ಜೇವರ್ಗಿ ವಿಧಾನ ಸಭಾ ಕ್ಷೇತ್ರ ಮತ್ತೆ ಬಿಜೆಪಿಗೆ ಸಿಗಬಹುದೇ?
ಕಲಬುರಗಿ : ಜಿಲ್ಲೆಯ ಜೇವರ್ಗಿ ವಿಧಾನ ಸಭಾ ಕ್ಷೇತ್ರ ಭಾರಿ ಕುತೂಹಲ ಮೂಡಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ರವರ ಸತತ ಗೆಲುವಿನ ಕ್ಷೇತ್ರವಾದ್ದರಿಂದ ಭಾರಿ ಚರ್ಚೆ ಆಗುವ ಕ್ಷೇತ್ರವಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜಯ್ ಸಿಂಗ್ 36, 700 ಮತಗಳ ಪಡೆದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟಿಲ್ ನರಿಬೋಳ ಅವರನ್ನು ಸೋಲಿಸಿದ್ದರು.
ಇದಕ್ಕಿಂತ ಮೊದಲು ದೊಡ್ಡಪ್ಪಗೌಡ ಮಾಜಿ ಮುಖ್ಯಮಂತ್ರಿಯಾದ ಧರ್ಮಸಿಂಗ್ ಅವರನ್ನು 51 ಮತಗಳಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಡೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು 30,338 ಮತಗಳು ಪಡೆದರು ಅದೆ ರೀತಿ ಜೆಡಿಎಸ್ ನ ಕೇದಾರಲಿಂಗಯ್ಯ ಹಿರೇಮಠ ಅವರು 24,920 ಮತಗಳು ಪಡೆದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮತ್ತು ಕೆಜೆಪಿ ಎಂಬ ಎರಡು ಪಕ್ಷಗಳು ಉದ್ಬವಿಸಿದ್ದವು ಆದರೆ ಅದೆ ಕೆಜೆಪಿಯ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು ಬಿಜೆಪಿಗೆ ಬಂದಿದ್ದು ರಾಜ್ಯದಲ್ಲಿ ಹಾಗೂ ತಾಲ್ಲೂಕಿನಲ್ಲಿ ಬಾರಿ ಕುತೂಹಲ ಮೂಡಿಸಿದೆ.
ಇವರ ಜತೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನಗಳು ಹಾಗೂ ರಾಜ್ಯ ಸರಕಾರದ ವೈಫಲ್ಯ ಕುರಿತು ಜನರಲ್ಲಿ ಅರಿವು ಮೂಡಿಸುತ್ತಾ ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಪರಿವರ್ತನಾ ಯಾತ್ರೆ ಆರಂಭಿಸಿದ್ದಾರೆ.
ಈ ಪರಿವರ್ತನಾ ಯಾತ್ರೆಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇತಿಹಾಸ ನೋಡಿದ್ದರೆ ಅರ್ಧ ಶತಮಾನ ಒಂದೆ ಕುಟುಂಬದಲ್ಲಿ ರಾಜ್ಯಕೀಯ ಉಳಿದಿದೆ. ಈ ಹಿಂದೆ ತಾಲ್ಲೂಕಿನ ಬಿಜೆಪಿ ನಾಯಕರಾದ ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳರ ಅಕಾಲಿಕ ಮರಣದಿಂದ ಅನುಕಂಪದ ಅಲೆಯ ಮೇಲೆ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಅವರು ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರನ್ನು ಕೇವಲ್ 51 ಮತಗಳಿಂದ ಪರಾಭವಗೋಳಿಸಿ ಜೇವರ್ಗಿಯಲ್ಲಿ ಪ್ರಥಮವಾಗಿ ಕಮಲ ಅರಳಿಸಿದ್ದರು.

ಜೇವರ್ಗಿಯಲ್ಲಿ ತ್ರೀಕೋನ ಸ್ಪರ್ದೆ:
ಈಗ ಜೇವರ್ಗಿಯಲ್ಲಿ ಕಟ್ಟಾ ಬಿಜೆಪಿ ಶಿವಲಿಂಗಪ್ಪಗೌಡ ಪಾಟೀಲ್ ಪುತ್ರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಜಿಲ್ಲಾ ಬಿಜೆಪಿ ಗ್ರಾಮೀಣ ಅದ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜತೆಗೆ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗರವರ ಪುತ್ರ ಡಾ. ಅಜಯಸಿಂಗ್ ರವರು ಜೇವರ್ಗಿ ಕ್ಷೇತ್ರದಲಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದಾರೆ. ಇವರ ಜೋತೆಗೆ ಕರ್ನಾಟಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ ಕೇದಾರಲಿಂಗಯ್ಯ ಹಿರೇಮಠ ಅವರು ರೈತ ನಾಯಕರಾಗಿ ರೈತರ ಸಮಸ್ಯೆಗಳು ಸ್ಪದೆನೆ ಮಾಡಿ ರೈತ ನಾಯಕರಾಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಮೂರು ಪಕ್ಷಗಳ ಭಲಾಭಲ ತೋರಿಸುವ ವೇಧಿಕೆಯಾಗಲ್ಲಿದೆ.

