ಕಲಬುರಗಿಯ ಅಫಜಲಪುರದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ
ಅಫಜಲಪುರ ತಾಲೂಕಿನ ಉಪ್ಪರವಾಡಿ ಗ್ರಾಮದ ಮಹಾದೇವ ಕಾಳೆ ಎಂಬುವರನ್ನು ದುಷ್ಕರ್ಮಿಗಳು ಬುಧವಾರ ತಡ ರಾತ್ರಿ ಶಿವಬಾಳ ನಗರ ಗ್ರಾಮದ ಹೊರವಲಯದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ. ಘಟನೆ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ, ನವೆಂಬರ್. 03: ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಬಾಳ ನಗರ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಬಿಜೆಪಿ ಕಾಯ೯ಕತ೯ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಅಫಜಲಪುರ ತಾಲೂಕಿನ ಉಪ್ಪರವಾಡಿ ಗ್ರಾಮದ ಮಹಾದೇವ ಕಾಳೆ (50) ಎಂಬುವರನ್ನು ಬಧವಾರ ತಡ ರಾತ್ರಿ ಶಿವಬಾಳ ನಗರ ಗ್ರಾಮದ ಹೊರವಲಯದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ.
ಈ ಮಹಾದೇವ ಕಾಳಿ ಎಂಬಾತ ಮಣ್ಣೂರ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಈತನ ಪತ್ನಿ ವಂದನಾ ಹಾಲಿ ಗ್ರಾಪಂ ಸದಸ್ಯರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿವೆ.
Comments
English summary
BJP worker was murdered in Kalaburagi district Afzalpur Taluk Shivabala Nagar, on Wednesday night November 3, 50 year old The deceased has been identified as Mahadev Kaale, resident of Afzalpur Taluk Upparwadi village.
Story first published: Thursday, November 3, 2016, 15:50 [IST]