ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹದಾಯಿ ವಿವಾದ ಬಗೆಹರಿಯುವುದು ಮೋದಿಗೆ ಬೇಕಿಲ್ಲ:ಖರ್ಗೆ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಡಿಸೆಂಬರ್ 23: ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಮಹದಾಯಿ ವಿಚಾರವಾಗಿ ಮೋದಿ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷಕ್ಕೆ ನಿಷ್ಠರಾಗಿಯಷ್ಟೆ ನಡೆದುಕೊಳ್ಳುತ್ತಿರುವ ಮೋದಿ ಅವರು ವಿವಾದ ಬಗೆಹರಿಸಲು ಬೇಕೆಂದೇ ಆಸಕ್ತಿ ತೋರುತ್ತಿಲ್ಲ ಎಂದರು.

Congress MP Mallikarjun Kharge Lambasted on PM for not trying to solve Mahadayi issue

'ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಸಿಎಂ‌ ಪರಿಕ್ಕರ್‌ಗೆ ಬುದ್ಧಿ ಹೇಳುವ ಧೈರ್ಯ ಮೋದಿ ಮಾಡುತ್ತಿಲ್ಲ, ಅವರಿಗೆ ಅದು ಬೇಕಿಲ್ಲ. ಪ್ರಧಾನಿ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ವಿವಾದ ಬಗೆಹರಿಯುತ್ತದೆ ಆದರೆ ಅವರಿಗೆ ಹಾಗೂ ಅವರ ಪಕ್ಷದವರಿಗೆ ವಿವಾದ ಬಗೆಹರಿಯುವುದು ಬೇಕಿಲ್ಲ' ಎಂದರು.

ಮಹದಾಯಿ ವಿವಾದ ಗೋವಾ-ಕರ್ನಾಟಕ ಮಧ್ಯೆ ಇರುವ ಬಹುದೊಡ್ಡ ಸಮಸ್ಯೆ, ನಮ್ಮ ಪ್ರದೇಶದಲ್ಲಿ ಹರಿಯುವ ನೀರು ನಮಗೆ ಕೊಡಲೇಬೇಕು ಎಂಬುದು ನಮ್ಮ ವಾದ, ಕರ್ನಾಟಕದ ಪಾಲಿನ 7.5 ಟಿಎಂಸಿ‌ ನೀರು ಗೋವಾ ಕೊಡಲೇ ಬೇಕು ಎಂದು ಅವರು ಆಗ್ರಹಿಸಿದರು.

English summary
Congress MP Mallikarjun Kharge said Modi showing no intrest in solving Mahadayi issue. BJP and Modi does not want Mahadayi isuue to be solved because of their politicle gain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X