೨೦೧೩ರಲ್ಲಿ ಎರಡು ಪಕ್ಷದ ಕಿತ್ತಾಟದಿಂದ ಬಿಜೆಪಿಗೆ ಸೋಲು
ಆದ್ರೆ 2013ರಲ್ಲಿ ಬಿಜೆಪಿ ಪಕ್ಷದಲ್ಲಿ ಎರಡು ಗೊಂದಲಗಳಿಂದಾಗಿ ಬಿಜೆಪಿ ಮತ್ತು ಕೆಜೆಪಿ ತಿಕ್ಕಾಟದಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತರು ಎಂಬ ತಾಲ್ಲೂಕಿನಲ್ಲಿ ಹರಿದಾಡುತ್ತೀದೆ. ಇದರ ಲಾಭವನ್ನು ಪಡೆದ ಶಾಸಕ ಡಾ ಅಜಯ್ ಸಿಂಗ್ ಭಾರಿ ಮತಗಳ ಅಂತರದಿಂದ ಮತ್ತೆ ಕಳೆದುಕೊಂಡ ಕೈ ಕ್ಷೇತ್ರವನ್ನು ಪಡೆದ್ದರು.
ಇನ್ನೊಂದೆಡೆ ಜೇವರ್ಗಿ ಮತಕ್ಷೇತ್ರದಲ್ಲಿ ಯಾರು ಗೆಲ್ಲುವ ಕುದುರೆ ಎಂಬ ಲೆಕ್ಕಾಚಾರ ನಡೆದಿದೆ. ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಾ. ಅಜಯಸಿಂಗ್ ಅವರು ಕ್ಷೇತ್ರದಲ್ಲಿ ಹೆಚ್ಚಿಗೆ ಇರುವುದಿಲ್ಲ ಮತ್ತು ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದರು.
ಇಲ್ಲಿನ ಅವರ ಪಿಎಗಳ ಧರ್ಬಾರ ಎಂಬ ನೋವು ಜನಸಾಮಾನ್ಯರಲ್ಲಿ ಇದೆ. ಇನ್ನೊಂದಡೆ ಜೇವರ್ಗಿ ಕ್ಷೇತ್ರದಲ್ಲಿ ಹೆಚ್ಚಿಗೆ ಇರುವರು ದೊಡ್ಡಪ್ಪಗೌಡ ಪಾಟೀಲ್ ಅದರಿಂದ ಅವರನ್ನು ಮತದಾರರು ಕೈ ಹಿಡಿಯಲ್ಲಿದ್ದಾರೆ ಎಂಬುವುದು ಕ್ಷೇತ್ರದ ಮತದಾರರು ಕೈ ಹಿಡಿಯಲ್ಲಿದ್ದಾರೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.

ಜೇವರ್ಗಿ ರಾಜ್ಯದ ಗಮನ ಸೆಳೆದ ಕ್ಷೇತ್ರ
ಜೇವರ್ಗಿ ತಾಲ್ಲೂಕು ಇಡೀ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿದೆ ಯಾಕೆಂದರೆ ಇಲ್ಲಿಯ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ರವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದು ವಿವಿಧ ಸಚಿವರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅವರ ಗೆಲುವಿನ ಓಟವನ್ನು ಬ್ರೇಕ್ ಮಾಡಿದ್ದೆ ಇಂದಿನ ಬಿಜೆಪಿ ಜಿಲ್ಲಾ ಗ್ರಾಮೀಣ ಅದ್ಯಕ್ಷರಾದ ಹಾಗೂ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳರವರು ಆದರಿಂದ ತಾಲ್ಲೂಕಿನಲ್ಲಿ ಮತ್ತೆ ಕಮಲದ ಕಹಳೆ ಅರಳಿಸಲು ಸಜ್ಜಾಗಿದ್ದಾರೆ.

ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ಟಿಕೇಟ್ ಆಕಾಂಕ್ಷಿ
ಇದೆ ಸಮಾಜದ ಮತ್ತೊಬ್ಬ ನಾಯಕ ಶಿವರಾಜ ಪಾಟೀಲ್ ರದ್ದೆವಾಡ್ಡಗಿ ಮತ್ತು ಗಾಣಿಗೇರ ಸಮಾಜದ ರೇವಣ್ಣಸಿದ್ದಪ್ಪ ಸಂಕಾಲಿ ಮತ್ತು ಕುರುಬ ಸಮಾಜದ ಧರ್ಮಣ್ಣ ದೊಡ್ಡಮನಿ ಬಿಜೆಪಿ ಟಿಕೇಟ್ ಗಾಗಿ ತೀವ್ರ ಸ್ಪರ್ದೆ ಮಾಡಿದ್ದರು ಅಂತಿಮವಾಗಿ ಕ್ಷೇತ್ರದ ಜನತೆಯ ಅಭಿಪ್ರಾಯ ಪಡೆದು ಟಿಕೇಟ್ ಕೊಡಲಾಗುವುದು ಎಂದು ರಾಜ್ಯ ಬಿಜೆಪಿ ಅದ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು ಈಗಾಗಲೇ ಘೋಷಣೆ ಮಾಡಿದ್ದರೆ. ಇದರಿಂದ ಕ್ಷೇತ್ರದ ಮತದಾರರು ಯಾರ ಪರವಾಗಿದ್ದಾರೆ ಎಂಬುವುದನ್ನು ಕಾದು ನೋಡ ಬೇಕಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications