅಂಶಗಳಿವೆ ಅದನ್ನು ಜನ ಗುರುತಿಸಬೇಕು, ನಮ್ಮ ಜನರಿಗೆ ಅಸಡ್ಡೆ ಮನೋಭಾವವಿದೆ, ನಮಗ್ಯಾಕೇ ಉಸಬಾರಿ ಅಂತಾರೆ, ಆದರೆ ಜನರು ಜಾಗೃತರಾಗಬೇಕು ಎಂದು ಅವರು ಹೇಳಿದರು.