ವಿಶೇಷ ಲೇಖನ: ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ಗನ್, ಬಾಂಬ್ ಸದ್ದು
ಟರ್ಕಿಯಲ್ಲಿನ ಇಂದಿನ ಸ್ಥಿತಿಗೆ ಕಾರಣವೇನು? ತುಂಬ ಆಧುನಿಕ ಮನಸ್ಥಿತಿಯಲ್ಲಿ ಕಟ್ಟಿದ ದೇಶ ಹೀಗೆ ಬಾಂಬ್-ಗನ್ ಗಳ ಮೊರೆತಕ್ಕೆ ಸಾಕ್ಷಿಯಾಗಲು ಕಾರಣ ಏನು? ಈ ಪ್ರಶ್ನೆಗಳಿಗೆ ವಿಶ್ಲೇಷಣಾತ್ಮಕ ಉತ್ತರ ನೀಡಲು ಪ್ರಯತ್ನಿಸಿದ್ದಾರೆ ಡಾ.ಪ್ರೀತಮ್
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಟರ್ಕಿಯ ನೈಟ್ ಕ್ಲಬ್ ವೊಂದರಲ್ಲಿ ಭಯೋತ್ಪಾದಕರ ದಾಳಿಯಾಗಿದೆ. ಮೂವತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಹೀಗೆಲ್ಲ ಅಗಬಹುದು ಎಂಬುದನ್ನು ಈ ಹಿಂದೆ ಕನಸು-ಮನಸಿನಲ್ಲೂ ಅಂದುಕೊಳ್ಳಲು ಸಾಧ್ಯವಿರಲಿಲ್ಲ. ಅಂದ ಹಾಗೆ ನನ್ನ ಹೆಸರು ಪ್ರೀತಂ. ತುಮಕೂರಿನಲ್ಲಿ ನನ್ನ ತಂದೆ-ತಾಯಿ ಇದ್ದಾರೆ. ಸದ್ಯಕ್ಕೆ ಆಂಧ್ರ ಅನಂತಪುರದ ಆಸ್ಪತ್ರೆಯೊಂದರಲ್ಲಿ ನನ್ನ ಕೆಲಸ.
ರೇಡಿಯಾಲಜಿ ಫೆಲೋಷಿಪ್ ಗಾಗಿ ಟರ್ಕಿಯಲ್ಲಿ ಹತ್ತು ತಿಂಗಳ ಕಾಲ ಇದ್ದೆ. ಆ ದೇಶದ ಮೇಲೆ ಯುರೋಪ್ ಸಂಸ್ಕೃತಿ ಪ್ರಭಾವ ಗಾಢವಾಗಿದೆ. ಇರಾನ್, ಇರಾಕ್, ಅರ್ಮೇನಿಯಾ ಹೀಗೆ ಅರೇಳು ದೇಶಗಳ ಜತೆಗೆ ಟರ್ಕಿ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ಅಲ್ಲಿನ ಶಿಕ್ಷಣ ವ್ಯವಸ್ಥೆ, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆ..ವಾಹ್, ಎಲ್ಲವೂ ತುಂಬ ಚಂದ.[ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು]
ನಾನು ಅಲ್ಲಿದ್ದ ಅಷ್ಟೂ ಕಾಲ ಆ ದೇಶದಲ್ಲಿನ ಸ್ವಾತಂತ್ರ್ಯಕ್ಕೆ, ಶಾಂತಿಪ್ರಿಯತೆಗೆ ಮನಸ್ಸು ಕೊಟ್ಟುಬಿಟ್ಟಿದ್ದೆ. ತುಂಬ ಸಂಪ್ರದಾಯದ ಭಾರವಿಲ್ಲದ, ದೊಂಬಿ, ಗಲಾಟೆ, ಕೊಲೆಗಳೆಂಬ ಮಾತು ಕೇಳದ ತುಂಬ ಸುಂದರ ದೇಶವಾಗಿತ್ತು ಟರ್ಕಿ. ಅದಕ್ಕೂ ಹಿಂದೆ ಇದ್ದ ಸಣ್ಣ-ಪುಟ್ಟ ಅಸಮಾಧಾನಗಳನ್ನು ಗುಂಪೊಂದು ಹೊರಹಾಕುತ್ತಿತ್ತು. ಅದರ ಜತೆಗೆ ಮಾತುಕತೆ ನಡೆಸಿ, ಅದನ್ನು ಕೂಡ ಟರ್ಕಿ ಸರಕಾರ ನಿವಾರಿಸಿಕೊಂಡಿತ್ತು.[ಇಸ್ತಾನ್ಬುಲ್ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ, 35 ಜನರ ಹತ್ಯೆ]

ನಲವತ್ತು ಲಕ್ಷ ವಲಸಿಗರು
ಆ ದೇಶದ ಇಂದಿನ ಮೂಲ ಸಮಸ್ಯೆಗೆ ಕಾರಣ ವಲಸಿಗರು. ಸಿರಿಯಾದಿಂದ ಹೊರಟ ವಲಸಿಗರು ಗ್ರೀಸ್ ತಲುಪಬೇಕಿತ್ತು. ಆದರೆ ಟರ್ಕಿ ದಾಟುವಷ್ಟರಲ್ಲಿ ಆ ದೇಶದ ಗಡಿಯನ್ನು ಮುಚ್ಚಿದ್ದರಿಂದ 40 ಲಕ್ಷದಷ್ಟು ವಲಸಿಗರು ಆ ದೇಶದಲ್ಲೇ ಉಳಿದುಹೋದರು. ಇನ್ನು ಕುರ್ದಿಷ್ ಗಳ ಬಗ್ಗೆ ಹೇಳಬೇಕು. ಟರ್ಕಿಯ ಉಸ್ತುವಾರಿಯನ್ನು ಕೆಲ ಕಾಲ ಬ್ರಿಟಿಷರು ನೋಡಿಕೊಂಡಿದ್ದಾರೆ.

ಕುರ್ದಿಶ್ ಜನಾಂಗದವರ ತಲೆ ನೋವು
ಜೊತೆಗೆ ಸುತ್ತ ಮುತ್ತಲ ದೇಶದಲ್ಲಿ ಹತೋಟಿ ಸಾಧಿಸಿದ್ದ ಬ್ರಿಟಿಷರು, ತುಂಬ ದೊಡ್ಡ ಸಂಖ್ಯೆಯಲ್ಲಿರುವ ಕುರ್ದಿಷ್ ಜನಾಂಗದವರನ್ನು ಇರಾಕ್, ಇರಾನ್, ಟರ್ಕಿ ಇತರ ದೇಶಗಳಲ್ಲಿ ಹಂಚಿಹೋಗುವಂತೆ ಮಾಡಿದರು. ತಮ್ಮದೇ ಆದ ಒಂದು ದೇಶ ಎಂಬುದು ಇಲ್ಲದ ಅವರೀಗ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

ಮುಕ್ತವಾಗಿದ್ದೇ ಸಮಸ್ಯೆಯಾಯಿತೆ?
ಟರ್ಕಿಯ ಜನ ಮೂಲತಃ ವ್ಯಾಪಾರಿಗಳು. ನೆಮ್ಮದಿಯಾದ ಜೀವನ ನಡೆಸುವಂಥವರು. ಆದರೆ ಆ ದೇಶದ ಗಡಿಯು ಅರ್ಮೇನಿಯಾ ಒಂದನ್ನು ಹೊರತುಪಡಿಸಿ ಉಳಿದೆಡೆ ತುಂಬ ಮುಕ್ತವಾಗಿದೆ. ಇಂದಿನ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವುದು ಅಂಥ ಮುಕ್ತ ಮನಸ್ಥಿತಿಯೆ. ಉಳಿದ ರಾಷ್ಟ್ರಗಳಂತೆ ಇಲ್ಲಿ ತೀರಾ ಕಠಿಣ ನಿಯಮಗಳಿಲ್ಲ. ಶಿಕ್ಷಣ, ಅಭಿಪ್ರಾಯ ಸ್ವಾತಂತ್ರ್ಯ, ಶ್ರೀಮಂತಿಕೆ ಈ ಎಲ್ಲ ಕಾರಣಕ್ಕೆ ಟರ್ಕಿಯನ್ನು ಬಹಳ ಇಷ್ಟಪಡುತ್ತಾರೆ ಜನ.

ಪ್ರವಾಸೋದ್ಯಮಕ್ಕೆ ಹೆಸರುವಾಸಿ
ಪ್ರಾಯಶಃ ಒಂದೆರಡು ವರ್ಷಗಳ ಹಿಂದೆ ಇರಬೇಕು. ಆ ವರ್ಷದಲ್ಲಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಟರ್ಕಿಗೆ ಏಳನೆಯದೋ ಎಂಟನೆಯದೋ ಸ್ಥಾನವಿತ್ತು. ಅದರೆ ಇಂದಿಗೆ ಐಎಸ್ ಐಎಸ್ ನವರ ಗುರಿಗೆ ಸುಲಭಕ್ಕೆ ತುತ್ತಾಗಿದೆ ಟರ್ಕಿ. ಯಾವುದೇ ದೇಶ ಭಯೋತ್ಪಾದನೆ ದಾಳಿಗೆ ತುತ್ತಾದರೆ ಅಂಥ ಒಂದು ಘಾತಕ್ಕೆ ಅದು ನಿಲ್ಲುವುದಿಲ್ಲ.

ಅಟ ತುರ್ಕ್ ಉದ್ದೇಶಕ್ಕೇ ಕಲ್ಲು
ಆ ದೇಶದಲ್ಲಿ ಒಂದು ಜಾಲ ಬೆಳೆಯುತ್ತದೆ. ಪದೇ ಪದೇ ದಾಳಿಗಳಾಗುತ್ತವೆ. ಅಮಾಯಕರ ನೆತ್ತರು ಹರಿಯುತ್ತದೆ. ಟರ್ಕಿಯನ್ನು ತುಂಬ ಆಧುನಿಕವಾಗಿ ಕಟ್ಟಿದ ಅಟ ತುರ್ಕ್ ಉದ್ದೇಶವನ್ನು ಸೋಲಿಸುವ ರೀತಿಯಲ್ಲಿ ಉಗ್ರಗಾಮಿಗಳ ದಾಳಿಗಳಾಗುತ್ತಿವೆ. ಅಟ ತುರ್ಕ್ ಆಧುನಿಕ ಟರ್ಕಿಯ ಮೊದಲ ಅಧ್ಯಕ್ಷರು ಅವರ. ಮಹಿಳೆಯರಿಗೆ ಸಮಾನ ಹಕ್ಕು ನೀಡಿದ ಆಧುನಿಕ ಸಿದ್ಧಾಂತವಾದಿ. 1920ರ ದಶಕದಲ್ಲೇ ಮಹಿಳೆಯರಿಗೆ ರಾಜಕೀಯವಾಗಿಯೂ ಸಮಾನ ಹಕ್ಕು ನೀಡಿದವರು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications