ಮಿರಿಮಿರಿ ಮಿಂಚು, ಝಗಮಗಿಸುವ ಈ ಗಿಡಕ್ಕೆ 107 ಕೋಟಿ ರೂಪಾಯಿ!
ಸ್ಪೇನ್, ಡಿಸೆಂಬರ್.03: ಒಂದು ಗಿಡಕ್ಕೆ 107 ಕೋಟಿ ರೂಪಾಯಿ ಎಂದರೆ ಎಂಥವರಿಗೂ ಅಚ್ಚರಿ ಆಗುತ್ತದೆ. ಆದರೆ, ಇದು ಸಾಮಾನ್ಯವಾದ ಗಿಡವಲ್ಲ. ಬದಲಿಗೆ ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ ಮಸ್ ಗಾಗಿ ತಯಾರಾಗಿರುವ ಸ್ಪೆಷಲ್ ಟ್ರೀ ಇದು.
ಹೌದು, ಹೊಸ ವರ್ಷಾಚರಣೆಗೂ ವಾರ ಮೊದಲೇ ಆಚರಿಸುವ ಕ್ರೈಸ್ತರ ಪವಿತ್ರಹಬ್ಬ ಕ್ರಿಸ್ ಮಸ್ ಇನ್ನೇನು ಹತ್ತಿರ ಬಂದಿದೆ. ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ ಕ್ರಿಸ್ ಮೆಸ್ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದೇ ಈ ಕ್ರಿಸ್ ಮಸ್ ಟ್ರೀ.
ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕ್ರಿಸ್ ಮಸ್ ಟ್ರೀಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದೇ ರೀತಿ ಸ್ಪೇನ್ ನ ಕೆಂಪಿಸ್ಕಿಯಲ್ಲಿರುವ ಹೋಟೆಲ್ ಬಾಹಿಯಾನಲ್ಲಿ ನಿರ್ಮಿಸಿರುವ ಕ್ರಿಸ್ ಮೆಸ್ ಟ್ರೀ ಸಾಕಷ್ಟು ಸದ್ದು ಮಾಡುತ್ತಿದೆ.

ಕ್ರಿಸ್ ಮಸ್ ಟ್ರೀಗಾಗಿ 107 ಕೋಟಿ ರೂಪಾಯಿ ಖರ್ಚು
ಹೋಟೆಲ್ ಬಾಹಿಯಾದಲ್ಲಿ ಕ್ರಿಸ್ ಮಸ್ ಟ್ರೀ ನಿರ್ಮಾಣಕ್ಕಾಗಿ ಬರೋಬ್ಬರಿ 107 ಕೋಟಿ 33 ಲಕ್ಷ 77 ಸಾವಿರದ 500 ರೂಪಾಯಿ ಖರ್ಚು ಮಾಡಲಾಗಿದೆ. ಕ್ರಿಸ್ ಮಸ್ ಟ್ರೀಯನ್ನು ವಜ್ರ, ಚಿನ್ನ ಹಾಗೂ ದುಬಾರಿ ಮೌಲ್ಯದ ಹವಳಗಳಿಂದ ಅಲಂಕರಿಸಲಾಗಿದೆ.
ಕಪ್ಪು-ಬಿಳಿ, ಗುಲಾಬಿ ಮತ್ತು ಕೆಂಪು ವಜ್ರಗಳಿಂದ ಕ್ರಿಸ್ ಮಸ್ ಟ್ರೀಯನ್ನು ಅಲಂಕರಿಸಲಾಗಿದೆ. ಇದರ ಜೊತೆಗೆ ಸುಗಂಧ ದ್ರವ್ಯದ ಬಾಟಲ್, ಉಷ್ಣಪಕ್ಷಿಗಳ ಮೊಟ್ಟೆ, ನವಿಲಿನ ಗರಿ ಹಾಗೂ ತ್ರೀಡಿ ಪ್ರಿಂಟೆಡ್ ಚಾಕೋಲೆಟ್ ಸೇರಿದಂತೆ ವಿವಿಧ ಆಭರಣಗಳಿಂದ ದೆಬಿ ವಿಂಗಮ್ ಎಂಬುವವರು ಅಲಂಕರಿಸಿದ್ದಾರೆ. ಇದು ವಿಶ್ವದ ಅತಿ ದುಬಾರಿ ಮೌಲ್ಯದ ಕ್ರಿಸ್ ಮಸ್ ಟ್ರೀ ಆಗಿದೆ.
ಈ ಹಿಂದೆ 2010ರಲ್ಲಿ ಅಬು ದುಬೈನ ಎಮರೈಟ್ಸ್ ಪ್ಯಾಲೇಸ್ ಹೋಟೆಲ್ ನಲ್ಲಿ ಅತ್ಯಂತ ದುಬಾರಿ ಮೌಲ್ಯದ ಕ್ರಿಸ್ ಮಸ್ ಟ್ರೀಯನ್ನು ನಿರ್ಮಾಣ ಮಾಡಲಾಗಿತ್ತು. 78 ಕೋಟಿ 70 ಲಕ್ಷ 42 ಸಾವಿರದ 300 ರೂಪಾಯಿ ಮೌಲ್ಯದ ಕ್ರಿಸ್ ಮಸ್ ಟ್ರೀ ನಿರ್ಮಾಣ ಮಾಡಿದ್ದು, ಗಿನ್ನಿಸ್ ದಾಖಲೆಗೆ ಸೇರಿತ್ತು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು












Click it and Unblock the Notifications