Get Updates
Get notified of breaking news, exclusive insights, and must-see stories!

US: ಗುರು ಪೂರ್ಣಿಮೆಗೆ ಭಗವದ್ಗೀತೆಯನ್ನು ಪಠಿಸಲು ಟೆಕ್ಸಾಸ್‌ನಲ್ಲಿ ಸೇರಿದ 10,000 ಜನ

ಯುಎಸ್, ಟೆಕ್ಸಾಸ್, ಜುಲೈ 4: ಟೆಕ್ಸಾಸ್‌ನಲ್ಲಿ ಈ ಬಾರಿ ಗುರು ಪೂರ್ಣಿಮೆಯನ್ನು ಆಚರಿಸಲಾಗಿದೆ. ಜುಲೈ 3ರಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು. ಈ ದಿನ ಟೆಕ್ಸಾಸ್‌ನ ಅಲೆನ್ ಈಸ್ಟ್ ಸೆಂಟರ್‌ನಲ್ಲಿ ನಾಲ್ಕರಿಂದ 84 ವರ್ಷ ವಯಸ್ಸಿನ ಒಟ್ಟು 10,000 ಜನರು ಒಟ್ಟಿಗೆ ಭಗವದ್ಗೀತೆಯನ್ನು ಪಠಿಸಿದ್ದು ಕಂಡು ಬಂದಿದೆ.

ಗುರು ಪೂರ್ಣಿಮೆಯ ಅಂಗವಾಗಿ ಜುಲೈ 3ರಂದು ಯೋಗ ಸಂಗೀತಾ ಮತ್ತು ಎಸ್‌ಜಿಎಸ್ ಗೀತಾ ಫೌಂಡೇಶನ್ ವತಿಯಿಂದ ಭಗವದ್ಗೀತಾ ಪಾರಾಯಣ ಯಾಗವನ್ನು ಆಯೋಜಿಸಲಾಗಿತ್ತು. ಮೈಸೂರಿನ ಅವಧೂತ ದತ್ತ ಪೀಠಂ ಆಶ್ರಮದಿಂದ ಸೋಮವಾರದಂದು ಗುರು ಪೂರ್ಣಿಮೆಯ ಸಂದರ್ಭದಲ್ಲಿ ವಿಶ್ವವಿಖ್ಯಾತ ಆಧ್ಯಾತ್ಮಿಕ ಸಂತ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಭಗವದ್ಗೀತೆಯನ್ನು ಪಠಿಸಲಾಯಿತು.

US: 10,000 people gather in Texas to chant Bhagavad Gita on Guru Purnima

ಅವಧೂತ ದತ್ತ ಪೀಠವು 1966 ರಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸ್ಥಾಪಿಸಿದ ಅಂತರರಾಷ್ಟ್ರೀಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಮಾಜ ಕಲ್ಯಾಣ ಸಂಸ್ಥೆಯಾಗಿದೆ. ಈ ಪೀಠದಲ್ಲಿ ಮಾನವ ಜೀವನವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ಯೋಜನೆಗಳನ್ನು ಆಯೋಜಿಸಲಾಗುತ್ತದೆ.

ಹೀಗೆ ಟೆಕ್ಸಾಸ್‌ನಲ್ಲಿ ಭಗವದ್ಗೀತೆಯನ್ನು ಪಠಿಸಿದ ಎಲ್ಲಾ 10,000 ಜನರು ತಮ್ಮ ಗುರು ಗಣಪತಿ ಸಚ್ಚಿದಾನಂದ ಜಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅದನ್ನು ಕಂಠಪಾಠ ಮಾಡಿದ್ದಾರೆ. ಸ್ವಾಮಿಜಿ ಅವರು ಅಮೇರಿಕಾದಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ಮೊದಲಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಈವೆಂಟ್ ಅನ್ನು ಆಯೋಜಿಸುತ್ತಿದ್ದಾರೆ ಮತ್ತು ಯುಎಸ್ಎಯಲ್ಲಿ ಹಿಂದೂ ಆಧ್ಯಾತ್ಮಿಕತೆಯ ತಿರುಳನ್ನು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದ್ದಾರೆ.

US: 10,000 people gather in Texas to chant Bhagavad Gita on Guru Purnima

ಪೂಜ್ಯ ಗಣಪತಿ ಸಚ್ಚಿದಾನಂದ ಜಿ ಸ್ವಾಮಿ ಜೀ ಅವರು ಭಗವದ್ಗೀತೆಯನ್ನು ಬೋಧಿಸುವ ಮತ್ತು ಸನಾತನ ಹಿಂದೂ ಧರ್ಮದ ಮೌಲ್ಯಗಳನ್ನು ಹರಡುವ ಮೂಲಕ ಜಗತ್ಪ್ರಸಿದ್ಧ ಸಂತರಾಗಿದ್ದಾರೆ.

ಜೊತೆಗೆ ಸೋಮವಾರ ಗುರು ಪೂರ್ಣಿಮೆಯಂದು ಆಗ್ರಾದ ರಾವತ್‌ಪಾರಾದಲ್ಲಿರುವ ಮಂಕಮೇಶ್ವರ ಮಹಾದೇವ ದೇವಾಲಯಕ್ಕೆ ಭಾರತದಾದ್ಯಂತದ ಭಕ್ತರು ಆಗಮಿಸಿದರು.

ಅಧಿಕಾರಿಗಳ ಪ್ರಕಾರ, ಭಕ್ತರು ಮುಂಜಾನೆಯಿಂದಲೇ ಶಿವನನ್ನು ಪೂಜಿಸಲು ಪ್ರಾರಂಭಿಸಿದರು ಮತ್ತು ಅವರ ಆಶೀರ್ವಾದ ಪಡೆಯಲು ಶಿವಾಲಯಕ್ಕೆ ಭೇಟಿ ನೀಡಿದರು. ''ಬೆಳಿಗ್ಗೆಯಿಂದಲೇ ಭಕ್ತರು ಶಿವನ ಆರಾಧನೆ ಆರಂಭಿಸಿದ್ದರು. ಭಕ್ತರು ಬಾಬಾ ಭೋಲೆನಾಥನನ್ನು ಪೂಜಿಸಲು ಶಿವಾಲಯವನ್ನು ತಲುಪುತ್ತಾರೆ ಮತ್ತು ಅವರ ಇಷ್ಟಾರ್ಥಗಳಿಗಾಗಿ ಶಿವನನ್ನು ಆರಾಧಿಸುತ್ತಿದ್ದಾರೆ, "ಎಂದು ಅವರು ಹೇಳಿದರು.

ಶ್ರಾವಣ ಮಾಸದಲ್ಲಿ ಒಂಬತ್ತು ಸೋಮವಾರಗಳು ಬರಲಿದ್ದು, ಈ ದಿನಗಳಲ್ಲಿ ಹುಣ್ಣಿಮೆಯಂದು ಪೂರ್ಣಾಹುತಿಯಾಗುವ ಪುಣ್ಯಸ್ನಾನವನ್ನು ಧಾರ್ಮಿಕ ವಿಧಿವಿಧಾನದಂತೆ ಭಕ್ತರು ನೆರವೇರಿಸಲಿದ್ದಾರೆ ಎಂದು ಮಂಕಮೇಶ್ವರ ಮಹಾದೇವ ದೇವಸ್ಥಾನದ ಮಹಂತ್ ಯೋಗೀಶ್ ಪುರಿ ತಿಳಿಸಿದ್ದಾರೆ.

'ಶ್ರಾವಣ ಮಾಸದಲ್ಲಿ ಒಂಬತ್ತು ಸೋಮವಾರಗಳಿರುತ್ತವೆ. ಈ ದಿನಗಳಲ್ಲಿ ಪವಿತ್ರ ಸ್ನಾನವನ್ನು ಮಾಡಲಾಗುವುದು ಮತ್ತು ಹುಣ್ಣಿಮೆಯಂದು ಮಾತ್ರ ವಿಧಿವಿಧಾನಗಳ ಪ್ರಕಾರ ಪೂರ್ಣಗೊಳಿಸಲಾಗುವುದು' ಎಂದು ಮಹಂತ್ ಯೋಗೇಶ್ ಪುರಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+