ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದ ಉಕ್ರೇನ್ | Ukraine And Russia
ಉಕ್ರೇನ್ ಈಗ ರೊಚ್ಚಿಗೆದ್ದು, ರಷ್ಯಾ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದು ಕೂತಿದೆ. ತಮ್ಮ ಮೇಲೆ ಈ ರೀತಿ ಘೋರವಾಗಿ ದಾಳಿ ಮಾಡುತ್ತಿರುವ ರಷ್ಯಾಗೆ ಹೇಗಾದರೂ ಮಾಡಿ ಸೂಕ್ತ ಪಾಠ ಕಲಿಸಬೇಕು, ಆ ಮೂಲಕ ರಿವೇಂಜ್ ತೆಗೆದುಕೊಳ್ಳಬೇಕು ಎಂಬುದು ಉಕ್ರೇನ್ ಪ್ಲಾನ್. ಆದರೆ ಪದೇ ಪದೇ ಉಕ್ರೇನ್ನ ಈ ಪ್ಲಾನ್ ಕೈಕೊಡುತ್ತಿದೆ. ಇಷ್ಟೆಲ್ಲದರ ನಡುವೆ ಒತ್ತಡದ ಪರಿಣಾಮ ರಷ್ಯಾ ಜೊತೆಗೆ ಹಲವು ಕಡೆ, ವೇದಿಕೆ ಹಂಚಿಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಿತ್ತು. ಆದರೆ ಇದೀಗ ರಷ್ಯಾ ವಿರುದ್ಧ ರೊಚ್ಚಿಗೆದ್ದು ಮಹತ್ವದ ಘೋಷಣೆ ಹೊರಡಿಸಿದೆ ಉಕ್ರೇನ್.
ರಷ್ಯಾ ಕೈಯಿಂದ ಯುದ್ಧದಲ್ಲಿ ಪೆಟ್ಟು ತಿಂದು ಒದ್ದಾಡುತ್ತಿರುವ, ಯುದ್ಧಪೀಡಿತ ಉಕ್ರೇನ್ ದೇಶದ ಕ್ರೀಡಾ ಸಚಿವ ಮತ್ವೀ ಬಿಡ್ನಿ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಈಗ ಕೆಲವು ರಷ್ಯಾ ಮತ್ತು ಬೆಲಾರಸ್ ಕ್ರೀಡಾಪಟು ಭಾಗವಹಿಸುವಿಕೆ ವಿರೋಧಿಸಿ, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉಕ್ರೇನ್ ಭಾಗವಹಿಸಲ್ಲ ಎಂದು ಘೋಷಿಸಿದ್ದಾರೆ. ಮುಂದಿನ ತಿಂಗಳು ಎಂದರೆ ಮಾರ್ಚ್ 6 ರಿಂದ ಇಟಲಿಯಲ್ಲಿ ಶುರುವಾಗುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಮಾರ್ಚ್ 15 ತನಕ ನಡೆಯಲಿದೆ. ಹೀಗಿದ್ದಾಗ ದಿಢೀರ್ ಇಂದು ಉಕ್ರೇನ್ ತನ್ನ ನಿರ್ಧಾರ ಪ್ರಕಟಿಸಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗೇ ಈ ನಿರ್ಧಾರದ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಉಕ್ರೇನ್.

ಉದ್ಘಾಟನಾ ಸಮಾರಂಭಕ್ಕೂ ಹಾಜರ್ ಆಗಲ್ಲ!
ರಷ್ಯಾ & ಬೆಲಾರಸ್ ದೇಶಗಳ ಕ್ರೀಡಾಪಟುಗಳನ್ನು ರಾಷ್ಟ್ರೀಯ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸರಿಯಲ್ಲ. ಪ್ಯಾರಾಲಿಂಪಿಕ್ಸ್ ಆಯೋಜಕರ ಈ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ, ಉಕ್ರೇನ್ ಅಧಿಕಾರಿಗಳು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಹಾಜರಾಗಲ್ಲ ಎಂದು ಕೂಡ ಉಕ್ರೇನ್ ದೇಶದ ಕ್ರೀಡಾ ಸಚಿವ ಮತ್ವೀ ಬಿಡ್ನಿ ಇದೀಗ ಮಾಹಿತಿ ನೀಡಿದ್ದಾರೆ. ಈ ಮೂಲಕ ರಷ್ಯಾ ಹಾಗೂ ಉಕ್ರೇನ್ ಯುದ್ಧ ಇದೀಗ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಮೇಲೆ ಕೂಡ ದೊಡ್ಡದಾದ ಪರಿಣಾಮ ಬೀರಿದೆ. ಉದ್ಘಾಟನಾ ಸಮಾರಂಭ ಸೇರಿದಂತೆ ಕ್ರೀಡಾಕೂಟದ ಎಲ್ಲಾ ಹಂತವನ್ನೂ ಉಕ್ರೇನ್ ಬಹಿಷ್ಕರಿಸಿ ಹೊರ ನಡೆದಿದೆ.
ಜೂನ್ ಒಳಗೆ ಯುದ್ಧ ನಿಲ್ಲುವ ನಿರೀಕ್ಷೆ
ಅಮೆರಿಕ ಮುಂದಾಳತ್ವದಲ್ಲಿ ನಡೆಸುತ್ತಿರುವ ಶಾಂತಿ ಮಾತುಕತೆಯ ಆಧಾರದಲ್ಲಿ ಇದೇ ವರ್ಷದ ಜೂನ್ ತಿಂಗಳ ಒಳಗೆ ಈ ಯುದ್ಧವು ನಿಲ್ಲಲಿದೆಯಂತೆ. ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ರಣಭೀಕರ ಕಾಳಗಕ್ಕೆ 4 ವರ್ಷ ತುಂಬುತ್ತಿದ್ದು, 2022 ಫೆಬ್ರವರಿ 24 ಗುರುವಾರದ ದಿನ ಭೀಕರ ಯುದ್ಧ ಶುರುವಾಗಿತ್ತು. ಕೆಲ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ್ದ ಯುದ್ಧವು ಈಗಾಗಲೇ 4ನೇ ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಪಡೆಯಲು ಸಜ್ಜಾಗಿದೆ. ಆದರೆ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣ ಈವರೆಗೂ ಎರಡೂ ದೇಶಗಳ ನಡೆಯಲ್ಲಿ ಗೋಚರಿಸಿಲ್ಲ. ಬದಲಾಗಿ ಇಬ್ಬರೂ ದಿನದಿಂದ ದಿನಕ್ಕೆ ಬಡಿದಾಟವನ್ನ ಹೆಚ್ಚಿಸುತ್ತಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications