ವಿಮೆಯ ಹಣಕ್ಕಾಗಿ ತನ್ನ ಕೈಕಾಲು ಕತ್ತರಿಸಿಕೊಂಡ ಮಹಿಳೆ!
ಹನೋಯಿ, ಆಗಸ್ಟ್ 25 : ವಿಮಾ ಕಂಪನಿಯಿಂದ ಭಾರೀ ಮೊತ್ತದ ಹಣವನ್ನು ಪಡೆಯುವ ಉದ್ದೇಶದಿಂದ ಮಹಿಳೆಯೊಬ್ಬಳು ತನ್ನ ದೇಹದ ಅಂಗಗಳನ್ನೇ ಕತ್ತರಿಸಿಕೊಂಡು, ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದ ವಿಲಕ್ಷಣ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.
30 ವರ್ಷದ ಮಹಿಳೆ ಲಿ ತಿನ್ ಎನ್ ಎಂಬಾಕೆ ತನಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ನಂತರ ಒಂದೂವರೆ ಲಕ್ಷ ಡಾಲರ್ ನಷ್ಟು ಜೀವವಿಮೆಯ ಹಣ ತನಗೆ ನೀಡಬೇಕೆಂದು ಅರ್ಜಿ ಗುಜರಾಯಿಸಿದ್ದಾಳೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ ತಿಳಿದುಬಂದ ವಿಚಾರವೇನೆಂದರೆ, ಆಕೆಗೆ ಆದ ಗಾಯ ರೈಲು ಅಪಘಾತದಿಂದಲ್ಲವೆಂಬುದು. ಇನ್ನೂ ಆಘಾತಕಾರಿ ಸಂಗತಿಯೇನೆಂದರೆ, ತನ್ನ ಕೈ ಮತ್ತು ಕಾಲಿಗೆ ಗಾಯ ಮಾಡಲು ಆಕೆ ವ್ಯಕ್ತಿಯೊಬ್ಬನಿಗೆ 2,200 ಡಾಲರ್ ಹಣ ನೀಡಿದ್ದಳು! [ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?]

ರೈಲು 'ಅಪಘಾತ'ಕ್ಕೆ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಡೋನ್ ವಾನ್ ಡಿ ಎಂಬಾತನೇ ಆ ಮಹಿಳೆಯ ಕೈಕಾಲನ್ನು ಕತ್ತರಿಸಿದ್ದ. ನಂತರ ಅಪಘಾತವಾಗಿದೆ ಎಂದು ನಾಟಕವಾಡಿ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದ ಎಂದು ಪೀಪಲ್ಸ್ ಪೊಲೀಸ್ ನ್ಯೂಸ್ ಪೇಪರ್ ವರದಿ ಮಾಡಿದೆ.
ಇದು ಇನ್ಶೂರನ್ಸ್ ಕಂಪನಿಗೆ ಟೋಪಿ ಹಾಕಲು ಮಾಡಿದ ಪಕ್ಕಾ ಪ್ಲಾನ್. ಇಂಥ ಘಟನೆ ವಿಟೆಟ್ನಾಂನಲ್ಲಿ ಮಾತ್ರ ಜರುಗಲು ಸಾಧ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕುಹಕವಾಡುತ್ತಿದ್ದಾರೆ.
ಒಂದು ಕಾಲು, ಒಂದು ಕೈ ಕಳೆದುಕೊಂಡಿದ್ದು ಮಾತ್ರವಲ್ಲ, ವಿಮೆ ಹಣವನ್ನೂ ಕಳೆದುಕೊಂಡು ಜೈಲು ಪಾಲಾಗಬೇಕಾದ ಸ್ಥಿತಿ ಆ ಮಹಿಳೆಗೆ ಈಗ ಬಂದಿದೆ. ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದ್ದರಿಂದ ಆ ಮಹಿಳೆ ಇಂಥ ಕುಕೃತ್ಯಕ್ಕೆ ಇಳಿದಿದ್ದಾಳೆ. [ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications