ಕೊರೊನಾ ತಗುಲಿರುವವರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಕಾಣಬೇಕು?
ಬೆಂಗಳೂರು, ಮಾರ್ಚ್ 23: ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿದ್ದು, ಸಾವಿರಾರು ಮಂದಿಯನ್ನು ಬಲಿ ಪಡೆದುಕೊಂಡಿದೆ.
Recommended Video
ಆದರೆ ಸೋಂಕು ತಗುಲಿರುವವರನ್ನು ಹೇಗೆ ಕಾಣಬೇಕು ಎಂಬುದು ಎಲ್ಲರೂ ತಿಳಿಯಲೇಬೇಕಾದ ಸೂಕ್ಷ್ಮ ವಿಚಾರವಾಗಿದೆ. ಈ ರೋಗ ಮಾರಣಾಂತಿಕವಾಗಿದ್ದರೂ ಕೂಡ ಮೊದಲೇ ರೋಗದ ಲಕ್ಷಣಗಳನ್ನು ಪತ್ತೆ ಹಚ್ಚಲು ಸಾಧ್ಯವಾದರೆ ಅಂತವರನ್ನು ಬದುಕಿಸಿಕೊಳ್ಳಬಹುದಾಗಿದೆ.
1 ರಿಂದ 10 ವರ್ಷದೊಳಗಿನ ಅಥವಾ 60 ವರ್ಷ ಮೇಲ್ಪಟ್ಟವರನ್ನು ಹೆಚ್ಚಾಗಿ ಈ ರೋಗ ಬಾಧಿಸುತ್ತದೆ. ರೋಗ ಪೀಡಿತರ ಮನಸ್ಥಿತಿ ತುಂಬಾ ಸೂಕ್ಮ್ವಾಗಿದ್ದು ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು.
ಈಗಾಗಲೇ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 390ಕ್ಕಿಂತ ಹೆಚ್ಚಾಗಿದೆ. ಎಂಟು ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ನಿತ್ಯ 600ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪುತ್ತಿದ್ದಾರೆ.

ಯಾವುದೇ ಜನಾಂಗ ಅಥವಾ ರಾಷ್ಟ್ರೀಯತೆಗೆ ಅವರನ್ನು ಲಗತ್ತಿಸಬೇಡಿ
ಕೊವಿಡ್ 19 ಭೌಗೋಳಿಕ ಸ್ಥಳಗಳಲ್ಲಿ ಅನೇಕ ದೇಶಗಳ ಜನರನ್ನು ಬಾಧಿಸಿದೆ ಮತ್ತು ಪರಿಣಾಮವನ್ನು ಬೀರಿದೆ. ಅದನ್ನು ಯಾವುದೇ ಜನಾಂಗ ಅಥವಾ ರಾಷ್ಟ್ರೀಯತೆಗೆ ಲಗತ್ತಿಸಬೇಡಿ . ಬಾಧಿತರಾದವರ ಬಗ್ಗೆ ಅನುಭೂತಿ ಇರಲಿ.

ಕೊರೊನಾ ಹೊಂದಿದವರನ್ನು ರೋಗಪೀಡಿತ ಎನ್ನಬೇಡಿ
ಕೊವಿಡ್ ರೋಗ ಹೊಂದಿರುವ ಜನರನ್ನು ಕೊವಿಡ್ ಪ್ರಕರಣಗಳು, ಕೊವಿಡ್ ಕುಟುಂಬಗಳು ಅಥವಾ ರೋಗ ಪೀಡಿತ ಎಂದು ಕರೆಯಬೇಡಿ. ಅವರನ್ನು ಕೊವಿಡ್ 19 ಹೊಂದಿರುವ ಜನರು ಅಥವಾ ಕೊವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಜನರು, ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಜನರು ಎಂದು ಕರೆಯಬೇಕು.

ನಿಮಗೆ ಆತಂಕವನ್ನುಂಟುಮಾಡುವ ಸುದ್ದಿ ಓದಬೇಡಿ
ನಿಮಗೆ ಆತಂಕ ಅಥವಾ ತೊಂದರೆ ಉಂಟಾಗುವ ಸುದ್ದಿಗಳನ್ನು ನೋಡುವುದು, ಓದುವುದು ಅಥವಾ ಕೇಳುವುದು ತಪ್ಪಿಸಿ, ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯವಾಗಿ ಮಾಹಿತಿಯನ್ನು ಪಡೆಯಿರಿ. ಒಂದು ಅಥವಾ ಎರಡು ಬಾರಿ ಹಗಲಿನಲ್ಲಿ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಟಿವಿಯನ್ನು ನೋಡಿ.

ನಿಮ್ಮನ್ನು ರಕ್ಷಿಸಿಕೊಳ್ಳಿ, ಇತರರಿಗೂ ಬೆಂಬಲ ನೀಡಿ
ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಇತರರಿಗೆ ಬೆಂಬಲ ನೀಡಿ, ಇದರಿಂದ ನಿಮಗೂ ಹಾಗೂ ನಿಮ್ಮಿಂದ ಸಹಾಯ ಪಡೆಯುವವರಿಗೂ ಪ್ರಯೋಜನವನ್ನು ನೀಡುತ್ತದೆ.

ವೈದ್ಯರು, ನರ್ಸ್ ಕಾರ್ಯವನ್ನು ಶ್ಲಾಘಿಸಿ
ಕೊವಿಡ್ 19 ಪೀಡಿತ ಜನರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್ ಹಾಗೂ ವೈದ್ಯರನ್ನು ಗೌರವಿಸಿ , ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿ , ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಜೀವವನ್ನು ಉಳಿಸಲು ಶ್ರಮಿಸಿರುವವರನ್ನು ಗೌರವಿಸಿ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications