ಸಮುದ್ರ ದಾಟಲು ಹಾಂಕಾಂಗ್- ಚೀನಾ ಮಧ್ಯೆ ಜಗತ್ತಿನ ಅತಿ ದೊಡ್ಡ ಸೇತುವೆ
ಹಾಂಕಾಂಗ್, ಅಕ್ಟೋಬರ್ 22: ಹಾಂಕಾಂಗ್ ಹಾಗೂ ಮಕಾವ್ ಅನ್ನು ಚೀನಾದ ನಗರ ಝುಹಾಯ್ ಜತೆಗೆ ಸಂಪರ್ಕ ಕಲ್ಪಿಸುವ $ 20 ಬಿಲಿಯನ್ ಮೌಲ್ಯದ ಸೇತುವೆ ಅಂತಿಮವಾಗಿ ಈ ವಾರ ತೆರೆಯಲಾಗುವುದು. ಸಮುದ್ರವನ್ನು ದಾಟುವ ಅತಿ ದೊಡ್ಡ ಸೇತುವೆ ಇದಾಗಿದ್ದು, ನಿರ್ಮಾಣಕ್ಕೆ ಒಂಬತ್ತು ವರ್ಷ ಸಮಯ ಹಿಡಿಸಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಂಗಳವಾರದಂದು ಝುಹಾಯ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಹಾಂಕಾಂಗ್ ಹಾಗೂ ಮಕಾವ್ ನ ಉನ್ನತಾಧಿಕಾರಿಗಳು ಸಹ ಪಾಲ್ಗೊಳ್ಳಲಿದ್ದಾರೆ. ಬುಧವಾರದಿಂದ ಈ ಸೇತುವೆಯು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
55 ಕಿ.ಮೀ.ನ ಈ ಸೇತುವೆಯು 2016ರಲ್ಲೇ ಉದ್ಘಾಟನೆ ಆಗಬೇಕಿತ್ತು. ಆದರೆ ಪದೇಪದೇ ತಡವಾಗಿ, ಈ ವರ್ಷ ಸಂಚಾರಕ್ಕೆ ಮುಕ್ತವಾಗುತ್ತಿದೆ. ಚೀನಾದ ಪ್ರಮುಖ ಯೋಜನೆಯಾದ ಇದರಲ್ಲಿ ದಕ್ಷಿಣ ಚೀನಾದ 11 ನಗರಗಳ 56,500 ಚದರ ಕಿಲೋಮೀಟರ್ ವ್ಯಾಪ್ತಿ ಒಳಗೊಳ್ಳುತ್ತದೆ. ಹಾಂಕಾಂಗ್ ಹಾಗೂ ಮಕಾವ್ ನಗರ ಕೂಡ ಇದರಲ್ಲಿ ಸೇರಿದ್ದು, ಅಲ್ಲಿ 6.8 ಕೋಟಿ ಜನರು ವಾಸವಿದ್ದಾರೆ.

ಈ ಸೇತುವೆ ನಿರ್ಮಾಣ ಮಾಡಿರುವುದರಿಂದ ಈ ನಗರದ ಮಧ್ಯೆ 3 ಗಂಟೆ ತಗುಲುತ್ತಿದ್ದ ಪ್ರಯಾಣ ಕೇವಲ 30 ನಿಮಿಷಕ್ಕೆ ಇಳಿಯಲಿದೆ. ಈ ವಲಯದಲ್ಲಿ ಸಂಚಾರ ಬಹಳ ಸಲೀಸಾಗಲಿದೆ. ಚಾಲನೆ ಸಮಯ ಇರಲಿ, ಹಾಂಕಾಂಗ್ ನ ಖಾಸಗಿ ಕಾರು ಮಾಲೀಕರು ವಿಶೇಷ ಅನುಮತಿ ಪಡೆಯದೆ ಸೇತುವೆ ದಾಟಲು ಸಾಧ್ಯವಿಲ್ಲ.
ಬಹುತೇಕ ಚಾಲಕರು ಹಾಂಕಾಂಗ್ ಬಂದರಿನಲ್ಲೇ ಕಾರು ನಿಲ್ಲಿಸಿ, ಷಟಲ್ ಅಥವಾ ವಿಶೇಷ ಬಾಡಿಗೆ ಕಾರು ಮೂಲಕ ತೆರಳಬೇಕು. ಅದಕ್ಕೂ ಮುನ್ನ ವಲಸೆ ನಿಯಮಗಳನ್ನು ಪೂರ್ತಿಗೊಳಿಸಬೇಕು. ಯಾವ ಸಮಯದಲ್ಲಿ ಪ್ರಯಾಣ ಎಂಬುದರ ಆಧಾರಪಲ್ಲಿ ಒಂದು ಕಡೆಯ ಪ್ರಯಾಣಕ್ಕೆ ಷಟಲ್ ಬಸ್ ಗಳಿಗೆ $ 8ರಿಂದ $ 10 ಆಗುತ್ತದೆ.
Hong Kong-Zhuhai-Macao bridge will open on October 24. With a 360-degree sea view, the journey is pure enjoyment. pic.twitter.com/WcudAg6a5P
— China News 中国新闻网 (@Echinanews) October 22, 2018
ಹಾಂಕಾಂಗ್ ನಿಂದ ಮಕಾವ್ ಅಥವಾ ಝುಹಾಯ್ ನಗರಕ್ಕೆ ಸಂಪರ್ಕ ಕಲ್ಪಿಸಲು ಸೂಕ್ತ ಸಂಚಾರ ವ್ಯವಸ್ಥೆ ಇಲ್ಲ ಎಂಬ ಬಗ್ಗೆ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಚೀನಾದಿಂದ ಬರುವ ಪ್ರವಾಸಿಗರ ಸಂಖ್ಯೆ ಕೂಡ ಬಹಳ ಹೆಚ್ಚು ಎಂಬ ಆತಂಕ ಕೂಡ ವ್ಯಕ್ತಪಡಿಸಿದ್ದರು. ಅಂದಹಾಗೆ 2016ರಲ್ಲಿ ಹಾಂಕಾಂಗ್ ಗೆ 5.67 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದೇ ಅವಧಿಯಲ್ಲಿ ಯುನೈಟೆಡ್ ಕಿಂಗ್ ಡಮ್ ಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 3.76 ಕೋಟಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications